UV Fusion: ಸಂಸ್ಕೃತಿಯ ಸೊಗಡು


Team Udayavani, Oct 2, 2023, 12:28 PM IST

11–fusion-culture

ಮನೆಯ ಸಂಸ್ಕೃತಿಯಲ್ಲಿ ಮಕ್ಕಳ ಸಂಸ್ಕಾರ ಅಡಗಿರುತ್ತದೆ ಎಂಬ ಸಾಲನ್ನು ಕವಿತ್ತ ಕರ್ಮಮಣಿಯವರು ನಮ್ಮ ಸಂಸ್ಕೃತಿಯನ್ನು ಮುತ್ತಿನ ಮಣಿಯನ್ನು ಪೋಣಿಸಿದಂತೆ ಸಂಸ್ಕೃತಿಯನ್ನು ವರ್ಣಿಸಿದ್ದಾರೆ. ಆದರೆ ಅದು ಇಂದು ಕೇವಲ ಸಾಲು ಆಗಿಯೇ ಉಳಿದಿದೆ. ನಮ್ಮ ಭಾರತೀಯ ಧರ್ಮ ಆಚಾರ ವಿಚಾರಗಳನ್ನು ರೂಪಿಸುವಲ್ಲಿ ದೊಡ್ಡ ಅಬ್ಬರವನ್ನು ಹೊಂದಿದೆ.

ಭಾರತದ ಸಂಪ್ರದಾಯ ಮತ್ತು ಸಂಸ್ಕತಿಯು ಹಲವಾರು ವರ್ಷಗಳ ಹಿಂದೆ ಹುಟ್ಟಿಕೊಂಡಿದ್ದು ಮತ್ತು ಎಲ್ಲ ದೇಶಗಳು ಹಿಂದೆ ತಿರುಗಿ ನೋಡುವಂತೆ ಸಂಸ್ಕೃತಿಯು ಒಂದು ಒಂದು ಕಾಲದಲ್ಲಿ ಬೆಳೆದು ನಿಂತಿತ್ತು. ಇದಕ್ಕೆ ನಮ್ಮ ದೇಶದ ಪೂರ್ವಜರೇ ಬುನಾದಿ ಎಂದು ಹೇಳಬಹುದು. ಹಾಗಾಗಿ ನಮ್ಮ ನಾಡಿನಲ್ಲಿ ಸಂಸ್ಕೃತಿಯ ಶಿಖರವೇ ರೂಪುಗೊಂಡಿತ್ತು.

ಬಹುಶಃ ಈ ಕಾರಣದಿಂದಲೇ ಶತ ಶತಮಾನಗಳಿಂದ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿರಬೇಕು. ಆದರೆ ಇಂದಿನ ಸನ್ನಿವೇಶದಲ್ಲಿ ಅದು ನಮಗೆ ತಿಳಿಯದೆ ಕಣ್ಣೆದುರಿಗೆ ಮಾಯವಾಗುತ್ತಿದೆ. ನಾಡಿನ ಪ್ರತಿ ಪ್ರದೇಶದಲ್ಲಿ ವಿಭಿನ್ನ ಶೈಲಿಯ ಸಂಸ್ಕತಿಯನ್ನು ನೋಡುತ್ತಿದ್ದೇವೆ ಆದರೆ ಅದು ಪೂಜಿಸುವ ಕ್ರಮ ಬೇರೆ ಆದರೂ ಸಂಸ್ಕೃತಿಯ ಮೇಲೆ ಇದ್ದ ಗೌರವ ಒಂದೇ ಆಗಿರುತ್ತಿತ್ತು. ಹಿಂದೆ ಪ್ರತಿಯೊಂದು ವಿಷಯದಲ್ಲೂ ನಮ್ಮ ಸಂಸ್ಕೃತಿಯು ಪ್ರಜ್ವಲಿಸುತ್ತಿತ್ತು. ಇಂದು ಕೇವಲ ನಾಡು ಬೆಳೆಯುತ್ತಿದೆ ಸಂಸ್ಕೃತಿಯು ಕ್ಷೀಣಿಸುತ್ತಿದೆ.

ಇಂದು ಸಂಸ್ಕೃತಿಗೆ ಪ್ರಾಮುಖ್ಯತೆಯನ್ನು ನೀಡುವ ಬದಲು ವ್ಯವಹಾರಕ್ಕೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಸಂಸ್ಕೃತಿಯು ಮಾಸಿ ಹೋಗುತ್ತಿದೆ. ಅಂದು ದೇವಾಲಯಕ್ಕೆ ಹೋಗುವಾಗ ಒಂದು ಹೆಣ್ಣು ಆದವಳು ಹಣೆಗೆ ಕುಂಕುಮ,ಕೈಗೆ ಬಲೆ, ತಲೆಯ ಕೂದಲನ್ನು ಮುಡಿ ಕಟ್ಟಿ ಅದಕ್ಕೆ ಒಂದು ತುಂಡು ಹೂವನ್ನು ಮುಡಿದು ಸೀರೆಯನ್ನು ಧರಿಸಿಕೊಂಡು ತುಂಬಾ ಲಕ್ಷಣವಾಗಿ ಅಲಂಕಾರವನ್ನು ಮಾಡಿಕೊಂಡು ಹೋಗುತ್ತಿದ್ದರು. ಹಾಗಾಗಿ ಹೆಣ್ಣನ್ನು ದೇವರ ಪ್ರತಿಕ ಎಂದು ಗೌರವಿಸುತ್ತಿದ್ದರು.

ಆದರೆ ಇಂದು ಹಾಗಿಲ್ಲ. ಅದೇ ರೀತಿ ಗಂಡಸರು ಪಂಚೆಯನ್ನು ಧರಿಸುವ ಬದಲು ಹರಿದ ಪ್ಯಾಂಟ್‌ ಹಾಕಿಕೊಂಡು ದೇವರ ದರ್ಶನಕ್ಕೆ ಹೋಗುವುದನ್ನು ನಮ್ಮ ಕಣ್ಣೆದುರು ಕಾಣುತ್ತಿವೆ. ಅಂದು ಭಕ್ತಿ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದರು. ಇಂದಿನ ಆಧುನಿಕತೆಗೆ ಪ್ರಾಧಾನ್ಯತೆ. ಅದೇ ರೀತಿ ಭಜನೆಯನ್ನು ಮಾಡಿದರೆ ಸಂಬಂಧಗಳು ವಿಭಜನೆಯಾಗುವುದಿಲ್ಲ ಎಂಬ ನಂಬಿಕೆಯನ್ನುಹಿರಿಯರು ಇಟ್ಟುಕೊಂಡಿದ್ದರು.

ಹಾಗಾಗಿ ಸಂಜೆ ಹೊತ್ತಿಗೆ ಪ್ರತಿಯೊಬ್ಬರ ಮನೆಯಲ್ಲಿ ಭಜನೆಯ ನಾದಸ್ವರಗಳು ಕೇಳಿ ಬರುತ್ತಿತ್ತು. ಆದರೆ ಇಂದು ಭಜನೆಯು ಮೊಬೈಲ್‌ ನಲ್ಲಿ ಅಥವಾ ಸೌಂಡ್‌ ಸಿಸ್ಟಮ್‌ ನಲ್ಲಿ ಇಡುವ ಸನ್ನಿವೇಶವನ್ನು ನೋಡುತ್ತಿದ್ದೇವೆ. ಹಬ್ಬಗಳು ಒಂದೊಂದು ವಿಶೇಷವಾದ ಪದ್ಧತಿಯೊಂದಿಗೆ ಅದರದ್ದೇ ಆದ ಆಚಾರ-ವಿಚಾರದೊಂದಿಗೆ ಮಹತ್ವವನ್ನು ಮತ್ತು ಎಲ್ಲರೂ ಖುಷಿಯಿಂದ ಸಂಸ್ಕೃತಿಯ ಚೌಕಟ್ಟಿನಲ್ಲಿ ಹಬ್ಬಗಳನ್ನು ಅಂದೂ ಆಚರಿಸುತಿದ್ದರು.

ಆದರೆ ಇಂದು ಹಬ್ಬಗಳು ಮನೋರಂಜನೆಯ ಶೋಕಿಗೆ ಬೇಕಾಗಿ ಆಚರಿಸುತ್ತಿದ್ದಾರೆ. ಏನೇ ಆಗಲಿ ರಾಷ್ಟ್ರದ ಸಂಸ್ಕೃತಿಯು ಪ್ರತಿಯೊಬ್ಬ ಜನರ ಹೃದಯ ಮತ್ತು ಆತ್ಮದಲ್ಲಿ ನೆಲೆಸಲಿ ಹಾಗೆಯೇ ಸಂಪತ್‌ ಭರಿತ ರಾಷ್ಟ್ರದೊಂದಿಗೆ ಸಂಪತ್‌ ಭರಿತ ಸಂಸ್ಕತಿಯು ಬೆಳೆಯಲಿ. ಹಾಗಾಗಿ ಸಂಸ್ಕತಿಯನ್ನು ಬೆಳೆಸಿ ಉಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ.

-ವೆನಿತ್‌ ಮುಕ್ಕೂರು,

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.