![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 29, 2023, 11:06 PM IST
ಮಂಗಳೂರು: ನಗರದ ರೈಲು ನಿಲ್ದಾಣ ಬಳಿ ಆ. 27ರಂದು ಪ್ರಜ್ಞೆ ತಪ್ಪಿ ಬಿದ್ದಿದ್ದ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ದಪ್ಪ ಮೂಗು ಹೊಂದಿದ್ದು ತಲೆಯಲ್ಲಿ ಸುಮಾರು ಒಂದೂವರೆ ಇಂಚು ಉದ್ದದ ಕಪ್ಪು ಕೂದಲು ಇದೆ. ಎದೆಯ ಮಧ್ಯಭಾಗದಲ್ಲಿ ಹಿಂದಿ ಭಾಷೆಯಲ್ಲಿ ಜೈ ಶ್ರೀರಾಮ್ ಹಾಗೂ ಎಡಗೈಯಲ್ಲಿ ರಾಮ್ ಎಸ್. ಎಂದು ಬರೆಯಲಾಗಿದೆ.
ವಾರಸುದಾರರು ಇದ್ದರೆ ಮಂಗಳೂರು ರೈಲ್ವೇ ಪೊಲೀಸರನ್ನು (0824-2220559) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.