![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 16, 2023, 9:23 PM IST
ನವದೆಹಲಿ: ನಮೀಬಿಯದ ಚೀತಾಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಂದು ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗುತ್ತದೆ. ಅಲ್ಲಿಂದ ಬಂದ ಹಲವು ಚೀತಾಗಳು ಸಾವನ್ನಪ್ಪಿವೆ. ಇದರ ನಡುವೆಯೇ ಹೊಸತಾಗಿ ಚೀತಾಗಳನ್ನು ತರಿಸಿಕೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಯೋಜಿಸಿದೆ. ಈ ಬಾರಿ ಚಳಿಗಾಲದ ವೇಳೆ ದಪ್ಪ ತುಪ್ಪಳವನ್ನು ಬೆಳೆಸಿಕೊಳ್ಳದ ಚೀತಾಗಳನ್ನೇ ತರಿಸಿಕೊಳ್ಳಲಾಗುತ್ತದೆ! ಕಾರಣ ಇದುವರೆಗೆ ಸಾವನ್ನಪ್ಪಿರುವ ನಮೀಬಿಯ ಚೀತಾಗಳ ಪೈಕಿ ಮೂರು ದಪ್ಪ ತುಪ್ಪಳ ಬೆಳೆಸಿಕೊಂಡಿದ್ದರಿಂದಲೇ ಸಾವನ್ನಪ್ಪಿರುವುದು.
ಮುಂದಿನ ಬಾರಿ ದ.ಆಫ್ರಿಕಾದಿಂದ ತರಿಸಿಕೊಳ್ಳುವ ಚೀತಾಗಳನ್ನು ಮಧ್ಯಪ್ರದೇಶದ ಗಾಂಧಿಸಾಗರ ವನ್ಯಜೀವಿ ಧಾಮದಲ್ಲಿ ಬಿಡಲಾಗುತ್ತದೆ. ಕೆಲವನ್ನು ನೌರಾದೇಹಿಯಲ್ಲಿ ಬಿಡಲಾಗುತ್ತದೆ. ಕುನೋ ಪಾರ್ಕ್ನಲ್ಲಿ ಹೊಸ ಚೀತಾ ಬಿಡಲು ಅಗತ್ಯ ಜಾಗವಿಲ್ಲದಿರುವುದರಿಂದ ಈ ತೀರ್ಮಾನ ಮಾಡಲಾಗಿದೆ.
ಸಾವಿಗೆ ಕಾರಣವೇನು?: ಆಫ್ರಿಕಾದ ಚಳಿಗಾಲವನ್ನು ಅನುಭವಿಸಿದ್ದ ನಮೀಬಿಯ ಚೀತಾಗಳು, ಭಾರತದಲ್ಲಿ ಬೇಸಿಗೆಯಿದ್ದರೂ ಆ ಸಮಯದಲ್ಲಿ ದಪ್ಪ ತುಪ್ಪಳವನ್ನು ಬೆಳೆಸಿಕೊಂಡಿದ್ದವು. ಎಂದಿನಂತೆ ಚಳಿಗಾಲದ ನಿರೀಕ್ಷೆಯಲ್ಲಿದ್ದ ಅವು ಇಲ್ಲಿ ದಪ್ಪಚರ್ಮ ಬೆಳೆಸಿಕೊಂಡಿದ್ದರಿಂದ, ತುರಿಕೆ ಶುರುವಾಯಿತು. ಅದರಿಂದ ತಮ್ಮ ಕತ್ತನ್ನು ಚೀತಾಗಳು, ಮರಕ್ಕೆ, ನೆಲಕ್ಕೆ ಎಲ್ಲೆಂದರಲ್ಲಿ ಉಜ್ಜತೊಡಗಿದವು. ಇದರಿಂದ ಸೋಂಕು ಉಂಟಾಗಿ ಅವು ಸಾವನ್ನಪ್ಪಿವೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ನಿರ್ದೇಶಕ ಎಸ್.ಪಿ.ಯಾದವ್ ಹೇಳಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.