G-20: ಭಾರತ ಸರಕಾರವು ನೈಜ ಚಿತ್ರಣವನ್ನು ಮರೆಮಾಚುತ್ತಿದೆ: ರಾಹುಲ್ ಗಾಂಧಿ
Team Udayavani, Sep 9, 2023, 11:47 PM IST
ಹೊಸದಿಲ್ಲಿ: “ಜಿ20 ರಾಷ್ಟ್ರಗಳ ಅತಿಥಿಗಳ ಎದುರು ಭಾರತ ಸರಕಾರವು ದೇಶದ ನೈಜ ಚಿತ್ರಣವನ್ನು ಮರೆಮಾಚುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ನಮ್ಮ ಬಡವರು ಮತ್ತು ಪ್ರಾಣಿಗಳನ್ನು ಭಾರತ ಸರಕಾರವು ಮರೆಮಾಚುತ್ತಿದೆ. ನಮ್ಮ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳ ಎದುರು ಭಾರತದ ನೈಜ ಚಿತ್ರಣವನ್ನು ಮರೆಮಾಚುವ ಅಗತ್ಯವಿಲ್ಲ’ ಎಂದು ಐರೋಪ್ಯ ಒಕ್ಕೂಟದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಜಿ20 ರಾಷ್ಟ್ರಗಳ ಪ್ರತಿನಿಧಿಗಳು ದಿಲ್ಲಿಯ ರಾಜ್ಘಾಟ್ದಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿರುವ ಬೀದಿ ನಾಯಿ ಗಳು, ಕೋತಿಗಳನ್ನು ಹಿಡಿಯಲು ದಿಲ್ಲಿ ಪೊಲೀಸರು ಶುಕ್ರವಾರ ನಾಗರಿಕ ಸಂಸ್ಥೆಗಳ ಸಹಕಾರ ಪಡೆದಿತ್ತು. ವರದಿಗಳ ಪ್ರಕಾರ, ಪೊಲೀಸರು ಸುತ್ತಮುತ್ತಲಿನ ಸ್ಲಮ್ಗಳನ್ನು ತೆರವು ಗೊಳಿಸಿದರು. ಸಂಸ್ಥೆಗಳ ಸಹಾಯದಿಂದ ಹಾವು, ಬೀದಿ ನಾಯಿಗಳು, ಕೋತಿಗಳನ್ನು ಹಿಡಿಯಲು ಸಿಬಂದಿಯನ್ನು ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.