![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 17, 2023, 1:50 PM IST
ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗೌರಿ ಹಾಗೂ ಗಣೇಶ ಚತುರ್ಥಿಯನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಿಸಲು ನಾಗರಿಕರು, ಗಣೇಶ ಮೂರ್ತಿ ಪ್ರತಿಷ್ಠಾಪಕರು ಸಿದ್ಧತೆ ನಡೆಸಿದ್ದು, ಹಬ್ಬದ ಸಂಭ್ರಮಕ್ಕೆ ಮಾರು ಕಟ್ಟೆ ಈ ಬಾರಿ ದುಬಾರಿ ಆಗುವುದಕ್ಕಿಂತ “ಆಭಾರಿ’ ಆಗಿರುವುದು ವಿಶೇಷ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ನಿಯಂತ್ರಣದಲ್ಲೇ ಇದ್ದು, ಶನಿವಾರ ಕೆ.ಆರ್.ಮಾರುಕಟ್ಟೆಯಲ್ಲಿ ಗ್ರಾಹಕರು ಕೆ.ಜಿ.ಗಟ್ಟಲೆ ಹೂ-ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಹಬ್ಬದ ನಿಮಿತ್ತ ನಗರದ ಮಲ್ಲೇಶ್ವರ, ಬಸವನಗುಡಿ, ಇತರೆ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನದಟ್ಟಣೆ ಕಂಡು ಬಂತು. ಗೌರಿ, ಗಣೇಶನ ಮೂರ್ತಿಗಳ ಖರೀದಿ ಜತೆಗೆ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಜನ ಖರೀದಿಸಿದರು.
ಸಾಮಾನ್ಯವಾಗಿ ಹಬ್ಬದ ಸಂದರ್ಭ ಗಳಲ್ಲಿ ಎಲ್ಲೆಡೆ ಹೂವು-ಹಣ್ಣುಗಳ ಬೆಲೆ ಗಗನಕ್ಕೇರುತ್ತಿತ್ತು. ಆದರೆ, ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬರದೆ, ಫಸಲು ತಡವಾಗಿ ಬಂದ ಕಾರಣ ದರದಲ್ಲಿ ಭಾರೀ ಕುಸಿತ ಕಂಡಿದೆ. ಒಂದು ಕೆ.ಜಿ. ಸೇವಂತಿಗೆಯನ್ನು ನೂರಾರು ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಕೇವಲ 40ರಿಂದ 50 ರೂ.ಗೆ ಸಿಗುತ್ತಿದೆ.
ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವು ಹೆಚ್ಚು ಇಲ್ಲದ ಕಾರಣ ಅದರ ಬೆಲೆ ತುಸು ಜಾಸ್ತಿ ಇದೆ. ಕೆ.ಜಿ. ಮಲ್ಲಿಗೆಗೆ 600ರಿಂದ 800ರೂ.ಗಳು ಇದ್ದು, ಹಬ್ಬದ ಹಿಂದಿನ ದಿನವಾದ ಭಾನುವಾರದಂದು 1,400ರಿಂದ 1,500ರೂ.ಗೆ ಏರುವ ಸಾಧ್ಯತೆ ಇದೆ ಎಂದು ಕೆ.ಆರ್. ಮಾರುಕಟ್ಟೆ ಸಗಟು ಹೂವು ಮಾರಾಟಗಾರರ ಸಂಘ ಅಧ್ಯಕ್ಷ ಜಿ.ಎಂ.ದಿವಾಕರ್ ತಿಳಿಸುತ್ತಾರೆ.
ಹೂವು ದರ (ಕೆ.ಜಿ.ಗೆ)
ಸೇವಂತಿ 40-50 ರೂ.
ಚೆಂಡು ಹೂ 25 ರೂ.
ಮಲ್ಲಿಗೆ 600-800 ರೂ.
ಸುಗಂಧರಾಜ 250 ರೂ.
ಕನಕಾಂಬರ 600 ರೂ.
ಹಣ್ಣು ಬೆಲೆ(ಕೆ.ಜಿ.ಗೆ)
ಏಲಕ್ಕಿ ಬಾಳೆ 90-110 ರೂ.
ಮೂಸಂಬಿ 70 ರೂ.
ದಾಳಿಂಬೆ 150 ರೂ.
ಸೇಬು 120-150 ರೂ.
ಸೀಬೆ ಹಣ್ಣು 50 ರೂ.
ರೈ ತರು ವರಮಹಾ ಲಕ್ಷ್ಮೀ ಹಬ್ಬದ ದೃಷ್ಟಿ ಇಟ್ಟುಕೊಂಡು ಹೂ ಬೆಳೆದಿ ದ್ದರು. ಮಳೆ ಇಲ್ಲದ ಕಾರಣ ಸರಿಯಾದ ಫಸಲು ಬರಲಿಲ್ಲ. ವಾರದಿಂದಲೂ ಎಲ್ಲೆಡೆ ಮಳೆ ಯಾದ ಕಾರಣ ನಿರೀಕ್ಷೆಗೂ ಮೀರಿ ಹೂ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಬ್ಬದಲ್ಲಿ ಹೂ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದು ಗ್ರಾಹಕರಲ್ಲಿ ಖುಷಿ ತಂದಿದೆ.-ದಿವಾಕರ್, ಅಧ್ಯಕ್ಷ, ಕೆ.ಆರ್. ಮಾರುಕಟ್ಟೆ ಸಗಟು ಹೂ ಮಾರಾಟಗಾರರ ಸಂಘ.
–ಭಾರತಿ ಸಜ್ಜನ್
You seem to have an Ad Blocker on.
To continue reading, please turn it off or whitelist Udayavani.