‘ಅಕ್ಷರಾ’ ಹಿಂದೆ ಬಿದ್ದ ಭುವನ್ ಚಂದ್ರ
Team Udayavani, Sep 2, 2023, 6:57 PM IST
“ಅಕ್ಷರಾ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಆರಂಭವಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಪ್ರತಾಪ್ ನಾರಾಯಣ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಭುವನ್ ಚಂದ್ರ ನಾಯಕರಾಗಿರುವ ಈ ಚಿತ್ರವನ್ನು ಕಿಶೋರ್ ಕುಮಾರ್ ನಿರ್ಮಿಸಿದ್ದಾರೆ. ಎಸ್. ನರೇಂದ್ರ ಬಾಬು ಚಿತ್ರದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಭುವನ್ ಚಂದ್ರ, “ನಾನು ಹೀರೋ ಆಗಿಲಾಂಚ್ ಆಗಿದ್ದು ಕಿಡಿ ಎಂಬ ಸಿನಿಮಾದಿಂದ. ಅದು ಕೋವಿಡ್ಗೂ ಮುನ್ನ. ಅದಾದ ಮೇಲೆ ಬಂದ ಒಳ್ಳೆಯ ಅವಕಾಶ “ಅಕ್ಷರಾ’. ಇದೊಂದು ನೈಜ ಘಟನೆಯನ್ನೇ ಇಟ್ಟುಕೊಂಡು ಮಾಡಿರುವಂತ ಸಿನಿಮಾ. ನರಬಲಿ ಅನ್ನೋದು ಈಗಲೂ ನಡೀತಾ ಇದೆ ಅನ್ನೋದು ತುಂಬಾ ಬೇಸರದ ಸಂಗತಿ. ಇಷ್ಟೆಲ್ಲಾ ಯಾಕೆ ಹೇಳಿದೆ ಅನ್ನೋದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ’ ಎಂದರು.
ನಿರ್ಮಾಪಕ ಕಿಶೋರ್ ಕುಮಾರ್ ತಮ್ಮ ಸಿನಿಮಾ ಕನಸಿನ ಬಗ್ಗೆ ಮಾತನಾಡಿದರು. ಭುವನ್ ಚಂದ್ರಗೆ ನಾಯಕಿಯಾಗಿ ಅಲ್ಮಾಸ್ ಮೋಟಿವಾಲ ನಟಿಸಿದ್ದು, ಉಳಿದಂತೆ ರಮೇಶ್ ಪಂಡಿತ್, ಭಜರಂಗಿ ಪ್ರಸನ್ನ, ರಾಜ್ ಉದಯ್, ಕಿಶೋರ್ ಕುಮಾರ್ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.