Yakshagana: ಮನೆ ಮನೆಗೂ ಯಕ್ಷಗಾನದ ಚಿಕ್ಕಮೇಳ; ಕುಂದಾಪುರದ ತಂಡ ಶಿರಸಿಗೆ ಬಂತು!


Team Udayavani, Oct 7, 2023, 11:40 AM IST

4-sirsi

ಶಿರಸಿ: ಮನೆ ಮನೆಗೂ ಯಕ್ಷಗಾನ ಆಡಿಸುವ ಚಿಕ್ಕಮೇಳ ಈವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ, ಅಪರೂಪ ಎಂಬಂತೆ ಅಂಥದೊಂದು ಕಲಾ ತಂಡ ಇದೀಗ ಘಟ್ಟ ಏರಿ ಶಿರಸಿಗೂ ಬಂದಿದೆ. ಕಳೆದ ನಾಲ್ಕೈದು ದಿನಗಳಿಂದ ಹಲವಡೆ ಮನೆ ಮನೆಗೂ ತೆರಳಿ ಯಕ್ಷಗಾನದ ಗೆಜ್ಜೆ, ಚಂಡೆ, ಭಾಗವತಿಕೆಯ ಶಬ್ಧ ಕೇಳಿಸುತ್ತಿದೆ.

ಕುಂದಾಪುರದ ಬೀಜಮಕ್ಕಿಯ ಶ್ರೀಮಹಾಗಣಪತಿ ಕಲಾ ತಂಡ ಶಿರಸಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಲಾ ಪ್ರದರ್ಶನ ನೀಡುತ್ತಿದೆ.

ಬೇಸಗೆಯಲ್ಲಿ ವಿವಿಧ ವೃತ್ತಿಪರ ತಿರುಗಾಟದಲ್ಲಿ ಇರುವ ಕಲಾ ತಂಡಗಳು ಮಳೆಗಾಲದಲ್ಲಿ ಚಿಕ್ಕ ಮೇಳದ ಮೂಲಕ ಮನೆ ಮನೆ ಯಕ್ಷಗಾನದ ಪ್ರದರ್ಶನ ನೀಡುತ್ತಿದ್ದಾರೆ. ಒಂದು ಕಥಾನಕವನ್ನು ಆಯ್ದುಕೊಂಡು 15-20 ಮನೆಗಳಲ್ಲಿ ಆಡಿ ತೋರಿಸಲಿದ್ದಾರೆ. ಕೆಲವೊಮ್ಮೆ 15-20 ನಿಮಿಷ, ಅರ್ಧ ಗಂಟೆ, ತಾಸುಗಳ ಕಾಲವೂ ಪ್ರದರ್ಶನ ನೀಡುವರು. ಕೆಲವು ಆಯ್ದ ಪ್ರಸಂಗದ ತುಣಕನ್ನೂ ಪ್ರಸ್ತುಗೊಳಿಸುವವರು.  ಪ್ರತೀ ಮನೆಯಲ್ಲೂ ಗಣಪತಿ ಪೂಜೆ ಮಾಡಿ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದೂ ಪ್ರಾರ್ಥಿಸುವ ಚಿಕ್ಕ ಮೇಳದ ಕಲಾವಿದರು, ಅಕ್ಕಿ, ಕಾಯಿ, ದೇವರ ಒಪೂಜೆಗೆ ಸುವಸ್ತುಗಳ ಜೊತೆಗೆ ಕೊಟ್ಟಷ್ಟು ಕಲಾ ಕಾಣಿಕೆ ಪಡೆದುಕೊಳ್ಳುತ್ತಾರೆ.

ದೇವರ ಸೇವಾ ರೂಪವಾಗಿ ಯಕ್ಷಗಾನ ಪ್ರದರ್ಶನ ನೀಡುವ ತಂಡವಾಗಿ ಪರಿವರ್ತನೆಗೊಂಡ ಈ ಚಿಕ್ಕಮೇಳದಲ್ಲಿ ಒಟ್ಟು 5-6 ಜನರು ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಈ ತಂಡದಲ್ಲಿ ಭಾಗವತರಾಗಿ ರತ್ನಾಕರ ಗೌಡ ಕಾಲ್ತೋಡು, ಚಂಡೆಯಲ್ಲಿ ದಿನೇಶ ಮರಾಠಿ ಕುಮಟಾ, ಕಲಾವಿದರಾಗಿ ಪುರುಷ ಪಾತ್ರದಲ್ಲಿ ಗಣೇಶ ದೇವಡಿಗ ಮಹಾಭಲೇಶ್ವರ, ಸ್ತ್ರೀ ಪಾತ್ರದಲ್ಲಿ ಪ್ರವೀಣ ಶೆಟ್ಟಿ ಮೋರ್ಟು, ಸಂಚಾಲಕರಾಗಿ ಅಣ್ಣಪ್ಪ ಗಾಣಿಗ ಬೀಜಮಕ್ಕಿ, ರಾಘವೇಂದ್ರ ಗಾಣಿಗ ಬೀಜಮಕ್ಕಿ ಇದ್ದಾರೆ.

ಮನೆಗಳಲ್ಲಿ ಯಕ್ಷಗಾನದ ಝೇಂಕಾರ ಕೇಳಿದರೆ ವಾಸ್ತು ದೋಷ ಸೇರಿದಂತೆ ಅನೇಕ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಕೂಡ ಪ್ರಾಚೀನವಾಗಿಯೇ ಇದೆ. ಅದೇ ಆಧಾರದಲ್ಲಿ ದಕ್ಷಿಣೋತ್ತರ ಕನ್ನಡದಲ್ಲಿ ಇದೊಂದು ಸಂಪ್ರದಾಯವಾಗಿ ಕೂಡ ಬೆಳೆದಿದೆ ಎಂಬುದು ವಿಶೇಷ.

ಮನೆ ಮನೆಗಳಲ್ಲಿ ಯಕ್ಷಗಾನ ಮಾಡಿಸುವ ಆಸಕ್ತರಿದ್ದರೆ ಮೊ.ಸಂ. 9945719032 ಅನ್ನು ಸಂಪರ್ಕ ಮಾಡಬಹುದಾಗಿದ್ದು, ಇರುವ ವ್ಯವಸ್ಥೆಯಲ್ಲೇ ಕಲಾ ಪ್ರದರ್ಶನ ನೀಡುತ್ತೇವೆ ಎನ್ನುತ್ತಾರೆ ಚಿಕ್ಕ ಮೇಳದ ವ್ಯವಸ್ಥಾಪಕ ಅಣ್ಣಪ್ಪ ಗಾಣಿಗ ಬೀಜಮಕ್ಕಿ.

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.