ನ್ಯಾಯಾಂಗ ಸೇವೆಯಲ್ಲಿ ಶೇ.10 ಮೀಸಲು- EWS ಗೆ ಬಿಹಾರ ಸರ್ಕಾರ ಕೊಡುಗೆ
Team Udayavani, Oct 3, 2023, 9:49 PM IST
ಪಾಟ್ನಾ/ನವದೆಹಲಿ: ಜಾತಿ ಗಣತಿ ವರದಿ ಪ್ರಕಟಿಸಿದ ಬೆನ್ನಲ್ಲಿಯೇ ಮಂಗಳವಾರ ಬಿಹಾರ ಸರ್ಕಾರ ನ್ಯಾಯಾಂಗ ಸೇವೆಯಲ್ಲಿ, ಸರ್ಕಾರಿ ಸ್ವಾಮ್ಯದ ಕಾನೂನು ಕಾಲೇಜು, ವಿವಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲೂಎಸ್)ಕ್ಕೆ ಶೇ.10 ಮೀಸಲು ನಿರ್ಧಾರ ಪ್ರಕಟಿಸಿದೆ. ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಆದೇಶ ಹೊರಡಿಸಲೂ ತೀರ್ಮಾನಿಸಲಾಗಿದೆ.
6ರಂದು ವಿಚಾರಣೆ:
ಬಿಹಾರ ಸರ್ಕಾರ ಅ.2ರಂದು ಜಾತಿ ಗಣತಿ ವರದಿ ಪ್ರಕಟಿಸಲು ಪಾಟ್ನಾ ಹೈಕೋರ್ಟ್ ಅ.1ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿದೆ. ನ್ಯಾ.ಸಂಜೀವ್ ಖನ್ನಾ ಮತ್ತು ನ್ಯಾ.ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಸದರಿ ಅರ್ಜಿಯನ್ನು ಅ.6ರಂದು ವಿಚಾರಣೆ ನಡೆಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ತಿಳಿಸಿದೆ.
ಚಿರಾಗ್ ತಿರಸ್ಕಾರ:
ಬಿಹಾರ ಸರ್ಕಾರ ನಡೆಸಿದ ಜಾತಿ ಗಣತಿ ವರದಿಯನ್ನು ಎಲ್ಜೆಪಿ (ರಾಂ ವಿಲಾಸ್) ಬಣದ ನಾಯಕ ಚಿರಾಗ್ ಪಾಸ್ವಾನ್ ತಿರಸ್ಕರಿಸಿದ್ದಾರೆ. ಇದೊಂದು ರಾಜಕೀಯ ಕುತಂತ್ರದಿಂದ ಕೂಡಿದ ವರದಿ ಎಂದು ಅವರು ಟೀಕಿಸಿದ್ದಾರೆ. ಅದರಲ್ಲಿ ಇರುವ ಸಾಂಖೀಕ ಮಾಹಿತಿಗಳು ಕೇವಲ ಒಂದು ಜಾತಿಯ ಅನುಕೂಲಕ್ಕಾಗಿ ಮಾಡಿದಂತೆ ಇದೆ ಎಂದು ಹೇಳಿದ್ದಾರೆ.
ಉ.ಪ್ರ.ದಲ್ಲೂ ಒತ್ತಾಯ:
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಆಗುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿಯೂ ಜಾತಿ ಗಣತಿ ನಡೆಸಬೇಕು ಎಂಬ ಒತ್ತಾಯ ಜೋರಾಗಿದೆ. ಎಸ್ಪಿ, ಬಿಎಸ್ಪಿ, ಕಾಂಗ್ರೆಸ್, ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳ (ಸೋನೆಲಾಲ್) ಈ ಒತ್ತಾಯ ಮಾಡಿವೆ. ಒಬಿಸಿಗೆ ನ್ಯಾಯ ಒದಗಿಸಲು ಇದುವೇ ಅತ್ಯುತ್ತಮ ಮಾರ್ಗ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಹೊಸ ಪದ ಸೃಷ್ಟಿ:
ಬಿಜೆಪಿ ರಾಜಕೀಯ ಬಿಟ್ಟು ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸಿರುವ ಎಸ್ಪಿ ಅಧ್ಯಕ್ಷ ಅಖೀಲೇಶ್ ಯಾದವ್, “ಪಿಡಿಎ’ ಪಿಚಾx (ಹಿಂದುಳಿದ ವರ್ಗ), ದಲಿತ (ತುಳಿತಕ್ಕೆ ಒಳಗಾದ), ಅಲ್ಪಸಂಖ್ಯಾತ ಎಂಬ ಹೊಸ ಪದಪುಂಜವನ್ನೂ ಅವರು ಸೃಷ್ಟಿಸಿದ್ದಾರೆ.
ರಾಹುಲ್ ಸಲಹೆಗೆ ಅಭಿಷೇಕ್ ಅತೃಪ್ತಿ
ಜನರ ಸಂಖ್ಯೆಯ ಆಧಾರದಲ್ಲಿ ಮೀಸಲು ನೀಡಬೇಕು ಎಂಬ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆಗೆ ಅವರ ಪಕ್ಷದಿಂದಲೇ ಅತೃಪ್ತಿ ವ್ಯಕ್ತವಾಗಿದೆ. ಹಿರಿಯ ನ್ಯಾಯವಾದಿ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿ “ಇಂಥ ಕ್ರಮಗಳಿಂದ ಋಣಾತ್ಮಕ ಸಂದೇಶ ರವಾನೆಯಾದೀತು. ಸಮಾನ ರೀತಿಯಲ್ಲಿ ಅವಕಾಶ ಎನ್ನುವುದು ಸರಿಯಾದರೂ ಕೂಡ ಅದರ ಫಲಿತಾಂಶ ಸಮಾನವಾಗಿ ಇರುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ನೀಡಬೇಕು ಎಂದು ವಾದಿಸುವವರು ಅಂತಿಮವಾಗಿ ಅದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸಬೇಕು. ಅಂತಿಮವಾಗಿ ಅದು ಹೆಚ್ಚು ಜನರು ಒಲವು ಹೊಂದಿರುವವರ ಪರ ನಿರ್ಣಯವಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್ಗೆ ಹೋಗುತ್ತಿಲ್ಲ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.