![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Sep 23, 2023, 1:49 PM IST
ಹುಬ್ಬಳ್ಳಿ: ಎನ್ ಡಿಎ ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಮೈತ್ರಿಕೂಟದ ಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1998-99 ರಲ್ಲಿ ಎನ್ ಡಿಎ ರಚನೆಯಾಗಿತ್ತು.2014 ಹಾಗೂ 2019ಕ್ಕೆ ಎನ್ ಡಿಎ ಅಧಿಕಾರ ಬಂದಿದೆ. ಯಾವುದೇ ಸಮಯದಲ್ಲಿ ಎನ್ ಡಿಎ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಬರಲಿಲ್ಲ. ಏಕೆಂದರೆ ಎನ್ ಡಿಎ ಮೇಲೆ ಒಂದೇ ಒಂದು ಆರೋಪ ಇಲ್ಲ. ಯುಪಿಎ ಮೇಲೆ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಆರೋಪವಿದೆ. ಈ ಕಾರಣಕ್ಕೆ ಯುಪಿಎ ಹೆಸರು ಬದಲಾವಣೆ ಆಗಿದೆ. ಆದರೆ ಎನ್ಡಿಎ ಯಾವತ್ತೂ ತನ್ನ ಹೆಸರು ಬದಲಾವಣೆ ಮಾಡಲ್ಲ ಎಂದರು.
ಜೆಡಿಎಸ್ ಮೈತ್ರಿ ಸಂತಸದ ತಂದಿದೆ:
ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಎನ್ ಡಿಎ ಜತೆ ಸೇರಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗ ಅವರು ನಮ್ಮ ಜೊತೆ ಸೇರಿರುವುದು ಸಂತಸದ ಸಂಗತಿ. ಆದರೆ ಇದುವರೆಗೂ ಯಾವುದೇ ಕ್ಷೇತ್ರ ಅಥವಾ ಇಷ್ಟೇ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ. ಆ ಕುರಿತು ರಾಜ್ಯದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಡ್ಯಾಮ್ ಪರಿಸ್ಥಿತಿ ನೋಡಿ ವಾದಿಸಿಲ್ಲ:
ಕಾವೇರಿ ವಿಚಾರದಲ್ಲಿ ಸರ್ಕಾರ ಅವರ ಮತ್ತು ನಮ್ಮ ಡ್ಯಾಂ ಸ್ಥಿತಿ ನೋಡಿ ವಾದ ಮಾಡಿಲ್ಲ. ಸಂಸದ ಡಿ.ಕೆ. ಸುರೇಶ್ ಅವರು ಆನ್ ಲೈನ್ ಮೂಲಕ ಹಾಜರಾಗುವುದು ಇಂತಹ ಎಲ್ಲ ಸಂಗತಿಗಳು ನಡೆದುಹೋಗಿವೆ. ನಾವು ಕೇಂದ್ರದಿಂದ ಎಲ್ಲಾ ಸಹಕಾರ ಕೊಡುತ್ತಿದ್ದೇವೆ. ಮುಂದೆಯೂ ಕೊಡುತ್ತೇವೆ. ಈ ವಿಚಾರ ಕೋರ್ಟ್ ನಲ್ಲಿರುವ ಕಾರಣ ನಾನು ಬಹಳ ಮಾತನಾಡಲ್ಲ. ಮೊನ್ನೆ ಡಿಸಿಎಂ ಡಿ.ಕೆ. ಶಿವಕುಮಾರ್ ನಮ್ಮ ಮನೆಗೆ ಬಂದಾಗ ವಿವರವಾಗಿ ಮಾತನಾಡಿದ್ದೇನೆ ಎಂದರು.
ರಾಜ್ಯದಲ್ಲಿ ಬರಗಾಲ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA)ದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ಮಾಡುವುದಕ್ಕೆ ಬರಲ್ಲ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಹೇಳಿದ್ದೇವೆ. ಇದು ಸೌಹಾರ್ದಯುತವಾಗಿ ಬಗೆಹರಿಸಬೇಕು. ತಮಿಳುನಾಡಿನಲ್ಲಿ ಬೆಳೆಗೆ ಜಾಸ್ತಿ ನೀರು ಉಪಯೋಗಿಸಿದ್ದಾರೆ. ನೀವು ಮೊದಲು ಶಾಲು ಪೇಟಾ ಹಾಕಿ ಸ್ವಾಗತ ಮಾಡಿದ್ದೀರಿ. ಅವರ ಮೈತ್ರಿ ಪಕ್ಷಕ್ಕೆ ಒಂದಿಷ್ಟು ಸಮಯ ಕೇಳಬಹುದಿತ್ತು. ಡಿಎಂಕೆ ಅವರು ದಿನಾ ಬೆಳಗ್ಗೆ ಎದ್ದರೆ ಮೋದಿ ಅವರನ್ನು ಬಯ್ಯುವುದೆ ಕೆಲಸವಾಗಿದೆ ಎಂದರು.
ತಮ್ಮ ತಪ್ಪುಮುಚ್ಚಿಹಾಕಲು ಜನರನ್ನು ತಪ್ಪು ದಾರಿಗೆ ಎಳೆಯಲು ಸಿಎಂ ಸಿದ್ದರಾಮಯ್ಯ ನಿಸ್ಸೀಮರು. ಮೈತ್ರಿ ಪಕ್ಷಗಳ ನಾಯಕರು ಖರ್ಗೆ ಅವರೇ, ಇದುವರೆಗೆ ಏಕೆ ಅವರು ಇಬ್ಬರನ್ನು ಕರೆದು ಮಾತನಾಡಿಲ್ಲ. ಎಲ್ಲವನ್ನೂ ಮೋದಿ ಮೇಲೆ ಗೂಬೆ ಕೂರಿಸುವುದೆ ಇವರ ಕೆಲಸ ಎಂದು ಸಚಿವ ಜೋಶಿ ಹರಿಹಾಯ್ದರು.
ಇದನ್ನೂ ಓದಿ: Modi Multiplex: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎಂದ ಕಾಂಗ್ರೆಸ್ ಹಿರಿಯ ನಾಯಕ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.