![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 1, 2023, 1:48 AM IST
ಬ್ರಹ್ಮಾವರ: ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಮೀನುಗಾರನೊಬ್ಬ ಸಾವನ್ನಪ್ಪಿದ ಘಟನೆ ಸೆ. 30ರಂದು ಬ್ರಹ್ಮಾವರ ಸಮೀಪ ಉಪ್ಪೂರು ಅಮ್ಮುಂಜೆ ಯಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ದನಂಜಯ ಕುಂದರ್ (60) ಮೃತ ವ್ಯಕ್ತಿ.
ರಾತ್ರಿ ವಿಪರೀತ ಗಾಳಿ ಮಳೆಗೆ ವಿದ್ಯುತ್ ತಂತಿ ಸಡಿಲಗೊಂಡು ರಸ್ತೆಗೆ ಅಡ್ಡವಾಗಿ ಜೋತು ಬಿದ್ದಿದ್ದು ಕುಂದರ್ರವರು ಬೆಳಗ್ಗೆ ಬೇಗ ಬೈಕ್ನಲ್ಲಿ ಕೆಲಸಕ್ಕೆ ತೆರಳುವಾಗ ತಂತಿಯನ್ನು ಗಮನಿಸದೆ ಸ್ಪರ್ಶಿಸಿದ್ದಾರೆ. ಸಾಕಷ್ಟು ಸಮಯದ ಅನಂತರ ಇವರ ಸಂಬಂಧಿಯೋರ್ವರು ಇದನ್ನು ಗಮನಿಸಿ ಮೆಸ್ಕಾಂ ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ವಿದ್ಯುತ್ ಶಾಕ್ನಿಂದ ತೀವ್ರವಾಗಿ ಅಸ್ವಸ್ಥಗೊಂಡವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಧನಂಜಯ್ ಅವರು ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.