Panaji: ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದು ಪ್ರಯಾಣಿಕರ ಪರದಾಟ
Team Udayavani, Sep 6, 2023, 2:15 PM IST
ಪಣಜಿ: ಗೋವಾದ ಚೋಡನ್ ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದಿದ್ದರಿಂದ ಅನೇಕ ಪ್ರಯಾಣಿಕರು ತಮ್ಮ ಕಾರು ಮತ್ತು ಬೈಕ್ಗಳೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಬಾರ್ಜ್ ನಲ್ಲಿ ಸಿಲುಕಿಕೊಂಡ ಘಟನೆ ಸೆ.5ರ ಮಂಗಳವಾರ ನಡೆದಿದೆ.
ಈ ಬಾರ್ಜ್ ನಲ್ಲಿ ಎರಡು ದೊಡ್ಡ ವಾಹನಗಳು ಮತ್ತು ಕನಿಷ್ಠ ಏಳರಿಂದ ಎಂಟು ದ್ವಿಚಕ್ರ ವಾಹನಗಳಿದ್ದವು.
ಘಟನೆ ಕುರಿತು ಹಲವು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಕ್ರೇನ್ ಬರುವವರೆಗೆ ಪ್ರಯಾಣಿಕರು ತಮ್ಮ ಕಾರುಗಳೊಂದಿಗೆ ಅಲ್ಲಿಯೇ ಇರುವಂತಾಯಿತು.
ಬಾರ್ಜ್ ನ ಮುಂಭಾಗದ ತಗಡು ಮುರಿದು ಬಿದ್ದಿದ್ದರಿಂದ ಬಾರ್ಜ್ ನಲ್ಲಿದ್ದ ಪ್ರಯಾಣಿಕರು ದಡಕ್ಕೆ ಬರಲು ಸಾಧ್ಯವಾಗದೆ ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿರುವಂತಾಯಿತು.
ಅದಲ್ಲದೆ, ಈ ದೋಣಿಯು ದುರಸ್ತಿಯಾಗುವವರೆಗೆ ದಡಕ್ಕೆ ಬರಲು ಸಾಧ್ಯವಿರಲಿಲ್ಲ. ಈ ಒಂದು ದೋಣಿ ದುರಸ್ತಿಯಾಗುವವರೆಗೂ ನಿರುಪಯುಕ್ತ ಎನಿಸುತ್ತಿದೆ. ಆದ್ದರಿಂದ, ಇತರ ದೋಣಿಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ದೋಣಿ ಮೂಲಕ ನದಿ ದಾಟಲು ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನೆ ಕುರಿತು ಮಾತನಾಡಿದ ಸ್ಥಳೀಯ ಅಶ್ವಿನ್ ಚೋಡಂಕರ್, ಶಾಸಕರು ಈ ಬಗ್ಗೆ ಗಮನಹರಿಸಬೇಕಿದೆ. ರಾತ್ರಿ ಒಂಬತ್ತು ಅಥವಾ ಹತ್ತು ಗಂಟೆಯ ನಂತರ ಬಾರ್ಜ್ ನಲ್ಲಿ ಪಾರ್ಟಿಗಳು ನಡೆಯುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.