Asia Cup ; ಫೈನಲ್ ಗೂ ಮುನ್ನ ರೋಹಿತ್ ಬಳಗಕ್ಕೆ ಸೋಲಿನ ಕಹಿ ಉಣಿಸಿದ ಬಾಂಗ್ಲಾ

ಗಿಲ್ ಅಮೋಘ ಶತಕ...ಪಟೇಲ್ ಹೋರಾಟ ವ್ಯರ್ಥ...

Team Udayavani, Sep 15, 2023, 11:08 PM IST

1-ddad

ಕೊಲಂಬೊ: ಇಲ್ಲಿ ಶುಕ್ರವಾರ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಬದಲಾವಣೆಗಳೊಂದಿಗೆ ಆಡಲಿಳಿದಿದ್ದ ಭಾರತ ತಂಡಕ್ಕೆ ಬಾಂಗ್ಲಾದೇಶ ಸೋಲಿನ ಶಾಕ್ ನೀಡಿದೆ. ಫೈನಲ್ ನಲ್ಲಿ ಆಡಲಿರುವ ಭಾರತಕ್ಕೆ ಗಿಲ್ ಅವರ ಅಮೋಘ ಶತಕದ ಹೊರತಾಗಿಯೂ ಅನುಭವಿಸಿದ ಸೋಲು ಕಹಿಯಾದರೆ, ಅಮೋಘ ಆಟವಾಡಿದ ಬಾಂಗ್ಲಾಕ್ಕೆ ಗೆಲುವು ಸ್ಮರಣೀಯವಾಗಿದೆ.

ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದೇಶ ತಂಡ ನಾಯಕ ಶಕೀಬ್ ಅಲ್ ಹಸನ್ ಮತ್ತು ತೋವಿದ್ ಹೃದಯ್ ಅವರ ಅರ್ಧಶತಕಗಳ ನೆರವಿನಿಂದ ಭಾರತದ ವಿರುದ್ಧ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು.

266 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಎದುರಿಸಿತು.49.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟಾಗುವ ಮೂಲಕ ಸೋಲಿನ ಕಹಿ ಉಂಡಿತು. ಬಾಂಗ್ಲಾದೇಶ 6 ರನ್‌ಗಳ ಜಯ ಸಾಧಿಸಿತು.

ಫೈನಲ್ ಆಡಲಿರುವ, ಹೊಸ ಪ್ರಯೋಗ ಮಾಡಿ ಆಡುತ್ತಿದ್ದ ರೋಹಿತ್ ಬಳಗಕ್ಕೆ ಬಾಂಗ್ಲಾ ಬೌಲರ್ ಗಳು ಒಂದಾದರ ಮೇಲೆ ಒಂದು ಶಾಕ್ ನೀಡುತ್ತಾ ಹೋದರು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಅವರನ್ನು ತಂಝಿಮ್ ಹಸನ್ ಸಾಕಿಬ್ ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಪದಾರ್ಪಣಾ ಪಂದ್ಯವಾಡಿದ ತಿಲಕ್ ವರ್ಮಾ ಅವರನ್ನೂ 5 ರನ್ ಗಳಿಸಿದ್ದ ವೇಳೆ ಸಾಕಿಬ್ ಬೌಲ್ಡ್ ಮಾಡಿದರು.

ಕೆ.ಎಲ್. ರಾಹುಲ್ 39 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 5 ರನ್ ಗಳಿಸಿದ್ದ ವೇಳೆ ಮೆಹಿದಿ ಹಸನ್ ಮಿರಾಜ್ ಎಲ್ಬಿಡಬ್ಲ್ಯೂ ಮೂಲಕ ಬಲೆಗೆ ಹಾಕಿದರು. ಸೂರ್ಯಕುಮಾರ್ ಯಾದವ್ 26 ರನ್ ಗಳಿಸಿದ್ದ ವೇಳೆ ಶಕಿಬ್ ಬೌಲ್ಡ್ ಮಾಡಿದರು. ರವೀಂದ್ರ ಜಡೇಜಾ 7 ರನ್ ಗಳಿಸಿದ್ದ ವೇಳೆ ಮುಸ್ತಫಿಜುರ್ ಬೌಲ್ಡ್ ಮಾಡಿದರು.

9 ಬಾಲ್ ಗೆ 12 ರನ್ ಅಗತ್ಯವಿದ್ದ ವೇಳೆ 42 ರನ್ ಗಳಿಸಿ ಭರವಸೆಯಾಗಿ ಆಡುತ್ತಿದ್ದ ಅಕ್ಷರ್ ಪಟೇಲ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು. ಶಮಿ ಅವರಿಗೆ ಕೊನೆಯಲ್ಲಿ ದೊಡ್ಡ ಹೊಡೆತಗಳ ಮೂಲಕ ಗೆಲುವು ತಂದುಕೊಡುವುದು ಸಾಧ್ಯವಾಗಲಿಲ್ಲ.

ಅಮೋಘ ಶತಕ ಸಿಡಿಸಿದ ಗಿಲ್

ಆರಂಭಿಕನಾಗಿ ಬಂದ ಶುಭಮನ್ ಗಿಲ್ ಒಂದೊಂದೇ ವಿಕೆಟ್ ಉದುರುತ್ತಿದ್ದರೂ ನೆಲಕಚ್ಚಿ ನಿಂತು ಜವಾಬ್ದಾರಿಯುತ ಆಟವಾಡಿದರು. 121(133 ಎಸೆತ) ರನ್ ಗಳಿಸುವ ಮೂಲಕ ಈ ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಮಹೇದಿ ಹಸನ್ ಎಸೆದ ಚೆಂಡನ್ನು ತೌಹಿದ್ ಹೃದಯ್ ಕೈಗಿತ್ತು ನಿರ್ಗಮಿಸಿದರು. ಗಿಲ್ ಅವರ ಇನ್ನಿಂಗ್ಸ್ ನಲ್ಲಿ 8 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಒಳಗೊಂಡಿತ್ತು.

ಶಕೀಬ್, ಹೃದಯ್ ಅರ್ಧ ಶತಕ
ಶಕೀಬ್ (85 ಎಸೆತಗಳಲ್ಲಿ 80) ಮತ್ತು ಟೋವಿಡ್ ಹೃದಯ್ (81 ಎಸೆತಗಳಲ್ಲಿ 54 ರನ್ ) ಆರಂಭಿಕ ವಿಕೆಟ್‌ಗಳು ಪತನ ಗೊಂಡ ಬಳಿಕ ತಂಡಕ್ಕೆ ಆಧಾರವಾದರು. ನಸುಮ್ ಅಹ್ಮದ್ 44, ಮಹೇದಿ ಹಸನ್ 29 ಮತ್ತು ತಂಜಿಮ್ ಹಸನ್ ಸಾಕಿಬ್ 14 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ವೇಗಿಗಳಾದ ಮೊಹಮ್ಮದ್ ಶಮಿ (2/32), ಶಾರ್ದೂಲ್ ಠಾಕೂರ್ (3/65) ಮತ್ತು ಪ್ರಸಿದ್ಧ್ ಕೃಷ್ಣ (1/43) ಆರು ವಿಕೆಟ್‌ಗಳನ್ನು ಹಂಚಿಕೊಂಡರು.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.