![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Sep 22, 2023, 12:39 AM IST
ಬಂಟ್ವಾಳ: ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆರೋಪಿಯೋರ್ವ ಯುವತಿಯೊಬ್ಬಳ ಮನೆಯ ಬಳಿಗೆ ತೆರಳಿ ಆಕೆ ಮಲಗಿದ್ದ ಕೋಣೆಯ ಕಿಟಕಿ ಪರದೆ ತೆರೆದ ಘಟನೆ ಬಾಳ್ತಿಲ ಗ್ರಾಮದಲ್ಲಿ ಸೆ. 20ರಂದು ನಡೆದಿದೆ.
ಸ್ಥಳೀಯ ನಿವಾಸಿ ವಿಶ್ವನಾಥ ಪ್ರಕರಣ ಆರೋಪಿಯಾಗಿದ್ದಾನೆ. ಯುವತಿಯು ರಾತ್ರಿ 10ರ ಸುಮಾರಿಗೆ ತಂಗಿಯೊಂದಿಗೆ ಕೋಣೆಯಲ್ಲಿ ಮಲಗಿದ್ದು, ಈ ವೇಳೆ ಆರೋಪಿಯು ಕಿಟಕಿಯ ಪರದೆ ಸರಿಸಿ ಇಣುಕಿ ನೋಡಿದ್ದು, ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದಲೇ ಇಣುಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.