Kapu ಪತಿಗೆ ಮೆಣಸಿನ ಪುಡಿ ಬೆರೆಸಿದ ಬಿಸಿ ನೀರು ಎರಚಿದ ಪತ್ನಿ
ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಶಂಕೆ; ಪತಿಗೆ ಹಲ್ಲೆ ನಡೆಸಿ ಗೃಹಬಂಧನದಲ್ಲಿರಿಸಿದ ಪತ್ನಿ
Team Udayavani, Sep 20, 2023, 11:42 PM IST
ಕಾಪು: ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿ ಸ್ವತಃ ಪತ್ನಿಯೇ ಪತಿಗೆ ಖಾರದ ಪುಡಿ ಬೆರೆಸಿದ ಬಿಸಿ ನೀರು ಎರಚಿ ಹಲ್ಲೆ ನಡೆಸಿ ಮನೆಯೊಳಗೆ ಕೂಡಿ ಹಾಕಿ ದೌರ್ಜನ್ಯವೆಸಗಿರುವ ಘಟನೆ ಕಾಪು ತಾಲೂಕಿನ ಮಣಿಪುರ ಗ್ರಾಮದ ಗುಜ್ಜಿ ಎನ್ನುವಲ್ಲಿ ನಡೆದಿದೆ.
ಇನ್ನಾ ಮಡ್ಮಣ್ ನಿವಾಸಿ ಮೊಹಮ್ಮದ್ ಆಸೀಫ್ (22) ದೌರ್ಜನ್ಯಕ್ಕೊಳಗಾದ ಪತಿ. ಆತನ ಪತ್ನಿ ಮಣಿಪುರ ಗುಜ್ಜಿ ನಿವಾಸಿ ಅಫ್ರೀನ್ ಸ್ವತಃ ಪತಿಗೆ ಹಲ್ಲೆ ನಡೆಸಿ ಗೃಹಬಂಧನದಲ್ಲಿರಿಸಿದ ಆರೋಪಕ್ಕೊಳಗಾಗಿರುವ ಮಹಿಳೆ.
11 ತಿಂಗಳ ಹಿಂದೆ ಆಸಿಫ್ ಮತ್ತು ಅಫ್ರೀನ್ ವಿವಾಹವಾಗಿದ್ದು, ಮದುವೆಯಾದ ಒಂದೂವರೆ ತಿಂಗಳ ಬಳಿಕ ಆಕೆ ಪತಿಯ ಮನೆಯಿಂದ ಮಣಿಪುರದಲ್ಲಿರುವ ತನ್ನ ತವರು ಮನೆ ಸೇರಿದ್ದಳು. ತವರು ಮನೆ ಸೇರಿದ ಬಳಿಕ ನಾನು ನಿನಗೆ ಬೇಕಾದಲ್ಲಿ ನನ್ನ ಮನೆಗೆ ಬಂದು ಇರಬೇಕು ಎಂದು ಪತಿಯನ್ನು ಒತ್ತಾಯಿಸಿದ್ದಳು. ಅದರಂತೆ ಪತಿ ಕಳೆದ 9 ತಿಂಗಳಿನಿಂದ ಪತ್ನಿಯ ಮನೆಯಲ್ಲೇ ಉಳಿದಿದ್ದ. ಪತಿ ತನ್ನ ಮನೆಯಲ್ಲಿ ಇರುವಾಗಲೇ ಆತ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದ ಆಕೆ ಈ ಬಗ್ಗೆ ಗಂಡನ ಜತೆ ಪದೇ ಪದೆ ಜಗಳವಾಡುತ್ತಿದ್ದಳು.
ಸೆ. 16ರಂದು ಅಫ್ರೀನ್ ತನ್ನ ಪತಿಯ ಮೊಬೈಲ್ ಅನ್ನು ಪಡೆದುಕೊಂಡು ನೋಡುತ್ತಿದ್ದ ವೇಳೆ ಆತ ನನಗೆ ಹೊರಗೆ ಹೋಗಲಿದೆ ಎಂದು ಆಕೆಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದ. ಈ ವೇಳೆ ಆಕೆ ಪತಿಯ ಕೈಗೆ ಕಚ್ಚಿ ಗಾಯಗೊಳಿಸಿದ್ದಳು. ಬಳಿಕ ಪತಿ ಸ್ನಾನಕ್ಕೆಂದು ಬಚ್ಚಲು ಮನೆಗೆ ಹೋಗಿದ್ದು, ಪತ್ನಿ ಬಾತ್ರೂಮ್ ಬಾಗಿಲು ಬಡಿದಿದ್ದಳು. ಆತ ಬಾಗಿಲು ತೆಗೆಯುತ್ತಿದ್ದಂತೆ ಸ್ಟೀಲ್ ಪಾತ್ರೆಯಲ್ಲಿ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ತಂದು ಆತನ ಮೈಮೇಲೆ ಎರಚಿದ್ದು, ಇದರಿಂದ ಆತನ ಮುಖ, ಎದೆ, ಬೆನ್ನು ಕೈಗಳಿಗೆ ಸುಟ್ಟಗಾಗಳಾಗಿತ್ತು.
ಈ ವೇಳೆ ಗಾಯಗೊಂಡ ಆಸಿಫ್ ಆಸ್ಪತ್ರೆಗೆ ಹೋಗದಂತೆ ತಡೆದ ಪತ್ನಿ ಅಫ್ರೀನ್, ಅತ್ತೆ ಮೈಮುನಾ, ಮಾವ ಹುಸೈನ್ ಹಾಗೂ ನೆರೆಮನೆಯ ಲತೀಫ್ ಅವರು ಸೇರಿ ಆತನನ್ನು ಮನೆಯೊಳಗೆ ಕೂಡಿಹಾಕಿ ದೌರ್ಜನ್ಯವೆಸಗಿರುವುದಾಗಿ ತಿಳಿದು ಬಂದಿದೆ. ಗೃಹ ಬಂಧನದೊಳಗಿದ್ದ ಆಸಿಫ್ಗೆ ಉಳ್ಳಾಲ ನಿವಾಸಿ ಜಮಾತ್ ಎಂಬಾತ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಬಿಡುವುದಿಲ್ಲ, ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಹಲ್ಲೆಗೊಳಗಾದ ಆಸಿಫ್ ಈ ವಿಷಯವನ್ನು ತನ್ನ ಬಾವ ಶಫಿ ಅವರಿಗೆ ಫೋನ್ ಮಾಡಿ ತಿಳಿಸಿದ್ದು, ಅವರು ಬಂದು ಗಾಯಾಳುವನ್ನು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮೊಹಮ್ಮದ್ ಆಸೀಫ್ ನೀಡಿರುವ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು
Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು
Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ
Udupi:ಕರಾವಳಿ ನಿರ್ಲಕ್ಷ್ಯ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ: ಜನಪ್ರತಿನಿಧಿಗಳ ಎಚ್ಚರಿಕೆ
Udupi: ಬೆಡ್ ಶೀಟ್ ಮಾರುವ ನೆಪದಲ್ಲಿ ಅಂಬಲಪಾಡಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.