![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 3, 2023, 11:53 AM IST
ಮುಂಬೈ: ಏಕದಿನ ವಿಶ್ವಕಪ್ ಗೆ ಸಿದ್ದತೆ ನಡೆಸುತ್ತಿರುವ ಭಾರತ ತಂಡವು ಸದ್ಯ ಏಷ್ಯಾಕಪ್ ಆಡುತ್ತಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಕಾಂಟಿನೆಂಟಲ್ ಕೂಟದ ಭಾರತದ ಮೊದಲ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ. ಇದೇ ವೇಳೆ ಇಂದು (ಸೆ.03) ಭಾರತದ ವಿಶ್ವಕಪ್ ತಂಡ ಪ್ರಕಟವಾಗುವ ಸಾಧ್ಯತೆಯಿದೆ.
ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ತಂಡದ ನಾಯಕ ಮತ್ತು ಕೋಚ್ ಜತೆ ಸಮಾಲೋಚನೆ ನಡೆಸಲು ಶ್ರೀಲಂಕಾಗೆ ತೆರಳಿದ್ದಾರೆ. ಸದ್ಯ ತಂಡವು ಬಹುತೇಕ ಅಂತಿಮವಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಅಗರ್ಕರ್ ಅವರು ಏಷ್ಯಾ ಕಪ್ ಗೆ ಭಾರತೀಯ ತಂಡವನ್ನು ಘೋಷಿಸಿದಾಗ, ವಿಶ್ವಕಪ್ ತಂಡವು ಇದೇ ರೀತಿಯಲ್ಲಿರುತ್ತದೆ ಎಂದು ಸಲಹೆ ನೀಡಿದರು. ಆದಾಗ್ಯೂ, ಏಷ್ಯಾ ಕಪ್ ತಂಡವು 17-ಸದಸ್ಯರ ಘಟಕವಾಗಿದ್ದು, ರಾಹುಲ್ ಗೆ ಬ್ಯಾಕಪ್ ಆಗಿ ಸ್ಯಾಮ್ಸನ್ ರನ್ನು ಸೇರಿಸಲಾಗಿತ್ತು. ವಿಶ್ವಕಪ್ ತಂಡವು ಕೇವಲ 15 ಆಟಗಾರರನ್ನು ಒಳಗೊಂಡಿರುವುದರಿಂದ, ಮುಖ್ಯ ತಂಡದಿಂದ 2 ಸದಸ್ಯರನ್ನು ತೆಗೆದು ಹಾಕಬೇಕಾಗಿದೆ.
ಇದನ್ನೂ ಓದಿ:Malpe: ಮೀನಿನ ವಿಷಾನಿಲದಿಂದಾಗಿ ಈಶ್ವರ್ ಮಲ್ಪೆ ಸೇರಿ ಇಬ್ಬರು ಅಸ್ವಸ್ಥ
ಏಷ್ಯಾ ಕಪ್ ತಂಡದಲ್ಲಿದ್ದು ವಿಶ್ವಕಪ್ ನಿಂದ ಹೊರಬೀಳಲಿರುವ ಇಬ್ಬರು ಸದಸ್ಯರೆಂದರೆ ಪ್ರಸಿಧ್ ಕೃಷ್ಣ ಮತ್ತು ತಿಲಕ್ ವರ್ಮಾ ಎಂದು ವರದಿ ಹೇಳಿದೆ. ತಿಲಕ್ ವರ್ಮಾ ಅವರು ಏಷ್ಯಾಕಪ್ ಗಾಗಿ ಮೊದಲ ಬಾರಿ ಏಕದಿನ ತಂಡಕ್ಕೆ ಕರೆ ಪಡೆದಿದ್ದರು. ಶಸ್ತ್ರಚಿಕಿತ್ಸೆಯಿಂದ ಚೇತರಿಕೆ ಕಂಡ ಬಳಿಕ ಮೊದಲ ಬಾರಿ ಕೃಷ್ಣ ತಂಡಕ್ಕೆ ಮರಳಿದ್ದರು.
ಸ್ಯಾಮ್ಸನ್ ಔಟ್- ರಾಹುಲ್ ಇನ್
ಎನ್ ಡಿಟಿವಿ ವರದಿ ಪ್ರಕಾರ ಟೀಂ ಇಂಡಿಯಾದ ವಿಕೆಟ್ ಕೀಪರ್ ಗಳಾಗಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರನ್ನು ವಿಶ್ವಕಪ್ ಗೆ ಸೇರಿಸಲಾಗಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಹಿಂದಿರುಗಿದ ಆಟಗಾರರಲ್ಲಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಮೂವರೂ ವಿಶ್ವಕಪ್ ಗಾಗಿ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
ಏಷ್ಯಾ ಕಪ್ ನಲ್ಲಿ ಸ್ಥಾನ ಪಡೆಯದ ಯುಜುವೇಂದ್ರ ಚಾಹಲ್ ಅವರನ್ನು ವಿಶ್ವಕಪ್ ನಲ್ಲೂ ಕೈಬಿಡಲಾಗಿದೆ. ಏಕದಿನ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಸ್ಥಾನ ಉಳಿಸಿಕೊಳ್ಳಲು ಸಫಲರಾಗಿದ್ದಾರೆ ಎಂದು ವರದಿಯಾಗಿದೆ.
ಭಾರತದ ಸಂಭಾವ್ಯ ವಿಶ್ವಕಪ್ 2023 ತಂಡ: ರೋಹಿತ್ ಶರ್ಮಾ (ನಾ), ಹಾರ್ದಿಕ್ ಪಾಂಡ್ಯ (ಉ.ನಾ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿ.ಕೀ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿ.ಕೀ), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.