Malpe ಕಡಲತೀರಕ್ಕೆ ಪ್ರವಾಸಿಗರ ಲಗ್ಗೆ: ನಿಷೇಧ ತೆರವಿನ ನಿರೀಕ್ಷೆ?
Team Udayavani, Sep 10, 2023, 10:53 PM IST
ಮಲ್ಪೆ: ಪ್ರವಾಸಿಗರ ಹಾಟ್ ಸ್ಪಾಟ್ ಎಂದು ಕರೆಸಿಕೊಳ್ಳುವ ಮಲ್ಪೆ ಬೀಚ್ಗೆ ಮಳೆಗಾಲದಲ್ಲೂ ಪ್ರವಾಸಿಗರು ಅಗಮಿಸುತ್ತಿದ್ದು ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನದಟ್ಟಣೆ ಕಂಡು ಬರುತ್ತಿದೆ. ಸೆಪ್ಟಂಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬ ಹರಿದಿನಗಳಿಂದಾಗಿ ಸರಣಿ ರಜೆಗಳು ಬರುವ ಕಾರಣ ಕಡಲತೀರಕ್ಕೆ ಹೆಚ್ಚು ಜನರು ಲಗ್ಗೆ ಇಡುತ್ತಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಎರಡು ದಿನ ಕಡಲತೀರದಲ್ಲಿ ಜನಸಾಗರೇ ಸೇರಿತ್ತು.
ಪ್ರವಾಸಿಗರಿಗೆ ನಿರಾಶೆ
ಮಲ್ಪೆ ಬೀಚ್, ಸೈಂಟ್ಮೇರಿ ದ್ವೀಪದಲ್ಲಿ ನೀರಿಗಿಳಿಯಲು, ವಾಟರ್ ನ್ಪೋರ್ಟ್ಸ್ಗಳನ್ನು ಆನುಭವಿಸಲು ನಿಷೇಧ ಜಾರಿಯಲ್ಲಿದೆ. ಇದರಿಂದಾಗಿ ರಜೆ ಹಾಕಿ ಬರುವ ಪ್ರವಾಸಿಗರು ಬೀಚ್ನಲ್ಲಿ ಸಂಭ್ರಮಿಸಲು ಸಾಧ್ಯವಾಗದೆ ನಿರಾಶರಾಗಿ ಹಿಂದಿರುಗುತ್ತಿದ್ದಾರೆ.
ಜಲಸಾಹಸ, ನೀರಿನಲ್ಲಿ ಆಟವಾಡಿ ಸಂಭ್ರಮ ಮಾಡಲೆಂದು ನಾವು ಬೆಂಗಳೂರಿನಿಂದ ಮಲ್ಪೆ ಬೀಚ್ ಕಡೆ ಬಂದಿದ್ದೆವು. ನಿಷೇಧ ತೆರವಾಗಿದೆ ಅಂದು ಕೊಂಡಿದ್ದೆವು. ಇಲ್ಲಿಗೆ ಬಂದಾಗ ನಿರಾಶೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಬೆಂಗಳೂರಿನ ರಶ್ಮಿ.
ಸೆ. 15ರ ವರೆಗೂ ನಿಷೇಧ ?
ಮಳೆಗಾಲದಲ್ಲಿ ಕಡಲು ಪ್ರಕ್ಷಬ್ಧ ವಾಗಿರುವ ಕಾರಣ ಜಿಲ್ಲಾಡಳಿತದ ಆದೇಶದಂತೆ ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ವಾಟರ್ ನ್ಪೋಟ್ಸ್, ಸೈಂಟ್ಮೆರೀಸ್ ಪ್ರವೇಶಕ್ಕೆ ನಿಷೇಧವಿದೆ. ಬೀಚ್ ಅಭಿವೃದ್ದಿ ಸಮಿತಿಯ ವತಿಯಿಂದ ನೀರಿಗೆ ಇಳಿಯದಂತೆ ಕಡಲತೀರದಲ್ಲಿ ನೆಟ್ ಅಳವಡಿಸಲಾಗಿದ್ದು ತೆರವಾಗಿಲ್ಲ. ಮುಂದೆ ಸಮುದ್ರದ ನೀರಿನ ಒತ್ತಡ ವನ್ನು ನೋಡಿಕೊಂಡು ನೀರಿಗಿಳಿಯಲು ಬಿಡಲಾಗುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Bengaluru: ಕೆಎಸ್ಆರ್ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್ ಸಂಚಾರ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Bengaluru: ಆನ್ಲೈನ್ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.