Temple; ಸಾಗರದಲ್ಲೊಂದು ವಿಶಿಷ್ಟ ಯೋಜನೆ; ಬೇಡದ ದೇವರ ಫೋಟೋಗಳಿಗೊಂದು ಹುಂಡಿ!
Team Udayavani, Sep 12, 2023, 8:21 PM IST
ಸಾಗರ: ಮನೆಯಲ್ಲಿ ಭಿನ್ನಗೊಂಡ, ಗಾಜು ಒಡೆದ, ಬೇಡದ ದೇವರ ಫೋಟೋಗಳನ್ನು ಅರಳಿ ಮರದ ಬುಡದಲ್ಲಿ, ಕೆರೆಗಳಲ್ಲಿ ಹಾಕುವುದು ನಮ್ಮಲ್ಲಿ ಸಂಪ್ರದಾಯವೇ ಆಗಿ ಜನರಿಗೆ ಸಮಸ್ಯೆಯಾಗಿರುವಾಗ ನಗರದ ಆನಂದ ಸಾಗರ ಟ್ರಸ್ಟ್ ಮತ್ತು ನೆರವಿನ ಕೈಗಳು ಟ್ರಸ್ಟ್ ಜಂಟಿಯಾಗಿ ವಿನೂತನವಾದ ಯೋಜನೆಯೊಂದನ್ನು ರೂಪಿಸಿದೆ.
ಇದೀಗ ನಗರದ ಮೂರು ದೇವಸ್ಥಾನಗಳ ಆವರಣದಲ್ಲಿ ಈ ತರಹದ ಫೋಟೋಗಳ ವಿಸರ್ಜನೆಗಾಗಿಯೇ ವಿಶೇಷ ಹುಂಡಿಯೊಂದನ್ನು ಸ್ಥಾಪಿಸಿವೆ.
ನಗರದ ಶಿವಪ್ಪ ನಾಯಕ ನಗರದಲ್ಲಿರುವ ಶ್ರೀರಾಮ ದೇವಸ್ಥಾನ, ಸೊರಬ ರಸ್ತೆಯಲ್ಲಿರುವ ದುರ್ಗಾಂಬಾ ದೇವಸ್ಥಾನದ ಎದುರಿನ ಮೈಲಾರೇಶ್ವರ ದೇವಸ್ಥಾನ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿರುವ ಲಕ್ಷ್ಮೀವೆಂಕಟರಮಣ ದೇವಸ್ಥಾನಗಳಲ್ಲಿ ತಲಾ ಒಂದು ಹುಂಡಿಯನ್ನು ಇಟ್ಟಿದ್ದು ಅದರಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ, ಭಿನ್ನಗೊಂಡ ಮತ್ತು ಪೂಜೆಗೆ ಅರ್ಹವಲ್ಲದ ದೇವರ ಫೋಟೋಗಳನ್ನು ಹಾಕಲು ವಿನಂತಿಸಲಾಗಿದೆ.
ದೇವರ ಫೋಟೋಗಳನ್ನು ಅರಳಿಕಟ್ಟೆ, ಕೆರೆ ಮತ್ತು ನದಿಗಳಲ್ಲಿ ಹರಿಯ ಬಿಟ್ಟು ಪರಿಸರ ಹಾಳುಮಾಡುವ ಬದಲು ಈ ಹುಂಡಿಗಳಲ್ಲಿ ಹಾಕುವ ಸಂಪ್ರದಾಯ ಬೆಳೆಯಬೇಕಿದೆ. ಪ್ರತಿ ವಾರಕೊಮ್ಮೆ ಟ್ರಸ್ಟ್ ವತಿಯಿಂದ ಹುಂಡಿಯಲ್ಲಿ ಹಾಕಿದ ಫೋಟೋಗಳನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಸರ್ಜಿಸುವ ಭರವಸೆಯನ್ನು ಈ ಸಂಘಟನೆಗಳು ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.