Gaza ; ಇಸ್ರೇಲ್ ದಾಳಿಗೆ 198 ಮಂದಿ ಮೃತ ಪಟ್ಟಿದ್ದಾರೆ ಎಂದ ಪ್ಯಾಲೆಸ್ತೀನ್
ಉಗ್ರ ಪ್ರತಿಕಾರದ ದಾಳಿಗೆ 1,610 ಜನರು ಗಾಯಗೊಂಡಿದ್ದಾರೆ...
Team Udayavani, Oct 7, 2023, 7:59 PM IST
ಜೆರುಸಲೇಂ: ಇಸ್ರೇಲ್ಗೆ ಹಮಾಸ್ನ ವ್ಯಾಪಕ ದಾಳಿಯ ನಂತರ ಇಸ್ರೇಲ್ನ ಪ್ರತೀಕಾರದ ದಾಳಿಯಲ್ಲಿ ಕನಿಷ್ಠ 198 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 1,610 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಹೇಳಿದೆ.
ಇಸ್ರೇಲ್ ಗಾಜಾದಲ್ಲಿ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಿದ್ದು ಕರಾವಳಿ ಪ್ರದೇಶದ ಸುತ್ತಲಿನ ಗಡಿ ಬೇಲಿಯಲ್ಲಿ ಬಂದೂಕುಧಾರಿಗಳೊಂದಿಗೆ ಘರ್ಷಣೆ ನಡೆಸಿದೆ.
ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ಭಾರಿ ರಾಕೆಟ್ ದಾಳಿ ನಡೆಸಿತ್ತು, ನೂರಾರು ಹೋರಾಟಗಾರರು ವಾಯು, ಭೂಮಿ ಮತ್ತು ಸಮುದ್ರದ ಮೂಲಕ ಹಲವಾರು ಸ್ಥಳಗಳಲ್ಲಿ ಭದ್ರ ಗಡಿಯನ್ನು ನುಸುಳಿ ಸಾವಿರಾರು ರಾಕೆಟ್ಗಳನ್ನು ಹಾರಿಸಿ, ದೇಶವನ್ನು ಹಿಡಿತದಲ್ಲಿಟ್ಟುಕೊಂಡಿದ್ದರು.
ಆಕ್ರಮಣವು ಪ್ರಾರಂಭವಾದ ಹಲವಾರು ಗಂಟೆಗಳ ನಂತರ, ಹಮಾಸ್ ಉಗ್ರಗಾಮಿಗಳು ಇನ್ನೂ ಹಲವಾರು ಇಸ್ರೇಲಿ ಸಮುದಾಯಗಳ ಒಳಗೆ ಗುಂಡಿನ ಚಕಮಕಿಯಲ್ಲಿ ಹೋರಾಡುತ್ತಿದ್ದಾರೆ.
100 ಕ್ಕೂ ಹೆಚ್ಚು ಇಸ್ರೇಲಿಗರು ಬಲಿ
ಹಮಾಸ್ ಹಲವು ವರ್ಷಗಳಲ್ಲಿ ಇಸ್ರೇಲ್ಗೆ ಹೊಂಚು ಹಾಕಿ ಭಾರಿ ಪೂರ್ವ ತಯಾರಿಯೊಂದಿಗೆ ಒಳನುಸುಳುಳಿ ಭೀಕರ ದಾಳಿ ನಡೆಸಿದ ಪರಿಣಾಮ ಮೇಯರ್ ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ, 740 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ 5,000 ಕ್ಕೂ ಹೆಚ್ಚು ರಾಕೆಟ್ಗಳನ್ನು ಉಡಾವಣೆ ಮಾಡಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಈ ದಾಳಿಯು ಗಾಜಾ ಪಟ್ಟಿಯಿಂದ ಹಲವಾರು ಒಳನುಸುಳುವಿಕೆಗಳು ಮತ್ತು ರಾಕೆಟ್ ದಾಳಿಗಳ ನಂತರ ‘ಯುದ್ಧದ ಸ್ಥಿತಿ’ಯನ್ನು ಘೋಷಿಸಲು ಇಸ್ರೇಲ್ ಅನ್ನು ಪ್ರೇರೇಪಿಸಿತು.
ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು, ವೀಡಿಯೊ ಹೇಳಿಕೆಯಲ್ಲಿ, ಇಸ್ರೇಲ್ “ಯುದ್ಧದಲ್ಲಿದೆ” ಎಂದು ಹೇಳಿ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಿರುವ ಹಮಾಸ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
“ನಾವು ಯುದ್ಧ ಮಾಡುತ್ತಿದ್ದೇವೆ, ಕಾರ್ಯಾಚರಣೆಯಲ್ಲ. ಹಮಾಸ್ ಇಸ್ರೇಲ್ ರಾಜ್ಯ ಮತ್ತು ಅದರ ನಾಗರಿಕರ ವಿರುದ್ಧ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿದೆ. ನಾನು ಮೊದಲು ನುಸುಳಿರುವ ಭಯೋತ್ಪಾದಕರ ವಸಾಹತುಗಳನ್ನು ಸ್ವಚ್ಛಗೊಳಿಸಲು ಆದೇಶಿಸಿದ್ದು, ದೊಡ್ಡ ಪ್ರಮಾಣದ ಮೀಸಲು ಸಜ್ಜುಗೊಳಿಸಲು ಆದೇಶಿಸಿದ್ದೇನೆ. ಶತ್ರುಗಳು ಅವರು ಎಂದಿಗೂ ತಿಳಿದಿರದ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…
Road Mishap: ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ… ನಾಲ್ವರು ಭಾರತೀಯರು ಮೃತ್ಯು
Pakistan: ಅಂದು ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!
Israel: ಗಾಜಾ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದರೆ ಯುದ್ಧ ನಿಲ್ಲಿಸಲು ಸಿದ್ಧ: ಹಮಾಸ್
North Korea vs South Korea: ಮತ್ತೆ ಬಲೂನ್ವಾರ್
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…
Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ
Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.