Education: ವರ್ಷಕ್ಕೆ ಮೂರು ಪರೀಕ್ಷೆ ಮಕ್ಕಳಿಗೆ ಬೇಕೇ? ಬೇಡವೇ?


Team Udayavani, Sep 10, 2023, 11:39 PM IST

exam

ರಾಜ್ಯ ಸರಕಾರ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಇದರ ಸರಿ-ತಪ್ಪುಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಈ ಬಗ್ಗೆ ಚರ್ಚಾ ಚಾವಡಿಯಲ್ಲಿ ಚರ್ಚೆ ಶುರುವಾಗಿದೆ.

ಎಲ್ಲ ಸುಧಾರಣೆಯಲ್ಲ

ಶಿಕ್ಷಣ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಹಲವು ಬದಲಾವಣೆಗಳನ್ನು ಕಾಣುತ್ತಿದೆ ಎಂಬುದೇನೋ ಸತ್ಯವೇ ಆದರೂ ಅವೆಲ್ಲವೂ ಸುಧಾರಣೆಗಳೇ ಹೌದೇ ಎಂದು ವಿಮರ್ಶಿಸಬೇಕಿದೆ. 10ನೇತರಗತಿಯವರೆಗೆ ಎಲ್ಲೂ ಮಕ್ಕಳನ್ನು ಅನು ತ್ತೀರ್ಣಗೊಳಿಸ ಬಾರದೆಂಬ ಭ್ರಮೆಯಲ್ಲಿ ಅಕ್ಷರ ಬಾರದ ಮಕ್ಕಳೂ ಪಿಯುಸಿ ಮೆಟ್ಟಿಲೇರುತ್ತಿದ್ದಾರೆ.  ಈಗ ಹತ್ತನೆಯ ಮತ್ತು ಪಿಯುಸಿಯ ಮಕ್ಕಳಿಗೆ 3 ಬಾರಿ ಪರೀಕ್ಷೆ ಯೆಂಬ ಹೊಸ ಯೋಜನೆಯು ಸುದ್ದಿ ಮಾಡುತ್ತಿದೆ. ಮೊದಲ ಪರೀಕ್ಷೆ ಕಡ್ಡಾಯ, ಉಳಿದೆರಡು ಐಚ್ಛಿಕವೇ ಆದರೂ ಮಕ್ಕಳಿಗಿದು ಒತ್ತಡವನ್ನು ತಂದಿಟ್ಟಿದೆ.  ಶೇ.95 ತೆಗೆದ ವಿದ್ಯಾರ್ಥಿಗೂ ಪದೇ ಪದೆ ಅದನ್ನೇ ಓದಿ ಬರೆ ಯುವುದೆಂದರೆ ಹಿಂಸೆಯಲ್ಲವೇ? ಶಾಲಾ ಕಾಲೇ ಜುಗಳಲ್ಲೂ ಪ್ರಸ್ತುತ ವಿದ್ಯಾರ್ಥಿಗಳು ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬರೆದಿರುತ್ತಾರೆ. ಅತಿ ಯಾದರೆ ಅಮೃತವೂ ವಿಷವೇ ಅಲ್ಲವೇ? ಮೌಲ್ಯಮಾಪನ ಮಾಡುವ ಶಿಕ್ಷಕರ ಪಾಡೇನು? ಹೊಸ ಓದಿಗೆ ಅವಕಾಶವೇ ಇಲ್ಲದಂತೆ ಸಮಯ ವನ್ನು ಮೌಲ್ಯಮಾಪನದಕ್ಕೇ ಕಳೆದರೆ ಬೋಧನಾ ಗುಣಮಟ್ಟ ಕುಸಿಯುತ್ತದೆ ಎಂಬುದು ಸ್ಪಷ್ಟ.

ಆರತಿ ಪಟ್ರಮೆ, ತುಮಕೂರು

=========================================================================================================================

ನಿರಾಳ ತಂದೀತು…

ಮೊದಲಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪರೀಕ್ಷಾ ಪದ್ಧತಿ ಉಪಯುಕ್ತವಾದೀತು. ಪರೀಕ್ಷೆ ಎಂಬ ಭೂತ ಅವರನ್ನು ಬಹಳವಾಗಿ ಕಾಡುತ್ತಿತ್ತು. ಈಗ ಕೊಂಚ ನಿರಾಳವಾದೀತು. ಪರೀಕ್ಷೆ ಬಗ್ಗೆ ಭಯಪಡದೆ ಧೈರ್ಯದಿಂದ ಎದುರಿಸುವ ಅವಕಾಶ ಬಂದೀತು. ಫೇಲ್‌ ಆದ ಕಾರಣಕ್ಕೆ ಶಾಲಾ ಕಾಲೇಜುಗಳನ್ನು ತೊರೆಯುತ್ತಿದ್ದ ವಿದ್ಯಾರ್ಥಿಗಳು, ಈ ಹೊಸ ಪದ್ಧತಿಯ ಕಾರಣ ದಿಂದ ಪುನಃ ಶಾಲಾ ಕಾಲೇಜು ಗಳಿಗೆ ಮರಳುತ್ತಾರೆ. ಫಲಿತಾಂಶ ಬಂದ ಅನಂತರ ಆತ್ಮಹತ್ಯೆಗಳು ಈ ಮೂಲಕ ಕಮ್ಮಿ ಆಗಬಹು ದೇನೋ… “ಮರಳಿ ಯತ್ನವ ಮಾಡು’ ಎಂಬ ಮಾತಿನಂತೆ ವಿದ್ಯಾರ್ಥಿಗಳು ಹೊಸ ಹುರುಪಿನಿಂದ ಪ್ರಯತ್ನಿಸಬಹುದು. ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅದನ್ನು ತಿರಸ್ಕರಿಸಿ ಮತ್ತೂಮ್ಮೆ ಬರೆಯುವ ಅವಕಾಶವಿದೆ.

ಇನ್ನು ಬಾಧಕಗಳಿಲ್ಲದಿಲ್ಲ. ವರ್ಷಕ್ಕೆ 3 ಪರೀಕ್ಷೆ ಎಂದಾದರೆ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತು ಉಡಾಫೆ, ಉದಾಸೀನ, ಶೈಕ್ಷಣಿಕ ಪ್ರಗತಿ ಬಗ್ಗೆ ನಿರಾಸಕ್ತಿ ಉಂಟಾಗಬಹುದು. ಇಲಾಖೆ ದೃಷ್ಟಿ ಯಿಂದ ಖರ್ಚು ವೆಚ್ಚ ಹೆಚ್ಚಾಗುವವು. ಶಿಕ್ಷಕರ ಮೇಲೆ ಕಾರ್ಯದೊತ್ತಡವೂ ಉಂಟಾಗುತ್ತದೆ.

ಉಮೇಶ್‌ ಬಿ.ಆಚಾರ್‌, ಬೆಂಗಳೂರು

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

ETTINAHOLE1

Ettinahole Project: ಬತ್ತಿದ ಕನಸುಗಳಿಗೆ ಎತ್ತಿನಹೊಳೆ ಜೀವಜಲ ಧಾರೆ!

10-uv-fusion

Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.