Hindu Samajotsava ಸಾಮಾಜಿಕ, ಧಾರ್ಮಿಕ ಪ್ರಜ್ಞೆ ಜತೆಗೆ ರಾಜಕೀಯ ಶಕ್ತಿಯೂ ಅಗತ್ಯ

ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ, ಹಿಂದೂ ಸಮಾಜೋತ್ಸವ ಸಂಪನ್ನ

Team Udayavani, Oct 11, 2023, 12:35 AM IST

Hindu Samajotsava ಸಾಮಾಜಿಕ, ಧಾರ್ಮಿಕ ಪ್ರಜ್ಞೆ ಜತೆಗೆ ರಾಜಕೀಯ ಶಕ್ತಿಯೂ ಅಗತ್ಯ

ಉಡುಪಿ: ಸನಾತನ ಧರ್ಮ, ಸಂಸ್ಕೃತಿಯನ್ನು ವಿರೋಧಿಸುವ ಪರಕೀಯರ ಬಿರುಗಾಳಿಗೆ ಎದೆಯೊಡ್ಡಿ ನಿಲ್ಲುವ ರಾಜಕೀಯ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಬೀದಿ ಹೋರಾಟದಿಂದ ಇದು ಸಾಧ್ಯವಿಲ್ಲ. ಧರ್ಮ, ಸಂಸ್ಕೃತಿ, ನಮ್ಮತನ ಗೌರವಿಸುವ ಸರಕಾರ ತರುವಲ್ಲಿ ಹೋರಾಟವೂ ಇರಬೇಕು ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಜಿಲ್ಲಾ ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ಮಂಗಳವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಹಿಂದೂ ಸಮಾಜೋತ್ಸವ ಹಾಗೂ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ನಾವೆಲ್ಲರೂ ಶಾಂತಿ ಪ್ರಿಯರು. ಧರ್ಮದ ಪ್ರತಿಪಾದಕರು ಹಾಗೂ ಶ್ರೀರಾಮ ದೇವರ ಆದರ್ಶ ಪಾಲಿಸುವ ವರು. ಕಲ್ಲೆಸೆಯುವ, ಕೊಳ್ಳೆ ಹೊಡೆಯುವ ಅಥವಾ ತಲೆ ಒಡೆಯುವವರು ನಾವಲ್ಲ. ಪ್ರಸ್ತುತ ನಮ್ಮ ಮನೆಯೊಳಗೆ ಬಂದು ಮಕ್ಕಳನ್ನು ಎತ್ತಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಾವೆಲ್ಲರೂ ಒಟ್ಟಾಗಿ ಪ್ರತಿಭಟಿಸಿ, ಲವ್‌ ಜೆಹಾದ್‌ ವಿರುದ್ಧ ಹೋರಾಟ ನಡೆಸಬೇಕು ಎಂದರು.

ಸನಾತನ ಧರ್ಮ ತಲೆ ಎತ್ತುವಂತೆ ಮಾಡಿದ್ದು ಹಾಗೂ ಶ್ರೀರಾಮ ಜನ್ಮಭೂಮಿ ಹೋರಾಟದ ಹಿಂದಿನ ಶಕ್ತಿ ವಿಹಿಂಪ, ಬಜರಂಗದಳ. ಸನಾತನ ಧರ್ಮದ ವಿರುದ್ಧ ಎದ್ದಿರುವ ಬಿರು ಗಾಳಿಯನ್ನು ತಡೆದು ನಿಲ್ಲಿಸಬೇಕು. ಧಾರ್ಮಿಕ, ಸಾಮಾಜಿಕ ನಲೆಯಲ್ಲಿ ಒಂದಾದರೆ ಸಾಲದು. ರಾಜಕೀಯ ಪ್ರಜ್ಞೆಯೂ ಬೇಕು. ಕಾರ್ಯಸಾಧನೆಗೆ ಉತ್ತಮ ಸರಕಾರವನ್ನು ತರಬೇಕು ಎಂದು ಹೇಳಿದರು.

ಸಂಕಲ್ಪ ಮುಖ್ಯ
ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಮಹತ್‌ ಕಾರ್ಯ ಸಾಧನೆಗೆ ಸಂಕಲ್ಪ ಅತಿ ಮುಖ್ಯ. ಭಾರತದ ಶಕ್ತಿ ಬೆಳೆಯುತ್ತಿದೆ. ಕೆಲವರ ಶಕ್ತಿ ಕುಂಬಳ ಕಾಯಿಯಂತೆ ಒಳಗೊಳಗೆ ಕೊಳೆಯುತ್ತಿದೆ. ಭಾರತವು ಮತ್ತೂಮ್ಮೆ ಜಗದ್ಗುರುವಾಗಲಿದೆ. ನಮ್ಮ ಮೇಲೆ ಆಗಬಹುದಾದ ಆಕ್ರಮಣ ಗಳನ್ನು ಸಂಘಟಿತರಾಗಿ ತಡೆಯಬೇಕು ಎಂದು ಸಲಹೆ ನೀಡಿದರು.

ಲವ್‌ ಜೆಹಾದ್‌ಗೆ ಸಮರ್ಥ ಉತ್ತರ
ಬೋಪಾಲ್‌ನ ಮಹಾಮಂಡ ಲೇಶ್ವರ ಶ್ರೀ ಅಖೀಲೇಶ್ವರಾನಂದ ಗಿರಿ ಮಹಾರಾಜ್‌ ಮಾತನಾಡಿ, ಭಾರತ
ವನ್ನು ಒಡೆಯುವ ಶಕ್ತಿಗಳ ವಿರುದ್ಧ ದೇಶದ ಸಮಗ್ರತೆಗಾಗಿ ನಿರಂತರ ಸಂಘಟಿತ ಸಂಘರ್ಷ ಮಾಡುತ್ತಿರುತ್ತೇವೆ. ಲವ್‌ ಜೆಹಾದ್‌ಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಬೇಕು. ಸನಾತನ ಎನ್ನುವುದು ಜಾತಿ, ವರ್ಣವಲ್ಲ. ಅದು ಜೀವನ ಮೌಲ್ಯ ಎಂದು ಹಿಂದೂ ಸಮಾಜ ಸಂಘಟಿತವಾಗಬೇಕಾದ ಅಗತ್ಯಗಳ ಬಗ್ಗೆ ವಿವರಿಸಿದರು.

ಆರೆಸ್ಸೆಸ್‌ನ ಪ್ರಾಂತ ಸಹಕಾರ್ಯ ವಾಹ ಪಿ.ಎಸ್‌. ಪ್ರಕಾಶ್‌ ಮಾತನಾಡಿ, ಶೌರ್ಯ ರಹಿತ ಸಮಾಜಕ್ಕೆ ಸಾವು ನಿಶ್ಚಿತ. ಹಿಂದೂ ಸಮಾಜ ಶೌರ್ಯವಂತ ಸಮಾಜ. ನಾವೀಗ ಶಾರೀರಿಕ ಹಾಗೂ ವೈಚಾರಿಕ ಆಕ್ರಮಣವನ್ನು ತಡೆಯಬೇಕು. ಭಾರತದ ಗೆಲುವಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು ಎಂದು ತಿಳಿಸಿದರು.

ದೇಶ ರಕ್ಷಣೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮನೋಹರ ಶೆಟ್ಟಿ ಮಾತನಾಡಿ, ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳಬೇಕು. ನಾವಾಗಿ ಯಾರಿಗೂ ತೊಂದರ ನೀಡ ಬಾರದು. ಆದರೆ ನಮಗೆ ತೊಂದರೆ ಕೊಡುವವರಿಗೆ ಸ್ಪಷ್ಟ ಉತ್ತರ ನೀಡಲೇ ಬೇಕು. ಜಾತಿ, ಮತ ಭೇದ ಮರೆತು ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು.

ಪ್ರಾಂತ ಸಂಯೋಜಕ ಸುನೀಲ್‌ ಕೆ.ಆರ್‌. ಮಾತನಾಡಿ, ಇಡೀ ರಾಜ್ಯವೇ ಹಿಂದುತ್ವದ ಭದ್ರಕೋಟೆಯಾಗಲಿದೆ. ಬಜರಂಗದಳ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಿದೆ. ಜೆಹಾದಿ ಮಾನಸಿಕತೆಯನ್ನು ಹೇಗೆ ಹೋಗ ಲಾಸಡಿಸಬೇಕು ಎಂಬುದು ಗೊತ್ತಿದೆ. ಈ ರಾಷ್ಟ್ರವನ್ನು ಜಿಹಾದಿ ಮಾನಸಿಕತೆಗೆ ಹೋಗಲೂ ಬಿಡುವುದಿಲ್ಲ ಎಂದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್‌, ಉದ್ಯಮಿಗಳಾದ ಗಣೇಶ್‌ ಹೆಗ್ಡೆ, ಹರಿಯಪ್ಪ ಕೋಟ್ಯಾನ್‌, ಕಡ್ತಳ ವಿಶ್ವನಾಥ ಪೂಜಾರಿ ಪುಣೆ, ರಮೇಶ್‌ ಬಂಗೇರ, ರವೀಂದ್ರ ಶೆಟ್ಟಿ ಬಜಗೋಳಿ, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಜರಂಗ ದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ, ಪ್ರಮುಖರಾದ ಮಹಾಬಲ ಹೆಗಡೆ, ಪೂರ್ಣಿಮಾ ಸುರೇಶ್‌ ಉಪಸ್ಥಿತರಿದ್ದರು.

ಜಿಲ್ಲಾ ಸಂಯೋಜಕ ಚೇತನ್‌ ಪರಲ್ಕೆ ಸ್ವಾಗತಿಸಿದರು. ಅಜಿತ್‌ ಹಾಗೂ ಭಾಗ್ಯಶ್ರೀ ಐತಾಳ ನಿರೂಪಿಸಿದರು.

ಕೇಸರಿ ಬಾವುಟಕ್ಕೆ 10 ಲಕ್ಷ ರೂ. ಬಾಂಡ್‌!
ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌ ಪ್ರಸ್ತಾವನೆಗೈದು, ಕೇಸರಿ ಬಾವುಟ ಕಟ್ಟಲು ಪೊಲೀಸರು 10 ಲ.ರೂ.ಗಳ ಬಾಂಡ್‌ ಬರೆಸಿಕೊಂಡಿದ್ದಾರೆ. ಮುಂದೆ ಮನೆ ಮನೆಯಲ್ಲೂ ಕೇಸರಿ ಬಾವುಟ ಹಾರಿಸಲಿದ್ದೇವೆ. ಕೇಸರಿ ಬಾವುಟ ಹಾರಿಸಲು ಬಾಂಡ್‌ ಬರೆದುಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಜೋಡುಕಟ್ಟೆಯಿಂದ ಭವ್ಯ ಶೋಭಾಯಾತ್ರೆ
ಶೌರ್ಯ ಜಾಗರಣ ರಥಯಾತ್ರೆಯನ್ನು ಜೋಡುಕಟ್ಟೆಯಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ ಶೋಭಾಯಾತ್ರೆ ಕೋರ್ಟ್‌ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್‌ ಬಸ್‌, ಸಿಟಿ ಬಸ್‌ ನಿಲ್ದಾಣ, ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಎಂಜಿಎಂ ಮೈದಾನ ಪ್ರವೇಶಿಸಿದೆ. ಮೈದಾನದ ಸುತ್ತ ಕೇಸರಿ ಪತಾಕಿ, ಬಾವುಟದಿಂದ ಅಲಂಕರಿಸಲಾಗಿತ್ತು. ಪ್ರವೇಶದ್ವಾರದಲ್ಲಿ ಭಗತ್‌ ಸಿಂಗ್‌, ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್‌, ಚಂದ್ರ ಶೇಖರ್‌ ಅಜಾದ್‌, ಛತ್ರಪತಿ ಶಿವಾಜಿ ಮಹಾರಾಜ್‌ ಮೊದಲಾದ ಮಹನೀಯರ ಭಾವಚಿತ್ರ ಅಳವಡಿಸಲಾಗಿತ್ತು. ಕಲಾವಿದ ಜಗದೀಶ್‌ ಪುತ್ತೂರು ಮತ್ತು ತಂಡದಿಂದ ದೇಶಭಕ್ತಿಗೀತೆ ಗಾಯನ ನಡೆಯಿತು.

 

 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.