Dandeli: ಮಾನಸಿಕ ಅಸ್ವಸ್ಥನಿಗೆ ಆಸರೆಯಾದ ಯುವಕರ ತಂಡ
Team Udayavani, Sep 2, 2023, 1:07 PM IST
ದಾಂಡೇಲಿ: ಮಾನಸಿಕ ಅಸ್ವಸ್ಥ ಹಾಗೂ ನಿರ್ಗತಿಕ ವ್ಯಕ್ತಿಗೆ ಪ್ರತಿದಿನ ಊಟ-ಉಪಹಾರವನ್ನು ನೀಡುತ್ತಾ ಬರುವುದರ ಜೊತೆಗೆ ಅಸ್ವಚ್ಚತೆಯಿಂದ ಗಬ್ಬು ನಾರುತ್ತಿದ್ದ ಆತನ ಮನವೊಲಿಸಿ, ಆತನಿಗೆ ಸ್ನಾನ ಮಾಡಿಸಿ, ಹೊಸಬಟ್ಟೆ ಕೊಡಿಸಿ, ಆತನನ್ನು ಪ್ರೀತಿಯಿಂದ ಉಪಚರಿಸಿ ಯುವಕರ ತಂಡವೊಂದು ಮಾನವೀಯತೆ ಮೆರೆದ ಘಟನೆ ನಡೆದಿದೆ.
ನಗರದ ಅರಣ್ಯ ಪ್ರವಾಸಿ ಮಂದಿರದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಸದಾ ಇರುತ್ತಿದ್ದ ಈತನಿಗೆ ನಗರದ ಲಮಾಣಿ ಚಾಳದ ಯುವಕರ ತಂಡವೊಂದು ಪ್ರತಿದಿನ ಊಟ -ಉಪಹಾರವನ್ನು ಕಳೆದ ಒಂದು ತಿಂಗಳಿನಿಂದ ನೀಡುತ್ತಾ ಬರುತ್ತಿದೆ.
ಅದರ ಜೊತೆಯಲ್ಲಿ ಅಸ್ವಚ್ಚತೆಯಿಂದ ನಾರುತ್ತಿದ್ದ ಆತನ ಮನವೊಲಿಸಿ ಆತನಿಗೆ ಸ್ನಾನ ಮಾಡಿಸಿ, ಸೆಲೂನಿಗೆ ಕರೆದುಕೊಂಡು ಹೋಗಿ ಅಲ್ಲಿ ಬೆಳೆದು ನಿಂತಿದ್ದ ತಲೆಗೂದಲನ್ನು ಕತ್ತರಿಸಿ, ಆನಂತರ ಪುನ: ನದಿಗೆ ಕರೆದೊಯ್ದು ಸ್ನಾನ ಮಾಡಿಸಿ, ಹೊಸ ಬಟ್ಟೆಯನ್ನು ತೊಡಿಸಿ ಆತನಿದ್ದಲ್ಲಿಗೆ ಕರೆದುಕೊಂಡು ಎಂದಿನಂತೆ ಊಟವನ್ನು ನೀಡಿ, ನಿನ್ನ ಜೊತೆ ನಾವಿದ್ದೇವೆ ಎಂಬ ಭರವಸೆಯ ಬೆಳಕಾಗಿ ಲಮಾಣಿ ಚಾಳದ ಯುವಕರು ಮಾಡಿದ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಮಾನವೀಯ ಕಾರ್ಯದಲ್ಲಿ ಮಾಜಿ ನಗರ ಸಭಾ ಸದಸ್ಯರಾದ ಮಂಜು ರಾಥೋಡ್ ಅವರ ನೇತೃತ್ವದಲ್ಲಿ ಇರ್ಫಾನ್ ದಪೇದಾರ್, ಯಾಸೀನ್ ಹೆಬ್ಬಳ್ಳಿ, ವಿನಾಯಕ್ ಲಮಾಣಿ, ಹಸನ್ ಬೇಗ್, ಹುಸೇನ್ ಬೇಗ್, ನಿಶಾಂತ್ ಮಹಾಲೆ, ಅಬ್ದುಲ್, ರೋಹಿತ್ ಮೊದಲಾದವರು ಈ ಮಾನವೀಯ ಕಾರ್ಯದ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.