Lokesh Kanagaraj: ವಿಕ್ರಮ್‌,ಕೈಥಿಯಂತೆ ಎರಡು ಭಾಗಗಳಲ್ಲಿ ʼಲಿಯೋʼ?; ನಿರ್ದೇಶಕರಿಂದ ಸುಳಿವು


Team Udayavani, Oct 8, 2023, 10:12 AM IST

Lokesh Kanagaraj: ವಿಕ್ರಮ್‌,ಕೈಥಿಯಂತೆ ಎರಡು ಭಾಗಗಳಲ್ಲಿ ʼಲಿಯೋʼ?; ನಿರ್ದೇಶಕರಿಂದ ಸುಳಿವು

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ. ಇತ್ತೀಚೆಗೆ ಟ್ರೇಲರ್‌ ರಿಲೀಸ್‌ ಮಾಡಿ ಸದ್ದು ಮಾಡಿದ್ದು, ಸಿನಿಮಾವನ್ನು ಬಿಗ್‌ ಸ್ಕ್ರೀನ್‌ ಮೇಲ್‌ ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ.

ʼಮಾಸ್ಟರ್‌ʼ ಬಳಿಕ ಲೋಕೇಶ್‌ ಕನಕರಾಜ್‌ ವಿಜಯ್‌ ಕಾಂಬಿನೇಷನ್‌ ನೊಂದಿಗೆ ʼಲಿಯೋʼ ಸಿನಿಮಾ ಮಾಡಿದ್ದು, ಪ್ರೇಕ್ಷಕರು ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಡುವೆ ನಿರ್ದೇಶಕ ಲೋಕೇಶ್‌ ನಾನಾ ಸಿನಿ ವೆಬ್‌ ಸೈಟ್‌ ಗಳಿಗೆ ಸಂದರ್ಶನವನ್ನು ನೀಡಿದ್ದಾರೆ. ಅದರಲ್ಲಿ ತನ್ನ ಸಿನಿಮಾ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

ಲೋಕೇಶ್‌ ಕನಕರಾಜ್‌ ಅವರ ʼವಿಕ್ರಮ್‌ʼ ಹಾಗೂ ʼಕೈಥಿʼ ಸಿನಿಮಾ ಸೀಕ್ವೆಲ್‌ ಆಗಿ ಬರಲಿರುವುದು ಗೊತ್ತೇ ಇದೆ. ಈ ಸಿನಿಮಾಗಳಂತೆ ʼಲಿಯೋʼ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ಸುಳಿವನ್ನು ಲೋಕೇಶ್‌ ಸಂದರ್ಶನವೊಂದರಲ್ಲಿ ನೀಡಿದ್ದಾರೆ.

“ಲಿಯೋ” ಸೀಕ್ವೆಲ್‌ ಬಗ್ಗೆ ನಾನು ಸಿನಿಮಾ ರಿಲೀಸ್‌ ಆಗುವವರೆ ಏನು ಹೇಳಲಾರೆ. ದಳಪತಿ ನನಗೆ ಹೇಳಿದರೆ ನಾನು ಅದನ್ನು ಮಾಡುತ್ತೇನೆ. ನಾನು ಮುಂದೆ ʼತಲೈವರ್ 171ʼ (ರಜಿನಿಕಾಂತ್ ಜೊತೆ) ಮತ್ತು ʼಕೈಥಿ 2ʼ (ಕಾರ್ತಿ ಜೊತೆ) ಮಾಡಲಿದ್ದೇನೆ. ʼಕೈಥಿ 2ʼ ಚಿತ್ರದ ಶೂಟಿಂಗ್ ಮುಗಿದ ನಂತರ ರೋಲೆಕ್ಸ್ ಸ್ಪಿನ್-ಆಫ್ ಮತ್ತು ʼವಿಕ್ರಮ್ 2ʼ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದಾರೆ.

ಇನ್ನು ʼಲಿಯೋʼ ಟ್ರೇಲರ್‌ ನಲ್ಲಿ ಪಾರ್ಥಿಬನ್‌(ವಿಜಯ್‌ ಪಾತ್ರ) ತನ್ನ ಪತ್ನಿಯ ಬಳಿ ಶತ್ರುವಿನ ಬಗ್ಗೆ ಹೇಳುವ ಒಂದು ಡೈಲಾಗ್ಸ್‌ ಇದೆ. ಡೈಲಾಗ್ಸ್‌ ನಲ್ಲಿರುವ ಈ ಪದ ನಿಂದನೆ ಹಾಗೂ ಅವಮಾನಕಾರವಾಗಿದ್ದು, ವಿಜಯ್‌ ಅಭಿಮಾನಿಗಳಿಗೆ ಇದು ಇಷ್ಟವಾಗಿಲ್ಲ. ಈ ಬಗ್ಗೆ ನಿರ್ದೇಶಕ ಲೋಕೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Actress: ಇಸ್ರೇಲ್‌ ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡ ಬಾಲಿವುಡ್‌ ನಟಿ; ಸಂಪರ್ಕ ಕಡಿತ

“ಆ ಸಿನಿಮಾ ಮತ್ತು ಆ ದೃಶ್ಯಕ್ಕೆ ಆ ಮಾತು, ಭಾವ ಬೇಕಿತ್ತು. ನಾವು ಕೆಲವೊಮ್ಮೆ ಕೋಪದಿಂದ ಕೆಲವು ಪದಗಳನ್ನು ಹೇಳುತ್ತೇವೆ ಮತ್ತು ನಾವು ಆ ದೃಶ್ಯವನ್ನು ಚಿತ್ರೀಕರಿಸಲು ಮುಂದಾದಾಗ, ದಳಪತಿ ವಿಜಯ್ ನನ್ನನ್ನು ಕೇಳಿದರು ‘ಇದು ಸರಿಯೇ? ಅಥವಾ ನಾನು ಇದನ್ನು ಹೇಳಿದರೆ ಅದು ತಪ್ಪಾಗುತ್ತದೆಯೇ?’ ನಂತರ, ಆ ಪಾತ್ರಕ್ಕೆ, ಆ ದೃಶ್ಯಕ್ಕೆ ಮಾಡುವುದು ಸರಿಯಾದ ಕೆಲಸ ಎಂದು ನಾನು ಅವರಿಗೆ ಮನವರಿಕೆ ಮಾಡಿದೆ. ಮತ್ತು ನಾನು ಎಲ್ಲಾ ಆಪಾದನೆಗಳನ್ನು ತೆಗೆದುಕೊಳ್ಳುತ್ತೇನೆ. ಇದನ್ನು ನಟ ದಳಪತಿ ವಿಜಯ್ ಹೇಳಿಲ್ಲ. ʼಲಿಯೋʼ ಚಿತ್ರದಲ್ಲಿನ ಅವರ ಪಾತ್ರವಾದ ಪಾರ್ತಿಬನ್ ಇದನ್ನು ಹೇಳಿದ್ದಾರೆ,” ಎಂದು ನಿರ್ದೇಶಕ ಲೋಕೇಶ್ ವಿವರಿಸಿದರು.

ಇನ್ನು ಇದೇ ಅಕ್ಟೋಬರ್‌ 19 ರಂದು ʼಲಿಯೋʼ ಸಿನಿಮಾ ತೆರೆಗೆ ಬರಲಿದೆ. ತ್ರಿಶಾ ಕೃಷ್ಣನ್, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್, ಬಾಬು ಆಂಟೋನಿ, ಬೇಬಿ ಇಯಲ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದಾರೆ.

 

ಟಾಪ್ ನ್ಯೂಸ್

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

121

Border 2: ಸನ್ನಿ ಡಿಯೋಲ್‌ ʼಬಾರ್ಡರ್-2‌ʼಗೆ ʼಫೌಜಿʼಯಾಗಿ ಬಂದ ಸುನಿಲ್‌ ಶೆಟ್ಟಿ ಪುತ್ರ

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

1-kanga-eme

‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.