UV Fusion: ರೈತರ ಬದುಕನ್ನು ಅರಿತು ಗೌರವಿಸಿ


Team Udayavani, Sep 10, 2023, 3:37 PM IST

16-uv-fusion

ಭಾರತವು ಕೃಷಿಯಾಧಾರಿತ ದೇಶ.ಇಲ್ಲಿ ರೈತರೇ ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರಕ್ಕೆ ಬಂದಾಗ, ಕೃಷಿಯು ಭಾರತದ ಅಭಿವೃದ್ಧಿಗೆ ಪ್ರಮುಖ ಕ್ಷೇತ್ರವಾಗಿದೆ. ಜೈ ಜವಾನ್‌,ಜೈ ಕಿಸಾನ್‌ ಎಂಬ ಮಾತಿದೆ. . ರೈತರು ಆಹಾರ ಧಾನ್ಯಗಳನ್ನು ದೇಶದ ಪ್ರತೀ ಜೀವಸಂಕುಲಕ್ಕೆ ನೀಡುವ ಮೂಲಕ ಎಲ್ಲಾ ವರ್ಗದವರ ಬದುಕಿಗೆ ಸೇವೆ ನೀಡುತ್ತಿದ್ದಾರೆ. ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೆ ಆಹಾರ ಧಾನ್ಯ ಕೊಡುವವರು, ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಸರಕುಗಳನ್ನು ಉತ್ಪಾದಿಸುವ ಕಾರ್ಮಿಕರಿಗೂ ಕೂಡ ಆಹಾರವನ್ನು ನೀಡುವವರು ರೈತರು.

ನಮಗೆ ತಿಳಿದಿರುವಂತೆ ಭಾರತವು ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ ಆದ್ದರಿಂದ ದೇಶದ ಒಟ್ಟಾರೆ ಆರ್ಥಿಕತೆಯು ರೈತನ ಮೇಲೆ ಅವಲಂಬಿತವಾಗಿದೆ ಮತ್ತು ರೈತನನ್ನು ವಿಶ್ವದ ಅತ್ಯಂತ ಶ್ರಮಜೀವಿ ಎಂದು ಪರಿಗಣಿಸಲಾಗಿದೆ. ಕೆಲ ರೈತರಿಗೆ ಕೃಷಿ ತಂತ್ರಜ್ಞಾನದ ಬಳಕೆ ಗೊತ್ತಿಲ್ಲ, ಬರೀ ಸಾಂಪ್ರದಾಯಿಕ ವಿಧಾನಗಳಿಂದ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಾರೆ.ಸಮಾಜದ ಹಾಗೂ ದೇಶದ ಅಭಿವೃದ್ಧಿಗೆ ಸವೆಸುತ್ತಾ ಬದುಕುತ್ತಿದ್ದಾನೆ. ಎಲ್ಲರಿಗೂ ಅನ್ನ ನೀಡುವ ರೈತ ಹಸಿವಿನಿಂದ ಬಳಲುತ್ತಿದ್ದಾನೆ, ಬಡತನದಿಂದ ಮೇಲೇಳಲು ಸಾಧ್ಯವೇ ಇಲ್ಲದಂತಹ ವಾತಾವರಣದಲ್ಲಿ ಬದುಕುತ್ತಿದ್ದಾನೆ.

ರೈತನ ಕೃಷಿ ಸಂಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ, ಆಗಾಗ್ಗೆ ಬರುವ ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆದ ಬೆಳೆಗಳಿಗೆ ಹಾನಿಯಾಗಿ, ಪ್ರವಾಹಕ್ಕೆ ಸಿಲುಕಿ ಬೆಳೆಗಳು ಕೊಚ್ಚಿ ಹೋಗುವುದು ಒಂದೆಡೆಯಾದರೆ ಮಂಗಗಳು, ಕ್ರಿಮಿಕೀಟಗಳಿಂದ ಹಾನಿ, ಬೆಳೆದ ಬೆಳೆಯನ್ನು ಮನೆಗೆ ಅಥವಾ ಮಾರುಕಟ್ಟೆಗೆ ತಲುಪಿಸುವುದರಲ್ಲಿಯೇ ರೈತನು ಹಲವಾರು ಶತ್ರುಗಳನ್ನು ಕಾಣುತ್ತಾನೆ. ಬೆಳೆ ಬರುವ ಮುಂಚೆ ಒಂದು ತೊಂದರೆಯಾದರೆ ಬೆಳೆ ಬಂದ ನಂತರ ಮತ್ತೂಂದು ಬಗೆಯ ತೊಂದರೆ ಎದುರಾಗುತ್ತದೆ, ಬೆಳೆ ಕೈಗೆ ಬಂದಾಗ ಮಧ್ಯವರ್ತಿಗಳಿಂದ ರೈತರಿಗೆ ವಂಚನೆ ಮಾಡುವ ದಂಧೆ ಶುರುವಾಗುತ್ತದೆ. ರೈತರು ಕಷ್ಟಪಟ್ಟು ದುಡಿದ ಆಹಾರ ಧಾನ್ಯಗಳಿಗೆ ಯೋಗ್ಯವಾದ ಬೆಲೆ ದೊರೆಯದೇ ಬಹಳ ಅಗ್ಗದ ಬೆಲೆ ನಿಗದಿಪಡಿಸುವುದು ಮತ್ತು ರೈತರಿಗೆ ವರ್ತಕರು ಇಲ್ಲಸಲ್ಲದ ಮಾಹಿತಿ ನೀಡಿ ಅವರನ್ನು ದಾರಿ ತಪ್ಪಿಸುವುದಾಗಿದೆ. ಇತರ ದೇಶಗಳಿಗೆ ಹೋಲಿಸಿದಾಗ ಭಾರತೀಯ ರೈತರು ಸಾಂಪ್ರದಾಯಿಕ ಕೃಷಿಯಲ್ಲಿ ಹೆಕ್ಟೆರ್‌ ಗೆ ಕಡಿಮೆ ಇಳುವರಿ ಬೆಳೆಯುತ್ತಾರೆ ಹಾಗಾಗಿ ಆಧುನಿಕ ವೈಜ್ಞಾನಿಕ ಯುಗದಲ್ಲಿ ಹೊಸ ಆವಿಷ್ಕಾರಗಳು ಕೃಷಿ ಕ್ಷೇತ್ರದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುತ್ತಿದ್ದು ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಿ ಹೊಸ ಹೊಸ ಆವಿಷ್ಕಾರಗಳನ್ನು ಪದ್ಧತಿಗಳನ್ನು ಬಳಸುವಂತೆ ರೈತರಿಗೆ ಮನವೊಲಿಸಬೇಕು ಅದು ಸರ್ಕಾರದ ಕರ್ತವ್ಯವೂ ಹೌದು. ಏಕೆಂದರೆ ದೇಶದ ಶೇ.58ರಷ್ಟು ಉದ್ಯೋಗಿಗಳನ್ನು ಕೃಷಿ ಹೊಂದಿದೆ ಹಾಗೂ ದೇಶದ ಜಿಡಿಪಿ ಗೆ ಶೇ.15ರಷ್ಟು ಕೊಡುಗೆ ನೀಡುತ್ತಿದೆ.

ಆದ್ದರಿಂದ ರೈತರ ಬದುಕನ್ನು ಹಸನಗೊಳಿಸುವಂತಹ ಹಲವಾರು ಯೋಜನೆಗಳು ಕೇಂದ್ರ, ರಾಜ್ಯ ಸರ್ಕಾರಗಳಿಂದಾಗಬೇಕು. ರೈತರನ್ನು ಮುನ್ನೆಲೆಗೆ ತರುವಂತಹ, ಕೃಷಿಯಲ್ಲಿ ಯುವಕರನ್ನು ಭಾಗಿಯಾಗಿಸುವಂತಹ ಅವಕಾಶಗಳನ್ನು ನೀಡುವಂತಾಗಬೇಕು. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ನಿಗದಿಪಡಿಸಬೇಕು, ಬೆಳೆದ ಬೆಳೆಗಳನ್ನು ಕೋಲ್ಡ್‌ ಸ್ಟೋರೇಜ್‌ ಮತ್ತು ಉಗ್ರಾಣಗಳಲ್ಲಿ ಶೇಖರಿಸಿ ಬೆಲೆ ಬಂದ ನಂತರ ಮಾರುವಂತಹ ಯೋಜನೆ ತರಬೇಕು, ರೈತರನ್ನು ಮಧ್ಯವರ್ತಿಗಳಿಂದ ತಪ್ಪಿಸಬೇಕು,ಮಾರುಕಟ್ಟೆಯ ವೆಚ್ಚವನ್ನು ತಗ್ಗಿಸಿ ರೈತರ ಆದಾಯವನ್ನು ಹೆಚ್ಚಿಸಬೇಕು, ಕೃಷಿಯಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರಿಗೆ ಸರ್ಕಾರದಿಂದ ಬೆಂಬಲ ನೀಡಬೇಕು, ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿರ್ಧರಿಸುವ ಸಂಪೂರ್ಣ ಅಧಿಕಾರ ಹೊಂದಬೇಕು, ಬಿತ್ತನೆಯ ಮುಂಚೆಯೇ ರೈತರಿಗೆ ತಮ್ಮ ಬೆಳೆಯ ಬೆಲೆ ತಿಳಿಯುವಂತಾಗಬೇಕು, ಉತ್ಪಾದನೆಗಳ ಮಾರಾಟಕ್ಕೆ ಯಾವುದೇ ಲೇವಿಯನ್ನಾಗಲಿ, ಸಾರಿಗೆ ವೆಚ್ಚವನ್ನಾಗಲಿ ಪಾವತಿಸುವಂತಾಗಬಾರದು.

ಕಷ್ಟಪಡುತ್ತಿರುವ ರೈತರಿಗೆ ಬ್ಯಾಂಕುಗಳಿಂದ ಅತೀ ಕಡಿಮೆ ಬಡ್ಡಿದರದಲ್ಲಿ ಅಥವಾ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಬೇಕು, ರೈತರು ಬೆಳೆದ ಹಾಗೂ ರೈತರೇ ನೇರವಾಗಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಚೌಕಾಸಿ ಮಾಡಿ ಕೊಂಡುಕೊಳ್ಳುವ ಮನಸ್ಥಿತಿ ಜನರಲ್ಲಿ ಬದಲಾಗಬೇಕು, ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಸರ್ಕಾರಗಳು ರೈತನಿಗೆ ಬೆಂಬಲ ನೀಡಿ ರೈತರನ್ನು ಮೇಲೇತ್ತುವಂತಹ ಕಾರ್ಯ ಮಾಡಬೇಕಿದೆ ಮತ್ತು ರೈತರಿಗೆ ಯಾವುದೇ ರೀತಿಯಿಂದ ಅವರ ಬದುಕಿಗೆ, ಅವರು ಬೆಳೆದ ಬೆಳೆಗೆ ಸಿಗುವ ಬೆಲೆ ಕೀಳುಮಟ್ಟದ್ದಾಗಿರದಂತೆ ನೋಡಿಕೊಳ್ಳಬೇಕಿದೆ ಯಾಕೆಂದರೇ ರೈತರು ಅತೀ ಮುಗ್ಧರಾಗಿದ್ದು ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತಾರಾಗಿದ್ದಾರೆ.

ಅವರ ನಂಬಿಕೆಗೆ ದ್ರೋಹ ಮಾಡುವಂತಹ ಯಾವುದೇ ಯೋಜನೆಗಳು ಸರ್ಕಾರದಿಂದ ಹೊರಡಿಸದಿರಲಿ, ಪ್ರತೀ ಕೃಷಿ ಯೋಜನೆಗಳು ರೈತರ ಹಿತದೃಷ್ಟಿಯಿಂದ ಕೂಡಿರಲಿ, ರಾಷ್ಟ್ರದ ಪ್ರತೀ ನಾಯಕನಿಗೆ ಸಿಗುವ ಗೌರವ ಮತ್ತು ಪ್ರಾತಿನಿಧ್ಯ ರೈತನಿಗೂ ದೊರೆಯುವಂತಹ ವಾತಾವರಣ ಸೃಷ್ಟಿಯಾಗಲಿ, ರೈತನೇ ದೇಶದ ಬೆನ್ನೆಲುಬು ಎಂಬುದು ಬರೀ ಭಾಷಣದಲ್ಲಿರದೆ ಪ್ರತೀ ಮನಮನಗಳ ಭಾವದಲ್ಲಿ, ಪ್ರತೀ ನಾಲಿಗೆಯ ತುದಿಯಲ್ಲಿರಲಿ, ಬಾಹ್ಯವಾಗಿರದೆ ಆಂತರಿಕ ಹೃದಯದಲ್ಲಿರಲಿ.

ಪ್ರತಿಯೊಬ್ಬ ರೈತನು ಕೃಷಿ ಚಟುವಟಿಕೆಗಳಿಂದ ಬೇಸತ್ತು, ಸಾಲಭಾದೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸುವಂತಹ ಬಹುದೊಡ್ಡ ಕಾರ್ಯ ಸರ್ಕಾರದ್ದಾಗಿರಲಿ, ಪ್ರತೀ ರೈತನು ಆರಾಮವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ, ಹಾಗೂ ವಿದ್ಯಾವಂತರೆಲ್ಲರೂ ಸಾಧ್ಯವಾದಷ್ಟು ಅನಕ್ಷರಸ್ಥ ರೈತರಿಗೆ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ರೈತರಿಗೆ ಗೌರವ ನೀಡುವುದು ನಮ್ಮ ನಮ್ಮ ಮನೆಯಿಂದಲೇ ಶುರುವಾಗುವಂತಹ ವಾತಾವರಣವನ್ನು ನಾವು ನೀವೆಲ್ಲರೂ ಸೃಷ್ಟಿ ಮಾಡಬೇಕಿದೆ, ರೈತನೇ ನಮ್ಮೆಲ್ಲರ ಭವಿಷ್ಯವನ್ನು ನಿರ್ಧರಿಸುವ ನಿರ್ಮಾಪಕರು ಎಂಬುದನ್ನು ನಾವು ಅರಿಯಬೇಕಿದೆ.

 ಹನುಮಂತ ದಾಸರ,

ಧಾರವಾಡ

ಟಾಪ್ ನ್ಯೂಸ್

3-BIGG-BOSS

BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

ISREL

Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-uv-fusion

The Sound of Music: ದಿ ಸೌಂಡ್‌ ಆಫ್ ಮ್ಯೂಸಿಕ್‌

11-uv-fusion

UV Fusion: ಕನಸಿನ ಬೆನ್ನು ಹತ್ತಿ

5

UV Fusion: ಹೊಸ ಕನಸಿಗೆ ಮೊದಲ ಹೆಜ್ಜೆ

4

UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು

3-uv-fusion

UV Fusion: ಅಮ್ಮನ ಬೀಡಿಸೂಪಿನೆಡೆಯಿಂದ…

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3-BIGG-BOSS

BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

ISREL

Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.