Lingayat ; ಸಿದ್ದರಾಮಯ್ಯನವರಿಂದ ಗೆದ್ದಿದ್ದೀರಿ..:ಶಾಮನೂರು ವಿರುದ್ಧ ಎಚ್.ವಿಶ್ವನಾಥ್ ಕಿಡಿ
ನಿಮಗೆ ಸಿಎಂ ಸ್ಥಾನ ಬೇಕಿತ್ತು ಅಂದ್ರೆ....!
Team Udayavani, Oct 1, 2023, 7:06 PM IST
ಬೆಳಗಾವಿ: ಸರ್ಕಾರದಲ್ಲಿ ಲಿಂಗಾಯತ ನಾಯಕರ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮಾಜಿ ಸಚಿವ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದು, ಜಾತಿಯ ಪಕ್ಷದ ಪ್ರತಿನಿಧಿ ಎಂದು ಮಾತಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ನಿಮಗೆ ಕಾಂಗ್ರೆಸ್ ನಲ್ಲಿ ಅವಕಾಶಗಳು ಸಿಕ್ಕಿವೆ. ಏಳು ಮಂದಿಗೆ ಮಂತ್ರಿ ಗಿರಿ ಕೊಟ್ಟಿದ್ದಾರೆ ಇನ್ನೂ ಎಷ್ಟು ಜನ ಬೇಕಿತ್ತು? ಜಾತಿಯ ಮೇಲೆ ಯಾರನ್ನೂ ಪೋಸ್ಟಿಂಗ್ಸ್ ಕೊಡಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕು ಮಾಡಿಕೊಟ್ಟಿದ್ದಾರೆ. ನಿಮಗೆ ಸಿಎಂ ಸ್ಥಾನ ಬೇಕಿತ್ತು ಅಂದರೆ ನಾಯಕತ್ವ ತಗೊಳ್ಳಿ. ನಿಮ್ಮ ಜನಾಂಗದವರ ಕೈಯಲ್ಲಿ ಹೆಚ್ಚು ವೋಟ್ ಹಾಕಿಸಿಕೊಳ್ಳಿ.ಗೆದ್ದು ಬಂದು ಮುಖ್ಯಮಂತ್ರಿ ಅಗಿ, ಅದರಲ್ಲಿ ನಿಮ್ಮ ಆಸಕ್ತಿ ತೋರಿಸಿ ಎಂದು ಸವಾಲೆಸೆದಿದ್ದಾರೆ.
ಎಷ್ಟು ವೋಟ್ ಹಾಕಿಸಿದ್ದೀರಿ ನೀವು. ಇಲ್ಲಿ ಸಿದ್ದರಾಮಯ್ಯನವರಿಂದ ಎಷ್ಟು ವೋಟ್ ಬಿದ್ದಿದೆ. ನೀವೆಲ್ಲಾ ಸಿದ್ದರಾಮಯ್ಯನವರಿಂದ ಗೆದ್ದಿದೀರಿ. ನಾನು ಬಹಳ ಖಾರವಾಗಿ ಹೇಳಬೇಕಾಗುತ್ತದೆ. ಅನಾವಶ್ಯಕವಾಗಿ ಮಾತಾಡಬೇಡಿ. ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕಿ ಹೆಚ್ಚು ಜನ ಗೆದ್ದಿದ್ದಾರೆ.ನಮ್ಮ ರಾಜ್ಯದಲ್ಲಿ ಇರುವ ಲಿಂಗಾಯತ ಸೇರಿದಂತೆ ಎಲ್ಲ ಧರ್ಮದವರು ಆಶೀರ್ವಾದ ಮಾಡಿದ್ದೀರಾ?ಹೆಚ್ಚಾಗಿ ಕುರುಬ ಸಮುದಾಯದ್ದೂ ಆಗಿದೆ.ಜಾತಿ ಆಧಾರದ ಮೇಲೆ ಅಧಿಕಾರಿ ಆಯ್ಕೆ ಆಗುತ್ತಿದ್ದರೆ ಸರಿ ಮಾಡಲು ಹೇಳಿ.ಸಿದ್ದರಾಮಯ್ಯನವರಿಗೆ ಬಹಳ ಹತ್ತಿರ ಇದ್ದವರು ನೀವು.ಅದನ್ಯಾಕೆ ಬೀದಿಯಲ್ಲಿ ಬಂದು ದೊಡ್ಡ ರಂಪಾಟ ಮಾಡ್ತಿದ್ದೀರಿ. ಅಧಿಕಾರ ಶಾಹಿ ಆಡಳಿತವನ್ನ ಬೀದಿಗೆ ತಂದು ಮಾತನಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಜಾತಿ ವಿಷಯ ಮಾತಾಡಿದರೆ ಆಡಳಿತ ಕುಸಿಯುತ್ತದೆ. ನಿಮಗ್ಯಾರಿಗೂ ಜವಾಬ್ದಾರಿ ಇಲ್ಲವೇ ? ಸಣ್ಣ ಪುಟ್ಟ ಜಾತಿಗಳ ಭವಿಷ್ಯ ಇದೆ, ಅದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ ಆಗ ಜನಕ್ಕೆ ಅರ್ಥ ಆಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.