UV Fusion: ಬಾಲ್ಯದ ಸುಂದರ ನೆನಪುಗಳು


Team Udayavani, Sep 11, 2023, 12:03 PM IST

10-uv-fusion

ಮಳೆ ಶುರುವಾಯ್ತು ಬಟ್ಟೆಗಳನ್ನೆಲ್ಲ ಒಳ ತಂದುಬಿಡು ಯಾವಾಗ್ಲೂ ಆ ಮೊಬೈಲ್‌ ಹಿಡ್ಕೊಂಡು ಕೂರ್ತಿಯ ಪ್ರವಾಹ ಬಂದ್ರು ಗೊತ್ತಾಗಲ್ಲ ನಿಂಗೆ ಅಮ್ಮನ ಬೈಗುಳ ಕೇಳಿ ಮೊಬೈಲ್‌ ಸೋಫಾದ ಮೇಲೆ ಎಸೆದು ಅಂಗಳಕ್ಕೆ ಓಡಿ ಬಟ್ಟೆಗಳನ್ನೆಲ್ಲ ತಂತಿಯಿಂದ ತೆಗೆಯೋ ವೇಳೆಗಾಗಲೇ ಅರ್ಧ ಒದ್ದೆಯಾಗಿಬಿಟ್ಟಿದೆ.

ಇನ್ನಷ್ಟು ಮಳೆಯಲ್ಲಿ ನೆನೆಯುವ ಆಸೆಯಾದರು ಎರಡು ದಿನಗಳ ಹಿಂದೆಯಷ್ಟೇ ನನ್ನ ಬಿಟ್ಟು ಹೋಗಿದ್ದ ಜ್ವರದ ನೆನಪಾಗಿ ಜತೆಗೆ ಅಮ್ಮನ ಕೈಯಿಂದ ಇನ್ನಷ್ಟು ಬೈಗುಳ ತಿನ್ನಬೇಕಲ್ಲ ಎಂದೆನಿಸಿ ಸುಮ್ಮನೆ ಒಳ ಬಂದು ಮತ್ತೆ ಮೊಬೈಲ್‌ ಹಿಡಿದು ಕುಳಿತೆ.

ಅಕ್ಕಾ.. ಅಕ್ಕಾ ಬಾ ನಿಂಗೇನೋ ತೋರಿಸ್ಬೇಕು ನನ್ನ ಚಿಕ್ಕಪ್ಪನ ಮಗ ಐದು ವರ್ಷದ ಪೋರ ಅವನ ಪುಟ್ಟ ಕೊಡೆ ಹಿಡಿದು ಅದನ್ನ ಅಲ್ಲೇ ಅಂಗಳದಲ್ಲಿ ಎಸೆದು ಬಂದಿದ್ದ ಮೊಬೈಲ್‌ ಹಿಡಿಯೋಕು ಬಿಡದೆ ಒಂದೇ ಸಮನೆ ತಲೆ ತಿಂತಾ ಇದ್ದ ಏನು ಎಂದರೆ ಹೊರಗೆ ಬಾ ಅಕ್ಕಾ ತೋರಿಸ್ತೀನಿ ಎನ್ನುತಿದ್ದ.. ಕೊನೆಗೂ ಅವನ ಕಾಟಕ್ಕೆ ಮಣಿದು ಮೊಬೈಲ್‌ ಹಿಡಿದು ಅಮ್ಮನಿಗೆ ತಿಳಿಸಿ ಅಂಗಳಕ್ಕೆ ಕಾಲಿಟ್ಟಿದ್ದೆ. ಕೊಡೆ ತಮ್ಮನ ಕೈಗಿಟ್ಟು ಮಳೆಯಲ್ಲಿ ಸ್ವಲ್ಪವೇ ನೆನೆಯುತ್ತ ಅರ್ಧ ದಾರಿ ತಲುಪುವ ವೇಳೆಗಾಗಲೇ ತಿಳಿದುಬಿಟ್ಟಿತು.

ಮನೆಯಿಂದ ಸ್ವಲ್ಪವೇ ದೂರವಿರುವ ಗದ್ದೆ ಉಳುಮೆ ಮಾಡುವ ಯಂತ್ರ ಬಂದಿದೆಯೆಂದು ಅವನ ಹೆಜ್ಜೆಗೆ ಸರಿಯಾಗಿ ನಡೆಯುತ್ತಾ ಹೋದೆ.. ತಮ್ಮ ಗದ್ದೆ ಉಳುಮೆ ಮಾಡುವುದನ್ನೇ ನೋಡುತ್ತಾ ನಿಂತ ಅವನಿದು ಎರಡನೇ ಬಾರಿ ನೋಡುತ್ತಿರುವುದು.. ನನ್ನ ಸ್ಮೃತಿಯಲ್ಲಿ ಬಾಲ್ಯದ ಚಿತ್ರಣ ಹಾದುಹೋಯಿತು.

ನಾನು ಬಾಲ್ಯದಲ್ಲಿ ಅದೆಷ್ಟು ಖುಷಿಯಿಂದ ಕಾದಿದ್ದ ಈ ದಿನಕ್ಕಾಗಿ ಆಗೆಲ್ಲ ಗದ್ದೆ ಉಳುಮೆ ಮಾಡುವುದು ನೋಡುವುದೇ ಒಂದು ಖುಷಿಯಾದರೆ, ಆ ಕೆಸರಿನಲ್ಲಿ ಇಳಿದು ಆಟ ಆಡುವುದು ಪೈರು ನಾಟಿ ಮಾಡುವಾಗಲಂತೂ ಅದೆಷ್ಟು ಪೈರು ಹಾಳು ಮಾಡಿದ್ದೇವೋ ಏನೋ.. ಅದರ ಜೊತೆಗೆ ಒಂದಿಷ್ಟು ಬೈಗುಳಗಳು.

ಗದ್ದೆ ತೋಟದ ಬದಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವ ಖುಷಿ ಈಗ ಫೈವ್‌ ಸ್ಟಾರ್‌ ಹೋಟೆಲಿನಲ್ಲಿ ಕುಳಿತು ಊಟ ಮಾಡಿದರು ಸಿಗಲಾರದು. ಆಗೆಲ್ಲ ಆ ಕೆಲಸಗಳು ಅಷ್ಟೇ ಖುಷಿ ಕೊಡುತಿದ್ದವು.. ಈಗ ಆ ಗದ್ದೆಯ ಜಾಗದಲ್ಲಿ ಅಡಿಕೆ ಮರಗಳು ಎದ್ದು ನಿಂತಿವೆ.

ಒಂದು ಮೂಲೆಯಲ್ಲಿ ಬೇಸರವಂತೂ ಇದ್ದೆ ಇದೆ.. ನಮ್ಮ ಇಡೀ ಊರಿನಲ್ಲಿ ಒಂದೆರಡು ಕಡೆ ಗದ್ದೆ ತೋಟ ಇದೆ ಅಷ್ಟೇ. ಈಗೇನಿದ್ದರೂ ಪೂರ್ತಿ ಕೆಲಸಗಳು ಯಂತ್ರದ ಮೂಲಕವೇ ನಡೆಯುತ್ತಿದೆ. ಎಲ್ಲೋ ಒಂದೆರಡು ಕಡೆ ಬಿಟ್ಟರೆ. ತಮ್ಮ ಕೈ ಹಿಡಿದು ಅಕ್ಕಾ ಹೋಗೋಣ ಮನೆಗೆ ಎಂದಾಗ ಯೋಚನ ಲಹರಿಯಿಂದ ಹೊರಬಂದೆ. ಅದಾಗಲೇ ಅಲ್ಲಿದ್ದ ಕೆಲಸಗಾರರು ಇಬ್ಬರು ಕೂಡ ಹೊಟ್ಟೆ ಹಸಿವು ತಣಿಸಿಕೊಳ್ಳುವುದಕ್ಕಾಗಿ ಹೋಟೆಲ್‌ ಕಡೆ ಪ್ರಯಾಣ ಬೆಳೆಸಿಯಾಗಿತ್ತು.

ಮೊಬೈಲ್‌ ನಲ್ಲಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮನ ಕೈ ಹಿಡಿದು ಮನೆ ಸೇರಿದ್ದೆ.

-ವಿದ್ಯಾಶ್ರೀ ಎ.

ಎಡಮಂಗಲ

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ

ಸುಬ್ರಹ್ಮಣ್ಯ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.