USA: ಅ. 8ರಂದು ಬೃಹತ್ ದೇಗುಲ ದರ್ಶನ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣ
ಬಿಎಪಿಎಸ್ನಿಂದ ಅಕ್ಷರಧಾಮ ದೇವಸ್ಥಾನ
Team Udayavani, Sep 24, 2023, 10:32 PM IST
ದೇಶದ ಹೊರಗೆ ನಿರ್ಮಾಣವಾಗುತ್ತಿರುವ ಅತಿದೊಡ್ಡ ದೇಗಲು ಅ. 8ರಂದು ಲೋಕಾರ್ಪಣೆಗೊಳ್ಳಲಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಇದು ನಿರ್ಮಾಣಗೊಂಡಿದೆ. ಸ್ವಯಂಸೇವಕರೇ ಇದನ್ನು ಅದ್ದೂರಿಯಾಗಿ ನಿರ್ಮಿಸಿರುವುದು ವಿಶೇಷ.
ಹೊಸ ದೇಗುಲದ ವಿಶೇಷ ಏನು?
ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್ವಿಲ್ಲೆ ಟೌನ್ಶಿಪ್ನಲ್ಲಿ ಅಕ್ಷರಧಾಮ ದೇಗುಲ ನಿರ್ಮಾಣವಾಗಿದೆ. ಬಿಎಪಿಎಸ್ ಸ್ವಾಮಿ ನಾರಾಯಣ ಅಕ್ಷರಧಾಮ ದೇಗುಲ ಅದರ ನೇತೃತ್ವ ವಹಿಸಿದೆ. 255 ಅಡಿ x 345 ಅಡಿ x 191 ಸುತ್ತಳತೆ ಹೊಂದಿದೆ. ಭಾರತ ಹೊಂದಿರುವ ಸಾಂಸ್ಕೃತಿಕ ಪರಂಪರೆಗಳನ್ನು ಆಧರಿಸಿ ಸುಂದರ ಕೆತ್ತನೆಯ ಶಿಲ್ಪಗಳು ಇದರಲ್ಲಿವೆ. 10 ಸಾವಿರ ವಿವಿಧ ನೃತ್ಯ ಭಂಗಿಗಳು ಇರುವ ವಿಗ್ರಹಗಳನ್ನು ಕೆತ್ತಲಾಗಿದೆ.
12,500 – ನಿರ್ಮಾಣದಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರು
12 ವರ್ಷಗಳು- ಕಾಮಗಾರಿ ಪೂರ್ತಿಗೊಳ್ಳಲು ಬೇಕಾದ ಅವಧಿ – 2011ರಿಂದ 2023
183 ಎಕರೆ- ದೇಗುಲ ಹೊಂದಿರುವ ಜಮೀನು
ಗರ್ಭ ಗುಡಿ, 12 ದೇವರ ಗುಡಿಗಳು, 9 ಗೋಪುರಗಳು, 9 ಪಿರಮಿಡ್ ಆಕಾರದ ಗೋಪುರಗಳು ಇದರಲ್ಲಿವೆ.
1,000 ವರ್ಷ- ಇಷ್ಟು ವರ್ಷ ಬಾಳಿಕೆ ಬರುವಂತೆ ನಿರ್ಮಾಣ
ದೂರವೆಷ್ಟು?
90 ಕಿ.ಮೀ.- ನ್ಯೂಯಾರ್ಕ್ನ ಟೈಮ್ಸ್ ಚೌಕದಿಂದ
289 ಕಿ.ಮೀ.- ವಾಷಿಗ್ಟನ್ ಡಿ.ಸಿ.ಯ ಉತ್ತರಕ್ಕೆ
ಎರಡನೇ ಅತ್ಯಂತ ದೊಡ್ಡ ದೇಗುಲ?
ಕಾಂಬೋಡಿಯಾದ ಆ್ಯಂಗ್ಕೋರ್ ವಾಟ್ ಜಗತ್ತಿನ ಅತ್ಯಂತ ದೊಡ್ಡ ದೇಗುಲ ಎಂಬ ಹೆಗ್ಗಳಿಕೆಗೆ ಪಡೆದಿದೆ. 500 ಎಕರೆ ಪ್ರದೇಶದಲ್ಲಿ ಅದು ವ್ಯಾಪಿಸಿದೆ. ಜತೆಗೆ ಯುನೆಸ್ಕೋದ ವಿಶ್ವ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ದಾಖಲಾಗಿದೆ. 2005ರ ನವೆಂಬರ್ನಲ್ಲಿ ಹೊಸದಿಲ್ಲಿಯಲ್ಲಿ ಲೋಕಾರ್ಪಣೆಗೊಂಡಿರುವ ಅಕ್ಷರಧಾಮ ದೇಗುಲ 100 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
ಯಾವಾಗ ಉದ್ಘಾಟನೆ?
ಅ. 8
ಭಾರತದಿಂದಲೂ ಕಲ್ಲುಗಳ ಪೂರೈಕೆ
ಅಕ್ಷರಧಾಮ ದೇಗುಲ ನಿರ್ಮಾಣಕ್ಕೆ ನಾಲ್ಕು ಬಗೆಯ ಕಲ್ಲುಗಳನ್ನು ಬಳಕೆ ಮಾಡಲಾಗಿದೆ. ಸುಣ್ಣದ ಕಲ್ಲು (ಬಲ್ಗೇರಿಯಾ ಮತ್ತು ಟರ್ಕಿ), ಗುಲಾಬಿ ಬಣ್ಣದ ಕಲ್ಲು, ಮಾರ್ಬಲ್ (ಗ್ರೀಸ್), ಗ್ರಾನೈಟ್ (ಭಾರತ ಮತ್ತು ಚೀನ), ಸ್ಯಾಂಡ್ಸ್ಟೋನ್ (ಭಾರತ) ಗಳನ್ನು ತರಿಸಿಕೊಂಡು ನಿರ್ಮಾಣ.
2 ಮಿಲಿಯ ಕ್ಯೂಬಿಕ್ ಫೀಟ್- ಬಳಕೆ ಮಾಡಲಾದ ಕಲ್ಲುಗಳು
ದೇಶದಿಂದಲೂ ಪವಿತ್ರ ಜಲ
ಭಾರತದ ಪವಿತ್ರ ನದಿಗಳ ಸಹಿತ ಜಗತ್ತಿನ 300 ನದಿ ಮೂಲಗಳಿಂದ ನೀರು ಸಂಗ್ರಹಿಸಿ ಅಲ್ಲಿಗೆ ಕೊಂಡೊಯ್ಯಲಾಗಿದೆ
ಸ್ವಯಂಸೇವಕರು ಯಾರೆಲ್ಲ?
ವಿದ್ಯಾರ್ಥಿಗಳು, ವಿವಿಧ ಕಂಪೆನಿಗಳ ಸಿಇಒಗಳು, ವೈದ್ಯರು, ಎಂಜಿನಿಯರ್ಗಳು, ಕಟ್ಟಡ ವಿನ್ಯಾಸಕಾರರು ದೇಗುಲ ನಿರ್ಮಾಣದಲ್ಲಿ ಭಾಗಿಯಾಗಿದ್ದರು. ಕೆಲವರು ತಮ್ಮ ಉದ್ಯೋಗಕ್ಕೆ ರಜೆ ಹಾಕಿ ದುಡಿದಿದ್ದಾರೆ ಎಂದು ಬಿಎಪಿಎಸ್ ಅಧಿಕಾರಿಗಳು ಹೇಳಿದ್ದಾರೆ. ಹಲವರು ದೇಗುಲ ನಿರ್ಮಾಣಕ್ಕಾಗಿ ಸ್ಥಳದಲ್ಲಿಯೇ ಬಾಡಿಗೆಗೆ ಮನೆಗಳನ್ನು ಪಡೆದು ವಾಸ್ತವ್ಯ ಹೂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ
Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ
Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್ ಅಂಬಾನಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.