Tragic: ಆಡುವ ವೇಳೆ ಕುತ್ತಿಗೆಗೆ ಹಗ್ಗಕಟ್ಟಿ ತಮಾಷೆ; ಸ್ಟೂಲ್ ಜಾರಿ 13ರ ಬಾಲಕ ಮೃತ್ಯು
ಪ್ರಾಣ ಉಳಿಸಲು ಪರದಾಡಿದ ಕಣ್ಣು ಕಾಣದ ತಾಯಿ
Team Udayavani, Sep 19, 2023, 5:59 PM IST
ಲಕ್ನೋ: ಆಟವಾಡುವ ವೇಳೆ ತಮಾಷೆ ಮಾಡಲು ಹೋಗಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜಲೌನ್ ನ ಕಾನ್ಶಿರಾಮ್ ಕಾಲೋನಿ ಭಾನುವಾರ(ಸೆ.17 ರಂದು) ಈ ಘಟನೆ ನಡೆದಿದ್ದು, ಜಯೇಶ್ (13) ಎನ್ನುವ ಬಾಲಕ ಮೃತಪಟ್ಟಿದ್ದಾನೆ.
ಜಯೇಶ್ ಮನೆಯಲ್ಲಿ ತಂಗಿಯರಾದ ಮಹಾಕ್ ಮತ್ತು ಆಸ್ತಾ ಅವರೊಂದಿಗೆ ಆಟ ಆಡುತ್ತಿದ್ದರು. ಈ ವೇಳೆ ತಮಾಷೆಗೆಂದು ಕಣ್ಣಿಗೆ ಬಟ್ಟೆಯ ತುಂಡನ್ನು ಕಟ್ಟಿಕೊಂಡು, ಕುತ್ತಿಗೆಗೆ ಹಗ್ಗವನ್ನು ಹಾಕಿ ಸ್ಟೂಲ್ ವೊಂದರ ಮೇಲೆ ನಿಂತುಕೊಂಡಿದ್ದಾರೆ. ಹಗ್ಗವನ್ನು ಕಿಟಕಿಗೆ ಕಟ್ಟಲಾಗಿತ್ತು. ಆದರೆ ಈ ವೇಳೆ ಆಕಸ್ಮಿಕವಾಗಿ ಸ್ಟೂಲ್ ತಳ್ಳಿದ ಪರಿಣಾಮ ಹಗ್ಗ ಜಯೇಶ್ ಅವರ ಕುತ್ತಿಗೆಗೆ ಬಿಗಿಯಾಗಿದೆ. ಮೊದಲು ತಂಗಿಯರು ನೋಡಿ ಅಣ್ಣ ತಮಾಷೆ ಮಾಡಲು ಒದ್ದಾಡುತ್ತಿದ್ದಾನೆ ಅಂದುಕೊಂಡಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಆತನ ಬಾಯಿಯಿಂದ ರಕ್ತ ಬಂದಿದೆ. ಈ ವೇಳೆ ಸಹೋದರಿಯರು ಜೋರಾಗಿ ಕಿರುಚಾಡಿ ತಾಯಿಗೆ ವಿಚಾರ ಮುಟ್ಟಿಸಿದ್ದಾರೆ.
ಕಣ್ಣು ಕಾಣದ ತಾಯಿ.. ಬಾಲಕ ಜಯೇಶ್ ಅವರ ತಾಯಿ ಸಂಗೀತ ಅವರು ಬಾಲ್ಯದಿಂದಲೇ ಅಂಧರಾಗಿದ್ದಾರೆ. ಘಟನೆ ನಡೆಯುವ ವೇಳೆ ಅವರು ಮಲಗಿದ್ದರು. ಜಯೇಶ್ ಅವರ ತಂದೆ ಕೆಲಸಕ್ಕೆ ಹೋಗಿದ್ದರು. ಮಗನ ಕುತ್ತಿಗೆಗೆ ಹಗ್ಗ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಬಿಡಿಸಬೇಕೆಂದು ಕಣ್ಣು ಕಾಣದ ತಾಯಿ ಮನೆ ಎಲ್ಲೆಡೆ ಚೂರಿಯನ್ನು ಹುಡುಕಲು ನೋಡಿದ್ದಾರೆ. ಆದರೆ ಅವರು ಏನು ಮಾಡಲಾಗಿಲ್ಲ. ಮಗ ಜಯೇಶ್ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ನನಗೆ ಕಣ್ಣು ಕಾಣುತ್ತಿದ್ದರೆ, ನನ್ನ ಮಗ ಸಾಯುತ್ತಿರಲಿಲ್ಲ. ನನ್ನ ಮುಂದೆ ಮಗನಿಗೆ ಹೀಗೆ ಆಯಿತೆಂದು ತಾಯಿ ಆಳುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.