Kapu: ಓವರ್ಟೇಕ್ ಮಾಡಿದ್ದಕ್ಕೆ ಕಾರಿಗೆ ಹಾನಿ; ದೂರು ದಾಖಲು
ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡಾಟಿಕೆ ಮೆರೆದ ಯುವಕರ ತಂಡ
Team Udayavani, Sep 12, 2023, 9:04 PM IST
ಕಾಪು: ಉಡುಪಿಯಿಂದ ಪಲಿಮಾರಿಗೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರಿಗೆ ಹಲ್ಲೆ ನಡೆಸಿ ಕಾರಿಗೆ ಹಾನಿಯುಂಟು ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಪಲಿಮಾರು ನಿವಾಸಿ ಗಣೇಶ ಪ್ರಸಾದ್ ಅವರು ತನ್ನ ಸ್ನೇಹಿತರಾದ ನಿತಿನ್ ಮತ್ತು ಜಿತೇಶ್ ಎಂಬವರೊಂದಿಗೆ ಕಾರಿನಲ್ಲಿ ಉಡುಪಿಗೆ ಹೋಗಿ ಕೆಲಸ ಮುಗಿಸಿ ರಾತ್ರಿ ವಾಪಸ್ಸು ಪಲಿಮಾರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಕಾಪು ಫ್ಲೈಓವರ್ ಬಳಿ ತೆರಳುತ್ತಿದ್ದ ಗಣೇಶ್ ಪ್ರಸಾದ್ ಅವರ ಕಾರಿನ ಎದುರುಗಡೆ ಹೋಗುತ್ತಿದ್ದ ಮಾರುತಿ ಎರ್ಟಿಗಾ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಆತಂಕವುಂಟು ಮಾಡಿದ್ದರು. ಆ ಕಾರನ್ನು ಹಿಂದಿಕ್ಕಿ ಮುಂದೆ ಹೋದ ಕಾರು ಕೊಪ್ಪಲಂಗಡಿ ತಲುಪುವಾಗ ಮತ್ತೆ ಎರ್ಟಿಗಾ ಕಾರಿನಲ್ಲಿದ್ದವರು ಕಾರನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿಕೊಂಡು ಬಂದು ಮುಂದೆ ಕಾರು ಮುಂದೆ ಹೋಗದಂತೆ ಎದುರುಗಡೆ ತಂದು ತಡೆದಿದ್ದರು.
ಈ ವೇಳೆ ಗಣೇಶ್ ಪ್ರಸಾದ್ ಅವರ ಕಾರನ್ನು ಚಲಾಯಿಸುತ್ತಿದ್ದ ನಿತಿನ್ ಕಾರನ್ನು ರಸ್ತೆ ಬದಿ ನಿಲ್ಲಿಸಿದಾಗ ಎರ್ಟಿಗಾ ಕಾರನ್ನು ಕೂಡ ಅದರ ಚಾಲಕ ನಿಲ್ಲಿಸಿ, ಕಾರಿನಿಂದ ಇಳಿದು ಬಂದ 25-30 ಪ್ರಾಯದ 4 ಮಂದಿ ಅವಾಚ್ಯ ಶಬ್ದಗಳಿಂದ ಬೆ„ಯುತ್ತಾ ಗಣೇಶ್ ಪ್ರಸಾದ್ ಮತ್ತು ಅವರ ಸ್ನೇಹಿತರ ಮೈಗೆ ಕೈ ಹಾಕಿ ತಳ್ಳಾಡಿದ್ದರು. ಬಳಿಕ ಮೂರು ಮಂದಿ ಅವರ ಕಾರಿನ ಬಳಿ ಹೋಗಿ ಕಾರಿನಲ್ಲಿದ್ದ ತಲವಾರು, ಕಬ್ಬಿಣದ ರಾಡು ಮತ್ತು ಮತ್ತು ವ್ಹೀಲ್ ಬಾಕ್ಸ್ ರಾಡ್ನ್ನು ಹಿಡಿದುಕೊಂಡು ಬಂದು ಕಬ್ಬಿಣದ ರಾಡ್ ಹಿಡಿದುಕೊಂಡು ಬಂದು ಬೀಸಿದ್ದು ಅದು ನಿತಿನ್ ಅವರ ಬಲತೊಡೆಗೆ ತಾಗಿ ನೋವಾಗಿತ್ತು.
ಘಟನೆಯಿಂದ ಹೆದರಿದ ಗಣೇಶ್ ಪ್ರಸಾದ್ ಮತ್ತು ಅವರ ಸ್ನೇಹಿತರು ಕಾರಿನ ಒಳಗೆ ಲಾಕ್ ಮಾಡಿಕೊಂಡು ಕುಳಿತಿದ್ದು ಅಲ್ಲಿಗೆ ಬಂದ ನಾಲ್ಕು ಜನ ಆರೋಪಿಗಳು ಕೈಯಿಂದ ಮತ್ತು ಅವರ ಕೈಯಲ್ಲಿದ್ದ ಆಯುಧಗಳಿಂದ ಕಾರಿಗೆ ಹೊಡೆದು ಎದುರುಗಡೆ ಗ್ಲಾಸ್, ಕಿಟಕಿ ಗ್ಲಾಸ್, ಬಾಡಿ ಇತ್ಯಾದಿ ಜಖಂಗೊಳಿಸಿ ಕಾರಿನಿಂದ ಇಳಿಯಿರಿ, ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ನಂತರ ಅವರ ಆಯುಧಗಳ ಸಮೇತ ಅವರ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಯುವಕರ ಪುಂಟಾಟಿಕೆಗೆ ಕಾರು ಜಖಂಗೊಂಡಿದ್ದು ಒಂದು ಲಕ್ಷ ರೂ. ವರೆಗೆ ನಷ್ಟ ಉಂಟಾಗಿದೆ ಎಂದು ಗಣೇಶ್ ಪ್ರಸಾದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Recipe: ಫಾಸ್ಟ್ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.