Blcakmail: ವಿಡಿಯೋ ಇಟ್ಟು ಕೊಂಡು ಬ್ಲಾಕ್ಮೇಲ್ ಆಟೋ ಚಾಲಕನಿಗೆ ಇರಿತ: ಆರೋಪಿ ಸೆರೆ
Team Udayavani, Oct 2, 2023, 10:40 AM IST
ಬೆಂಗಳೂರು: ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡು ತ್ತಿದ್ದ ಆಟೋ ಚಾಲಕನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಸಮೀಪದ ಚೊಕ್ಕನ ಹಳ್ಳಿ ನಿವಾಸಿ ನಾಗರಾಜ್(37 )ಬಂಧಿತ.
ಘಟನೆಯಲ್ಲಿ ಕಮ್ಮನಹಳ್ಳಿ ನಿವಾಸಿ, ಆಟೋ ಚಾಲಕ ಆರೋಗ್ಯ ದಾಸ್(27) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೆಲ್ಡಿಂಗ್ ಕೆಲಸ ಮಾಡುವ ನಾಗ ರಾಜ್, ಈ ಹಿಂದೆ ಕುಟುಂಬದ ಜತೆ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಆಗ ಪಕ್ಕದ ಮನೆ ನಿವಾಸಿ ಆರೋಗ್ಯದಾಸ್ ಪರಿಚಯವಾಗಿದ್ದು, ಈ ವೇಳೆ ಆರೋಗ್ಯದಾಸ್, ನಾಗರಾಜ್ ಪತ್ನಿ ಜತೆ ಆತ್ಮೀಯತೆ ಹೊಂದಿದ್ದ. ಅಲ್ಲದೆ, ಆಕೆ ಜತೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಆರೋಗ್ಯದಾಸ್ ಆಕೆಗೆ ಗೊತ್ತಾಗದ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ಆದರೆ, ಆರೋಗ್ಯದಾಸ್ ಇತ್ತೀಚೆಗೆ ಮಹಿಳೆಗೆ ಕರೆ ಮಾಡಿ ನನಗೆ ಹಣ ಕೊಡು ಇಲ್ಲದಿದ್ದರೆ ನಿನ್ನ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅದರಿಂದ ಆತಂಕಗೊಂಡ ಮಹಿಳೆ ಈ ವಿಚಾರವನ್ನು ತನ್ನ ಪತಿ ನಾಗರಾಜ್ ತಿಳಿಸಿದ್ದಾರೆ.
ಆತನಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿದ ನಾಗರಾಜ್, ಪತ್ನಿ ಮೂಲಕ ಆರೋಗ್ಯದಾಸ್ಗೆ ಕರೆ ಮಾಡಿಸಿ ಮನೆಗೆ ಬರುವಂತೆ ಹೇಳಿಸಿದ್ದಾನೆ. ಅದರಂತೆ ಆರೋಗ್ಯದಾಸ್ ಸೆ.30ರ ಮಧ್ಯಾಹ್ನ 2 ಗಂಟೆಗೆ ಕಮ್ಮನಹಳ್ಳಿಯಿಂದ ಚೊಕ್ಕನ ಹಳ್ಳಿಗೆ ಬಂದಿದ್ದಾನೆ.ಮಹಿಳೆ ಮನೆ ಒಳಗೆ ಆರೋಗ್ಯ ದಾಸ್ ಹೋಗುತ್ತಿದ್ದಂತೆ ನಾಗರಾಜ್, ನನ್ನ ಪತ್ನಿಯ ಫೋಟೋ ಗಳನ್ನು ತೆಗೆದುಕೊಂಡು ಮರ್ಯಾದೆ ತೆಗೆದಿದ್ದೀಯಾ ಎಂದು ಆತನನ್ನು ಹಿಡಿದು ಕೊಳ್ಳಲು ಯತ್ನಿಸಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ ನಾಗರಾಜ್, ಚಾಕುವಿನಿಂದ ಆರೋಗ್ಯ ದಾಸ್ ಎದೆ, ಕಿವಿಗಳಿಗೆ ಚುಚ್ಚಿ,ಮುಂಗೈಗಳಿಗೆ ಕೊಯ್ದುಗಾಯ ಮಾಡಿದ್ದಾನೆ.
ಆರೋಗ್ಯದಾಸ್ ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ನಾಗರಾಜ್ ಕೂಡ ಪತ್ನಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಗ್ಯದಾಸ್ ವಿರುದ್ಧ ಪ್ರತಿದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.