Rajinikanth: ʼಜೈಲರ್ʼಗಾಗಿ ದುಡಿದ 300 ಸಿಬ್ಬಂದಿಗಳಿಗೆ ಗೋಲ್ಡ್ ಕಾಯಿನ್ ಗಿಫ್ಟ್
ಮಲೇಷ್ಯಾ ಪ್ರಧಾನಿ ಜೊತೆ ಸೂಪರ್ ಸ್ಟಾರ್ ರಜಿನಿಕಾಂತ್
Team Udayavani, Sep 11, 2023, 6:19 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ಓಟಿಟಿಗೆ ಬಂದ ಬಳಿಕವೂ ಥಿಯೇಟರ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾ ಕಾಲಿವುಡ್ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗದಲ್ಲೂ ದೊಡ್ಡ ಹಿಟ್ ಆಗಿದೆ.
ಸಿನಿಮಾ ಯಶಸ್ಸಾದ ಬೆನ್ನಲೇ ಸನ್ ಪಿಕ್ಚರ್ಸ್ ನ ಕಲಾನಿಧಿ ಮಾರನ್ ಅವರು ರಜಿನಿಕಾಂತ್ ಅವರಿಗೆ 100 ಕೋಟಿಯ ಚೆಕ್ ಕಾರನ್ನು ಗಿಫ್ಟ್ ಆಗಿ ನೀಡಿದ್ದರು. ಇದಾದ ಬಳಿಕ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಸಂಗೀತ ಸಂಯೋಜಕ ಅವರಿಗೂ ದುಬಾರಿ ಕಾರಿನ ಉಡುಗೊರೆಯನ್ನು ನೀಡಿದ್ದ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದೀಗ ನಿರ್ಮಾಪಕ ಕಲಾನಿಧಿ ಮಾರನ್ ಅವರು ʼಜೈಲರ್ʼ ಸಿನಿಮಾಕ್ಕಾಗಿ ದುಡಿದ 300 ಮಂದಿ ಸಿಬ್ಬಂದಿಗಳಿಗೂ ಉಡುಗೊರೆ ರೂಪದಲ್ಲಿ ಚಿನ್ನದ ನಾಣ್ಯವನ್ನು ನೀಡಿದ್ದಾರೆ.
ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಿ ಇದರಲ್ಲಿ ಸಿಬ್ಬಂದಿಗಳಿಗೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಈ ನಾಣ್ಯದಲ್ಲಿ ʼಜೈಲರ್ʼ ಎಂದು ಬರೆಯಲಾಗಿದೆ. ಕಾರ್ಯಕ್ರಮದ ಬಳಿಕ ಬಿರಿಯಾನಿ ಊಟವನ್ನು ಸಿಬ್ಬಂದಿಗಳೊಂದಿಗೆ ಸೇವಿಸಿದ್ದಾರೆ.
ಈ ಕಾರ್ಯಕ್ರ ಗಣೇಶ ಹಬ್ಬದಂದು ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ.
ಮಲೇಷ್ಯಾದಲ್ಲಿ ತಲೈವಾ: ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಮಲೇಷ್ಯಾದಲ್ಲಿದ್ದು,ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿ ಮಾಡಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲುಂಗಿ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ರಜಿನಿಕಾಂತ್ ಕಾಣಿಸಿಕೊಂಡಿದ್ದು, ಮಲೇಷ್ಯಾ ಪ್ರದಾನಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ರಜಿನಿಕಾಂತ್ ಅವರೊಂದಿಗಿನ ಭೇಟಿ ಬಗೆಗಿನ ಫೋಟೋವನ್ನು ಮಲೇಷ್ಯಾ ಪ್ರಧಾನಿ ಅವರು ಹಂಚಿಕೊಂಡಿದ್ದಾರೆ.
Hari ini saya menerima kunjungan bintang filem India, Rajinikanth yakni satu nama yang tidak asing lagi di pentas dunia seni asia dan antarabangsa.
Saya hargai penghormatan yang diberikan beliau terhadap perjuangan saya khasnya terkait isu kesengsaraan dan penderitaan rakyat.… pic.twitter.com/Sj1ChBMuN6
— Anwar Ibrahim (@anwaribrahim) September 11, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Film Censor: ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸಿಕ್ಕಿತು ಸೆನ್ಸಾರ್ ಪ್ರಮಾಣಪತ್ರ!
Bhool Bhulaiyaa 3; ವಿದ್ಯಾ-ಮಾಧುರಿ ನಾಟ್ಯ ಲಹರಿ
Somy Ali: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್ ಕೇಳಿದ ಸಲ್ಮಾನ್ ಖಾನ್ ಮಾಜಿ ಗೆಳತಿ
Ranbir Kapoor: ಹೊಸ ಲುಕ್ನಲ್ಲಿ ರಣಬೀರ್ ಕಪೂರ್; ಧೂಮ್ 4ಗೆ ತಯಾರಿ?
MUST WATCH
ಹೊಸ ಸೇರ್ಪಡೆ
Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ
Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ
Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್ ಅರಸ್ ನಿಧನ
Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್
Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.