Extortion Case: ಪ್ಲೈವುಡ್‌ ವ್ಯಾಪಾರಿ ಸುಲಿಗೆ: ನಾಲ್ವರ ಬಂಧನ


Team Udayavani, Oct 3, 2023, 12:49 PM IST

tdy-11

ಬೆಂಗಳೂರು: ಪ್ಲೈವುಡ್‌ ವ್ಯಾಪಾರಿ ಅಪಹರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ರೌಡಿಶೀಟರ್‌ ಸೇರಿ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರ ನಿವಾಸಿಗಳಾದ ರೌಡಿಶೀಟರ್‌ ರವಿತೇಜ(34), ಫೈನಾನ್ಶಿಯರ್‌ ಸಂತೋಷ್‌(36) ಹಾಗೂ ಅವರ ಸಹಚರರಾದ ಹಜಿವಾಲಾ, ರಾಜಶೇಖರ್‌ ಬಂಧಿತರು.

ಫ್ಲೈ ವುಡ್‌ ವ್ಯಾಪಾರಿ ರಂಜಿತ್‌ ಎಂಬವರನ್ನು ಸೆ.23 ರಂದು ಅಪಹರಿಸಿ, 50 ಲಕ್ಷ ರೂ.ಗೆ ಬೇಡಿಕೆ ಇರಿಸಿ, 10 ಲಕ್ಷ ರೂ. ಸುಲಿಗೆ ಮಾಡಿದ್ದರು. ಬಳಿಕ ಬಾಕಿ ಹಣ 15 ದಿನಗಳ ಒಳಗೆ ಕೊಡಬೇಕು. ಇಲ್ಲವಾದರೆ ಹತ್ಯೆ ಮಾಡುವುದಾಗಿ ಬೆದರಿಸಿ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ರಂಜಿತ್‌ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಆ ಬಳಿಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಂಜಿತ್‌ ಬ್ಯಾಟರಾಯನಪುರದಲ್ಲಿ ಪ್ಲೈವುಡ್‌ ಏಜೆನ್ಸಿ ಇಟ್ಟುಕೊಂಡಿದ್ದು, ಆರೋಪಿಗಳ ಪೈಕಿ ಫೈನಾನ್ಸಿಯರ್‌ ಸಂತೋಷ್‌ ಪರಿಚಯ ಇತ್ತು. ಈತನಿಂದ ರಂಜಿತ್‌ ಆಗಾಗ್ಗೆ ಲಕ್ಷಾಂತರ ರೂ. ಸಾಲ ಪಡೆದುಕೊಂಡು ಬಡ್ಡಿ ಸಮೇತ ಸಾಲ ತೀರಿಸುತ್ತಿದ್ದರು. ಈ ಮಧ್ಯೆ ಕೆಲ ತಿಂಗಳ ಹಿಂದೆ 14 ಲಕ್ಷ ರೂ. ಸಾಲ ಪಡೆದುಕೊಂಡು, ಈ ಹಣದ ಬಡ್ಡಿ 9 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಸಾಲ ತೀರಿಸಿದ್ದ ವ್ಯಾಪಾರಿ: ಸಾಲ ತೀರಿಸಲು ಸಾಧ್ಯವಾಗದೆ ರಂಜಿತ್‌, ತನ್ನ ಮನೆಯ ಪತ್ರಗಳನ್ನು ಖಾಸಗಿ ಫೈನಾನ್ಸ್‌ಗೆ ಅಡಮಾನ ಇಟ್ಟು 1 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಈ ಹಣದಲ್ಲಿ ಸಂತೋಷ್‌ಗೆ ಕೊಡಬೇಕಿದ್ದ 14 ಲಕ್ಷ ರೂ. ಅಸಲು ಮತ್ತು 9 ಲಕ್ಷ ರೂ. ಬಡ್ಡಿ ಸೇರಿ 23 ಲಕ್ಷ ರೂ.ಅನ್ನು ಚೆಕ್‌ ಮೂಲಕ ಸಾಲ ತೀರಿಸಿದ್ದರು. ಆದರೆ, ಸಂತೋಷ್‌ ಹಣ ಕೊಡುವಾಗ ರಂಜಿತ್‌ ನಿಂದ ಪಡೆದುಕೊಂಡಿದ್ದ ಸ್ಟಾಂಪ್‌ ಪೇಪರ್‌, ಖಾಲಿ ಚೆಕ್‌ಗಳನ್ನು ವಾಪಸ್‌ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ರಂಜಿತ್‌ ತನ್ನ ಮನೆಯನ್ನು 1 ಕೋಟಿ ರೂ.ಗೆ ಅಡಮಾನ ಇಟ್ಟಿರುವ ವಿಚಾರ ತಿಳಿದ ಸಂತೋಷ್‌, ಈ ಹಿಂದೆ ನಿನಗೆ ಸಾಕಷ್ಟು ಬಾರಿ ಸಾಲ ಕೊಟ್ಟಿದ್ದೇನೆ. ಈಗ ನನಗೆ ಹಣ ಬೇಕು ಎಂದು 10 ಲಕ್ಷ ರೂ. ಚೆಕ್‌ ಪಡೆದು ಡ್ರಾ ಮಾಡಿಕೊಂಡಿದ್ದ. ರಂಜಿತ್‌ ಬಳಿ ಇನ್ನಷ್ಟು ಹಣ ಇರುವ ಬಗ್ಗೆ ಮಾಹಿತಿ ತಿಳಿದ ಸಂತೋಷ್‌, ಸೆ.23ರಂದು ರೌಡಿಶೀಟರ್‌ ರವಿತೇಜ ಸೇರಿ ಇತರೆ ಸಹಚರರನ್ನು ಟಿಂಬರ್‌ ಲೇಔಟ್‌ಗೆ ಕರೆಸಿಕೊಂಡಿದ್ದಾನೆ.

50 ಲಕ್ಷ ರೂ.ಗೆ ಬೇಡಿಕೆ: ಬಳಿಕ ರಂಜಿತ್‌ನನ್ನು ಕಾರಿನಲ್ಲಿ ಹತ್ತಿಸಿಕೊಂಡು ಗಿರಿನಗರ, ಜಯನಗರ ಸೇರಿ ವಿವಿಧೆಡೆ ಸುತ್ತಾಡಿಸಿದ್ದಾನೆ. ಬಳಿಕ “ನಿನ್ನ ಹತ್ಯೆಗೆ ನಿನ್ನ ಭಾವ ಸುಪಾರಿ ಕೊಟ್ಟಿದ್ದಾನೆ. ನೀನು 50 ಲಕ್ಷ ರೂ. ಕೊಟ್ಟರೆ ಬಿಟ್ಟು ಕಳುಹಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಧಮ್ಕಿ ಹಾಕಿ 10 ಲಕ್ಷ ರೂ. ಸುಲಿಗೆ: ರಂಜಿತ್‌ ತನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಾಗ ಆರೋಪಿಗಳು ಆತನ ಮೇಲೆ ಹÇÉೆ ನಡೆಸಿದ್ದಾರೆ. ಅದರಿಂದ ಹೆದರಿದ ರಂಜಿತ್‌ 10 ಲಕ್ಷ ರೂ. ಕೊಟ್ಟಿದ್ದಾನೆ. ಹೀಗಾಗಿ ಬಾಕಿ ಹಣ 15 ದಿನಗಳಲ್ಲಿ ಕೊಡಬೇಕು ಎಂದು ಧಮ್ಕಿ ಹಾಕಿ, ರಂಜಿತ್‌ನನ್ನು ಮೈಸೂರು ರಸ್ತೆಗೆ ಬಿಟ್ಟು ಹೋಗಿದ್ದರು. ಬಳಿಕ ರಂಜಿತ್‌ ಬ್ಯಾಟರಾಯನಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಪ್ರಕರಣ ವರ್ಗಾಯಿಸಲಾಗಿತ್ತು. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆ ಬಳಿ ಬಂದು ಪ್ರಾಣ ಬೆದರಿಕೆ: ಬೆದರಿಕೆ ಹಾಕಿ ಕಳುಹಿಸಿದ ಮರು ದಿನ ರಂಜಿತ್‌ ಮನೆ ಬಳಿ ಬಂದ ಆರೋಪಿ, ಹಣದ ವಿಚಾರವನ್ನು ಮನೆಯವರು ಅಥವಾ ಬೇರೆಯವರ ಬಳಿ ಹೇಳಿದರೆ, ಬೀದಿ ಹಣವಾಗುತ್ತಿಯಾ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಆರೋಪಿ ಸಂತೋಷ್‌, ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಂಗಡಿ ಬಾಗಿಲು ಮುಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ರಂಜಿತ್‌ ದೂರಿನಲ್ಲಿ ಉಲ್ಲೇಖೀಸಿದ್ದರು.

 

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.