![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 2, 2023, 10:36 PM IST
ರಿಪ್ಪನ್ಪೇಟೆ: ಶಾಲಾ ಬಾಲಕನೊಬ್ಬನ ಬ್ಯಾಗಲ್ಲಿ ನಾಗರಹಾವೊಂದು ಪ್ರತ್ಯಕ್ಷವಾದ ಘಟನೆ ಶಿವಮೊಗ್ಗ ಜಿಲ್ಲೆ ರಿಪ್ಪನ್ಪೇಟೆ ಸಮೀಪದ ಬಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಎರಡನೇ ತರಗತಿಯ ಭುವನ್ ಎಂಬ ವಿದ್ಯಾರ್ಥಿಯ ಬ್ಯಾಗ್ನಲ್ಲಿ ನಾಗರಹಾವು ಕಂಡಿದ್ದು, ಈತ ಹಾಗೂ ಸಹಪಾಠಿ ಸಮಯಪ್ರಜ್ಞೆ ಮೆರೆದು ಹಾವು ಬ್ಯಾಗ್ನಿಂದ ಹೊರಬರದಂತೆ ನೋಡಿಕೊಂಡರು. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಾಗ ನಲಿ-ಕಲಿ ತರಗತಿಯ ಶಿಕ್ಷಕರು ಪಾಠ ಓದಲು ಬ್ಯಾಗ್ನಿಂದ ಪುಸ್ತಕ ತಗೆಯುವಂತೆ ಸೂಚಿಸಿ ಮಕ್ಕಳ ಹಾಜರಾತಿ ಪಡೆಯುತ್ತಿದ್ದರು. ಭುವನ್ ಪುಸ್ತಕ ಹೊರತೆಗೆದಾಗ ಖಾಲಿ ಬ್ಯಾಗ್ನಲ್ಲಿ ಮಲಗಿದ್ದ ಹಾವನ್ನು ಕಂಡಿದ್ದಾನೆ. ಕೂಡಲೇ ಈತ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಆರ್. ಮಣಿಕಂಠನಿಗೆ ಹಾವನ್ನು ತೋರಿಸಿದ್ದಾನೆ. ಆತನೂ ಹಾವನ್ನು ಕಂಡ ಕೂಜಲೇ ಬ್ಯಾಗ್ನ ಜಿಪ್ ಎಳೆದು ಶಿಕ್ಷಕರಿಗೆ ವಿಷಯ ತಿಳಿಸಿದರು. ಕೂಡಲೇ ಶಿಕ್ಷಕರು ಬ್ಯಾಗನ್ನು ಕೊಠಡಿಯಿಂದ ಹೊರತಂದು ನೋಡಿದಾಗ ಅದರಲ್ಲಿ ನಾಗರಹಾವು ಇರುವುದು ಕಂಡು ಬಂತು.
ಬಳಿಕ ಭುವನ್ ಮನೆಯವರನ್ನು ಕರೆಸಿ ಹಾವನ್ನು ಸಮೀಪದ ಕಾಡಿಗೆ ಬಿಟ್ಟು ಬರಲಾಯಿತು. ಬ್ಯಾಗ್ನೊಳಗೆ ಹಾವು ಸೇರಿದ್ದು ಹೇಗಿ ಎಂಬುದು ಗೊತ್ತಾಗಿಲ್ಲ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.