Asiad: ಏಷ್ಯಾಡ್‌ನಿಂದ ಭಾರತದ ಕ್ರೀಡಾಚಹರೆ ಬದಲಾಗುವ ಭರವಸೆ


Team Udayavani, Sep 23, 2023, 12:56 AM IST

asiad india

19ನೇ ಏಷ್ಯನ್‌ ಗೇಮ್ಸ್‌ ಶನಿವಾರ ಆರಂಭ. ಈಗಾಗಲೇ ಹಲವು ಸ್ಪರ್ಧೆಗಳು ನಡೆಯುತ್ತಿವೆ. ರವಿವಾರದಿಂದಲೇ ಭಾರತದ ಚಿನ್ನದ ಸದ್ದು ಕೇಳಿ ಬರಬಹುದು. ಭಾರತ ವುಶು ತಂಡಕ್ಕೆ ಚೀನ ವೀಸಾ ನಿರಾಕರಿಸಿದ ಸುದ್ದಿಯೂ ಬಂದಿದೆ. ಅದಕ್ಕೆ ಪ್ರತಿಯಾಗಿ ಭಾರತದ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಚೀನಕ್ಕೆ ಹೋಗುವುದಿಲ್ಲ ಅಂದಿದ್ದೂ ಆಗಿದೆ. ಚೀನ ದೇಶಕ್ಕೆ ಭಾರತದೊಂದಿಗೆ ತಕರಾರು ಮಾಡಿಕೊಳ್ಳದಿದ್ದರೆ ಸಮಾಧಾನ ಇರುವುದಿಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಇವನ್ನೆಲ್ಲ ಬದಿಗಿಟ್ಟು ಕ್ರೀಡಾ ದೃಷ್ಟಿಕೋನದಿಂದ ನೋಡುವುದಾದರೆ ಭಾರತ ಏಷ್ಯಾಡ್‌ನ‌ಲ್ಲಿ ಬಲಿಷ್ಠ ತಂಡಗಳಲ್ಲೊಂದು. ಆದರೆ ಭಾರತದ ಜನಸಂಖ್ಯೆ ಮತ್ತು ಗೆಲ್ಲುವ ಪದಕಗಳಿಗೆ ಹೋಲಿಸಿದರೆ ಅಜಗಜಾಂತರ.

ಇದುವರೆಗಿನ ಅಷ್ಟೂ ಏಷ್ಯಾಡ್‌ಗಳನ್ನು ಪರಿಗಣಿಸಿದರೆ ಭಾರತ ಸಾರ್ವಕಾಲಿಕವಾಗಿ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 155 ಚಿನ್ನ, 201 ಬೆಳ್ಳಿ, 316 ಕಂಚು ಸೇರಿ ಒಟ್ಟು 672 ಪದಕಗಳನ್ನು ಗೆದ್ದಿದೆ. ಪದಕ ಸಾಧನೆಯನ್ನೇ ಗಣಿಸುವುದಾದರೆ ಚೀನ, ಜಪಾನ್‌, ದ.ಕೊರಿಯಾಗಳು ಕ್ರಮವಾಗಿ 3,187, 3,054, 2,235 ಪದಕಗಳನ್ನು ಗೆದ್ದು ಸಾರ್ವ ಕಾಲಿಕವಾಗಿ ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಈ ವಿಚಾರದಲ್ಲಿ ಭಾರತ ಭಾರೀ ಪ್ರಮಾಣದಲ್ಲಿ ಹಿಂದುಳಿದಿದೆ. ಇವೆಲ್ಲ ಈ ಹಿಂದಿನ 18 ಏಷ್ಯಾಡ್‌ಗಳಲ್ಲಿನ ಭಾರತದ ಸಾಧನೆ. ಆದರೆ ಈಗ ಭಾರತ ಬದಲಾಗಿದೆ. ಎಲ್ಲ ವಿಭಾಗಗಳಲ್ಲೂ ಅದ್ಭುತ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ. ಕ್ರೀಡೆಯಲ್ಲೂ ತನ್ನದೇ ಆದ ಛಾಪು ಮೂಡಿಸಲು ಭರದ ಸಿದ್ಧತೆ ಮಾಡಿಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಪದಕ ಗಳಿಕೆಯಲ್ಲಿ ಗಣನೀಯ ಸಾಧನೆಯಾಗಿದ್ದೇ ಈ ಆಶಾವಾದಕ್ಕೆ ಕಾರಣ.

ಹಲವು ದಶಕಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಮೊದಲ ಬಾರಿಗೆ ಚಿನ್ನ, ಬೆಳ್ಳಿ, ಕಂಚು ಮೂರೂ ವಿಭಾಗಗಳಲ್ಲಿ ಪದಕ ಬಂದಿತ್ತು. ಒಲಿಂಪಿಕ್ಸ್‌ನಂತಹ ಜಗತ್ತಿನ ಬಲಿಷ್ಠ ದೇಶಗಳು ಸ್ಪರ್ಧಿಸುವ ಕೂಟದಲ್ಲೇ ಭಾರತ ಸುಧಾರಿತ ಪ್ರದರ್ಶನ ನೀಡಿರಬೇಕಾದರೆ, ಏಷ್ಯನ್‌ ಗೇಮ್ಸ್‌ನಲ್ಲಿ ಏಕೆ ಸಾಧ್ಯವಿಲ್ಲ?

ಸಾಧ್ಯವಿದೆ ಎಂಬ ಭರವಸೆಯಲ್ಲೇ ದೇಶದ ಕ್ರೀಡಾಸಂಸ್ಥೆಗಳು, ಕ್ರೀಡಾ ಸಚಿವಾಲಯಗಳು ಆ್ಯತ್ಲೀಟ್‌ಗಳ ತರಬೇತಿಗೆ ಹಣವನ್ನು ವೆಚ್ಚ ಮಾಡು ತ್ತಿವೆ, ಪರಿಶ್ರಮವನ್ನೂ ಹಾಕುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಕ್ರೀಡಾಜಗತ್ತಿನಲ್ಲಿ ಕಂಡುಬಂದ ಆಶಾದಾಯಕ ಬೆಳವಣಿಗೆಯಿದು. ಪದಕ ಗೆದ್ದ ಮೇಲೆ ಕೋಟಿಗಟ್ಟಲೇ ಹಣ ಕೊಡುವ ಹಳೆ ಚಾಳಿಯ ಬದಲು, ಅದಕ್ಕಿಂತ ಮುನ್ನವೇ ಗುಣಮಟ್ಟದ ತರಬೇತಿಗೆ ಹಣ ನೀಡುವ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ ವ್ಯವಸ್ಥೆ ಜಾರಿಯಾಗಿದೆ.

ಕೇಂದ್ರ ಸರಕಾರ ಆರಂಭಿಸಿದ ಈ ಕ್ರಮಕ್ಕೆ ರಾಜ್ಯ ಸರಕಾರಗಳೂ ಬೆಂಬಲ ನೀಡಿವೆ. ಈ ಬಾರಿ ಪದಕ ಗೆಲ್ಲುವ ಬಲವಾದ ಭರವಸೆಯನ್ನು ಹಲವು ಸ್ಪರ್ಧಿಗಳು, ತಂಡಗಳು ಮೂಡಿಸಿವೆ. ಕ್ರಿಕೆಟ್‌, ಹಾಕಿ, ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವುದು ಕಷ್ಟವೇ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇನ್ನು ಫ‌ುಟ್‌ಬಾಲ್‌ನಲ್ಲಿ ಭಾರತ ಏಷ್ಯಾದ ಮಟ್ಟಿಗೆ ಬಲಿಷ್ಠ ತಂಡವೇ ಆದರೂ, ಈ ಕೂಟಕ್ಕೆ ಪೂರ್ಣ ಆಸಕ್ತಿಯಿಂದ ಭಾರತ ಸಿದ್ಧವಾಗಿಲ್ಲ ಎಂಬ ಸಂದೇಶವಂತೂ ಸ್ಪಷ್ಟವಾಗಿ ಸಿಕ್ಕಿದೆ. ಅದೇನೇ ಇದ್ದರೂ ಈ ಬಾರಿಯ ಏಷ್ಯಾಡ್‌ನಿಂದ ಭಾರತದ ಕ್ರೀಡಾ ಚಹರೆ ಬದಲಾಗಲಿದೆ ಎಂಬ ಬಲವಾದ ಭರವಸೆ ಹುಟ್ಟಿದೆ. ಭಾರತದ ಸ್ಪರ್ಧಿಗಳಿಗೆ ಶುಭಾಶಯಗಳು.

ಟಾಪ್ ನ್ಯೂಸ್

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

Efforts to restore trust with China: Army chief Dwivedi

Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ

Dina Bhavishya

Daily Horoscope; ಹೆಚ್ಚಿನವರಿಗೆ ಮಿಶ್ರಫ‌ಲ ಕೊಡುವ ದಿನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Flight: ಹುಸಿ ಬಾಂಬ್‌ ಬೆದರಿಕೆ: ಕಠಿನ ಶಿಕ್ಷೆ ಅಗತ್ಯ

Flight: ಹುಸಿ ಬಾಂಬ್‌ ಬೆದರಿಕೆ: ಕಠಿನ ಶಿಕ್ಷೆ ಅಗತ್ಯ

ARMY (2)

Jammu and Kashmir; ಉಗ್ರರ ದಮನದ ಜತೆಯಲ್ಲಿ ನಾಗರಿಕರ ರಕ್ಷಣೆಯೂ ಮುಖ್ಯ

Server Down: ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

Server Down: ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

Agricultural: ರೈತರ ಸಂಕಷ್ಟಕ್ಕೆ ಸ್ಪಂದನೆ ಮೊದಲ ಆದ್ಯತೆಯಾಗಲಿ

Agricultural: ರೈತರ ಸಂಕಷ್ಟಕ್ಕೆ ಸ್ಪಂದನೆ ಮೊದಲ ಆದ್ಯತೆಯಾಗಲಿ

ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

National Security Guard: ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.