Daily Horoscope: ಉದ್ಯೋಗ ಕ್ಷೇತ್ರದಲ್ಲಿ ಚಂಚಲ ವಾತಾವರಣ, ವಾಹನ ಚಾಲನೆಯಲ್ಲಿ ಎಚ್ಚರ
Team Udayavani, Oct 10, 2023, 7:30 AM IST
ಮೇಷ: ಆನಂದವಾಗಿ ದಿನದ ಆರಂಭ. ಉದ್ಯೋಗ ಸ್ಥಾನದಲ್ಲಿ ಸಂತೋಷದ ವಿದ್ಯಮಾನ. ಗಣ್ಯರ ಭೇಟಿ. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವ ಸಂದರ್ಭ. ಸ್ವಂತ ವ್ಯವಹಾರದ ಕ್ಷೇತ್ರಕ್ಕೆ ಹೊಸಬರ ಪ್ರವೇಶ ಸಂಭವ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ವೃಷಭ: ಕಾರ್ಯಯೋಜನೆಗಳು ಗೋಪ್ಯವಾಗಿರಲಿ. ಹಿತಶತ್ರುಗಳ ಪ್ರವೇಶ ಆಗದಂತೆ ಎಚ್ಚರ ವಹಿಸಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ವಿತ್ತ ಸಂಸ್ಥೆಗಳಿಂದ ಆರ್ಥಿಕ ನರವು ಲಭ್ಯ. ಹಿರಿಯರಿಗೆ ವಯೋಸಹಜ ದೌರ್ಬಲ್ಯ. ದೇವತಾ ಸ್ಥಳಕ್ಕೆ ಭೇಟಿ.
ಮಿಥುನ: ನಿತ್ಯವೂ ಆಗುವ ಹೊಸಬಗೆಯ ಬೆಳವಣಿಗೆಗಳಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಲು ಕಲಿಯಿರಿ. ಉದ್ಯೋಗ ಕ್ಷೇತ್ರದಲ್ಲಿ ಚಂಚಲ ವಾತಾವರಣ. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕ್ಕೆ ತಕ್ಕ ಪ್ರತಿಫಲದ ಸಾಧ್ಯತೆ ಕಡಿಮೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ.
ಕರ್ಕಾಟಕ: ಮನೆಯಲ್ಲಿ ಎಲ್ಲರ ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳ ಸಹಕಾರ. ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ವಿಘ್ನಗಳು. ಸರಕಾರಿ ಇಲಾಖೆಗಳಿಂದ ಆಗಬೇಕಾದ ಕೆಲಸಗಳು ವಿಳಂಬ. ವಾಹನ ಚಾಲನೆಯಲ್ಲಿ ಎಚ್ಚರ.
ಸಿಂಹ: ಒಟ್ಟು ಪರಿಸ್ಥಿತಿ ಕ್ಷಿಪ್ರ ಸುಧಾರಣೆ. ಹಿರಿಯರ ಆರೋಗ್ಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಒಳ್ಳೆಯ ವಾತಾವರಣ. ಮಾಲಿಕ- ನೌಕರರ ನಡುವೆ ಸಾಮರಸ್ಯ. ಸರಕಾರಿ ನೌಕರರು ಸಮಾಧಾನದ ಸ್ಥಿತಿಯಲ್ಲಿ. ಉಭಯ ರಂಗಗಳ ಉತ್ಪಾದನೆಗಳಿಗೆ ಉತ್ತಮ ಬೇಡಿಕೆ.
ಕನ್ಯಾ: ಸ್ಥಿರ ಮನಸ್ಸಿನಿಂದ ಯತ್ಸಿಸಿದರೆ ವಿಜಯ ಖಂಡಿತ. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇ ಜನ. ಸಾಧನೆಗೆ ಮೇಲಿನವರ ಮೆಚ್ಚುಗೆ. ವಿದ್ಯುತ್, ಇಲೆಕ್ಟ್ರಾನಿಕ್ಸ್ ಸಾಧನಗಳ ದುರಸ್ತಿಗಾರರಿಗೆ ಆದಾಯ ಹೆಚ್ಚಳ. ಸೌಂದರ್ಯವರ್ಧಕ ಸಾಮಗ್ರಿಗಳ ವ್ಯಾಪಾರಿಗಳಿಗೆ ಅಧಿಕ ಲಾಭ.
ತುಲಾ: ಮನಸ್ಸಮಾಧಾನದ ದಿನ. ಬಂಧುಗಳಿಂದ ಪ್ರೋತ್ಸಾಹದ ಮಾತುಗಳು. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಜವಾಬ್ದಾರಿ ವಿಸ್ತರಣೆ ಸಂಭವ. ದೂರದಲ್ಲಿರುವ ಹಳೆಯ ಒಡನಾಡಿಯ ಭೇಟಿಯಿಂದ ಭಾವನಾತ್ಮಕ ಚಿಂತನೆಗೆ ಪ್ರೇರಣೆ.
ವೃಶ್ಚಿಕ: ಆರೋಗ್ಯ ಉತ್ತಮ. ಉದ್ಯೋಗದಲ್ಲಿ ಮುನ್ನಡೆ. ಸಾಧನೆಗೆ ಸುತ್ತಮುತ್ತಲಿನವರ ಉತ್ತೇಜನ. ಪರಿಸರ ರಕ್ಷಣೆಯಲ್ಲಿ ಕಾಳಜಿ. ಸಾಕುಪ್ರಾಣಿಗಳಿಂದ ದೂರವಿರಿ. ಹೈನೋದ್ಯಮದಲ್ಲಿ ಲಾಭ. ವಸ್ತ್ರ, ಆಭರಣ ವ್ಯಾಪಾರಿ ಗಳಿಗೆ ಮಧ್ಯಮ ಆದಾಯ. ಮನೆಯಲ್ಲಿ ಸಹಕಾರದ ವಾತಾವರಣ.
ಧನು: ಛಲ ಬಿಡದ ತ್ರಿವಿಕ್ರಮನಂತೆ ಅವಿಶ್ರಾಂತವಾಗಿ ಯತ್ನಿಸುವ ನಿಮಗೆ ತಡವಾಗಿಯಾದರೂ ಯಶಸ್ಸು ಲಭ್ಯ. ಮಂದಗತಿಯ ಹೆಜ್ಜೆಗಳೇ ಸುರಕ್ಷಿತವೆಂದು ಕಂಡುಬಂದಿರುವ ಕಾರಣ ನಡೆಯ ವೇಗ ಬದಲಾವಣೆ ಬೇಡ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.
ಮಕರ: ಸಂಸಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಂದ ಕಿರಿಕಿರಿ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ಮೇಲಧಿಕಾರಿಗಳಿಂದ ಪ್ರೋತ್ಸಾಹದ ನುಡಿಗಳು. ಮನೆಯಲ್ಲಿ ಹಿರಿಯರಿಂದ ಸಕಾಲಿಕ ಸಹಕಾರ. ಸ್ವಂತ ಒಡೆತನದ ಉದ್ಯಮಗಳಲ್ಲಿ ಬೇಡಿಕೆ ಪೂರೈಸುವ ಒತ್ತಡ.
ಕುಂಭ: ದೇವತಾರ್ಚನೆಯಿಂದ ಸಮಾಧಾನಗೊಂಡ ಮನಸ್ಸು. ಉದ್ಯೋಗ ಸ್ಥಾನದಲ್ಲಿ ಹರ್ಷ, ಉತ್ಸಾಹಗಳ ವಾತಾವರಣ. ಸಂಘಟಿತ ಪ್ರಯತ್ನ. ಪರಿಸರ ರಕ್ಷಣಾ ಕಾರ್ಯಗಳಲ್ಲಿ ಸೇವೆಯ ಸಂದರ್ಭ. ಸಟ್ಟಾ ವ್ಯವಹಾರಕ್ಕಿಳಿದರೆ ನಷ್ಟ. ರಾಜಕೀಯ ಕ್ಷೇತ್ರದಿಂದ ಕರೆ. ಸ್ವಂತ ಉದ್ಯಮ ಉತ್ಪನ್ನ ಗುಣಮಟ್ಟದ ಸುಧಾರಣೆ.
ಮೀನ: ಗುರು, ದೇವತಾನುಗ್ರಹದಿಂದ ನೆಮ್ಮದಿ. ಉದ್ಯೋಗದಲ್ಲಿ ಮುನ್ನಡೆ. ಸರಕಾರಿ ಕಾರ್ಯಾಲಯಗಳಲ್ಲಿ ಉತ್ತಮ ಸ್ಪಂದನೆ. ಸೇವಾ ಮಾದರಿಯ ಕಾರ್ಯಗಳಿಂದ ಆದಾಯ, ಗೌರವ ವೃದ್ಧಿ. ಹಿರಿಯರಿಂದ ಸಕಾಲಿಕ ಮಾರ್ಗದರ್ಶನ. ಹೊಸ ಕ್ಷೇತ್ರಗಳ ಅರಸುವಿಕೆಯಲ್ಲಿ ಯಶಸ್ಸು. ಉದ್ಯೋಗಾರ್ಥಿಗಳ ಪ್ರಯತ್ನ ಮುನ್ನಡೆ. ಎಲ್ಲರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ
Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ
Daily Horoscope: ಕರ್ಮದ ಫಲವನ್ನು ಸಂತೋಷದಿಂದ ಸ್ವೀಕರಿಸಿ
Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ
Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್ ಸ್ಪೋರ್ಟ್ಸ್ ಮತ್ತೆ ಆರಂಭ
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.