Mangaluru: ತುಂಬೆ ಡ್ಯಾಂ ಗೇಟುಗಳು ಈಗಲೇ ಬಂದ್!
ಮಳೆಗಾಲ ಇನ್ನೂ ಬಾಕಿ ಇದೆ; ಆತಂಕ ಆರಂಭವಾಗಿದೆ !
Team Udayavani, Sep 1, 2023, 11:28 AM IST
ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ನೇತ್ರಾವತಿ ನದಿಯ ತುಂಬೆ ಅಣೆಕಟ್ಟಿನಲ್ಲಿ ಮಳೆಗಾಲದ ಈ ಸಮಯದಲ್ಲಿ ನೀರಿನ ಒಳ ಹರಿವು ಹೆಚ್ಚಿರುವ ಕಾರಣ 7-8 ಅಥವಾ ಅದಕ್ಕಿಂತಲೂ ಹೆಚ್ಚಿನ ಗೇಟ್ಗಳನ್ನು ತೆರೆದಿಡುವುದು ವಾಡಿಕೆ. ಆದರೆ ಈ ಬಾರಿ 30 ಗೇಟ್ಗಳ ಪೈಕಿ ಒಂದನ್ನು ಮಾತ್ರ ತೆರೆದಿಡಲಾಗಿದೆ!
ಪ್ರಸ್ತುತ 5 ಮೀ. ವರೆಗೆ ನೀರು ಸಂಗ್ರಹಿಸಲಾಗಿದೆ. ಮುಂದಿನ ಒಂದು ತಿಂಗಳವರೆಗೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಷ್ಟ ಎನ್ನುತ್ತಾರೆ ಅಧಿಕಾರಿಗಳು. ಹಾಲಿ ಇರುವ ನೀರಿನ ಪ್ರಮಾಣ ಜನವರಿ-ಫೆಬ್ರವರಿ ವರೆಗೆ ಸಾಕಾದೀತು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಹೇಗಿತ್ತು?
ತುಂಬೆಯಲ್ಲಿ ಕಳೆದ ವರ್ಷ ಈ ಸಮಯದಲ್ಲಿ ಸುಮಾರು 6 ಗೇಟ್ಗಳ ಮೂಲಕ ನೀರು ಹೊರ ಹೋಗುತ್ತಿತ್ತು. 4 ಮೀ. ನೀರು ಸಂಗ್ರಹಿಸಲಾಗಿತ್ತು. ಆದರೆ ಈ ಬಾರಿ ಒಳ ಹರಿವು ಕುಸಿದಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೇಲ್ಭಾಗದಲ್ಲಿರುವ ಎಎಂಆರ್ ಸೇರಿದಂತೆ ವಿವಿಧ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುತ್ತಿದ್ದಾರೆ. ಮತ್ತೆ ಮಳೆ ಬಿರುಸಾದರೆ ಮಾತ್ರ ಆತಂಕ ದೂರವಾಗಬಹುದು.
ನದಿಗಳಲ್ಲಿ ತಿಳಿ ನೀರು ಮಳೆಯ ಅಬ್ಬರಕ್ಕೆ ಕೆಂಬಣ್ಣದ ನೀರು ಹರಿಯ ಬೇಕಿದ್ದ ನದಿಗಳಲ್ಲಿ ಸದ್ಯ ಕಾಣುತ್ತಿರುವುದು ಶುಭ್ರವಾದ ತಿಳಿ ನೀರು. ಅಣೆಕಟ್ಟಿನಲ್ಲೂ ಸರೋವರದಂತೆ ಶುಭ್ರ ನೀರಿನ ಸಂಗ್ರಹವಿದೆ. ಸುಮಾರು 10-15 ದಿನಗಳಿಂದ ಜಿಲ್ಲೆಯ ಘಟ್ಟ ಪ್ರದೇಶವೂ ಸೇರಿದಂತೆ ನದಿಪಾತ್ರದ ಎಲ್ಲೂ ಬಿರುಸಿನ ಮಳೆಯೇ ಸುರಿದಿಲ್ಲ.
ಅಡ್ಯಾರ್ ಅಣೆಕಟ್ಟಿನಲ್ಲಿ ನೀರು ಸಂಗ್ರಹವಿಲ್ಲ
ಅಡ್ಯಾರ್- ಹರೇಕಳ ಪಾವೂರು ನಡುವೆ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟಿನ ಎಲ್ಲ ಗೇಟ್ಗಳನ್ನು ತೆಗೆದು ನೀರು ಹೊರಕ್ಕೆ ಹರಿಯಬಿಡಲಾಗುತ್ತಿದೆ. ಇದರಿಂದಾಗಿ ಅಣೆಕಟ್ಟಿನ ಒಳಭಾಗದಲ್ಲಿ ನೀರಿನ ಮಟ್ಟ ಕುಸಿದಿದೆ. ನೀರು ಪೂರೈಕೆಗೆ ಬೇಕಾದ ವ್ಯವಸ್ಥೆ ಮಾಡದಿರುವ ಕಾರಣ ನೀರು ಸಂಗ್ರಹಿಸುತ್ತಿಲ್ಲ ಎನ್ನುವುದು ಅಧಿಕಾರಿಗಳ ಮಾತು.
ಈ ಬಾರಿ ಮಳೆಯ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಈಗಲೇ ಅಂದಾಜಿಸುವುದು ಕಷ್ಟ. ಸದ್ಯ ನದಿಯಲ್ಲಿ ನೀರಿನ ಹರಿ ವಿನ ಪ್ರಮಾಣದ ಮೇಲೆ ನಿಗಾ ಅಗತ್ಯ. ಮುಂದಿನ ದಿನಗಳಲ್ಲಿ ಪಾಲಿಕೆಯು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ, ಮನಪಾ ಮುಖ್ಯ ಸಚೇತಕ
ಇದನ್ನೂ ಓದಿ: BL Santhosh ಮೊದಲು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲಿ: ಜಗದೀಶ ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹಳೆಯ ಹೆಲ್ಮೆಟ್ ಇಟ್ಟು ಹೊಸ ಹೆಲ್ಮೆಟ್ ಕಳವು!
Mangaladevi Temple: ಹೈಕೋರ್ಟ್ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ
Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ
Costal: ಡ್ರಗ್ಸ್ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್ಸಿ ಮಂಜುನಾಥ ಭಂಡಾರಿ
Mangaluru: ಸರಕಾರಿ ಕಾಲೇಜಿನ ಎಂಎಸ್ಡಬ್ಲ್ಯು ವಿದ್ಯಾರ್ಥಿಗಳಿಗೆ ಸಂಕಷ್ಟ
MUST WATCH
ಹೊಸ ಸೇರ್ಪಡೆ
Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ
Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ
Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್ ಕುಮಾರ್ ರೈ
Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!
Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.