![terror attack on Army camp in Jammu and Kashmir’s Rajouri](https://www.udayavani.com/wp-content/uploads/2024/07/rajuori-415x229.jpg)
Daily Horoscope: ಹಲವು ಬಗೆಯ ಗೊಂದಲಗಳ ಕಾಟವಾದರೂ ಬದುಕು ಸುಗಮ
Team Udayavani, Oct 12, 2023, 8:22 AM IST
![1-thursday](https://www.udayavani.com/wp-content/uploads/2023/10/1-thursday-1-620x372.jpg)
ಮೇಷ: ಕಾರ್ಯ ವಿಳಂಬದಿಂದ ತಳಮಳ. ಉದ್ಯೋಗದಲ್ಲಿ ಸಾಮಾನ್ಯ ಮುನ್ನಡೆ. ಹೊಸ ಅವಕಾಶಗಳ ಅನ್ವೇಷಣೆ. ನಯವಂಚಕರ ಬಗ್ಗೆ ಎಚ್ಚರ. ವಚನ ಭಂಗವಾಗದಂತೆ ಎಚ್ಚರಿಕೆ ಇರಲಿ. ದೂರಪ್ರಯಾಣದ ಸಿದ್ಧತೆ. ಸ್ವಂತ ಉದ್ಯಮದಲ್ಲಿ ನೌಕರರ ಅಭಾವದ ಸಮಸ್ಯೆ.
ವೃಷಭ: ಒಂದೇ ಕ್ಷೇತ್ರದಲ್ಲಿ ಲಕ್ಷ್ಯವಿಟ್ಟು ಪ್ರಯತ್ನಿಸಿದಲ್ಲಿ ಪ್ರಗತಿ ಸಾಧ್ಯ. ಕ್ಷಿಪ್ರ ಆದಾಯದ ಯೋಜನೆಗಳಿಂದ ತೊಂದರೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶದಿಂದ ಪರಿಸ್ಥಿತಿಯಲ್ಲಿ ವ್ಯತ್ಯಾಸ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ.
ಮಿಥುನ: ಹಲವು ಬಗೆಯ ಗೊಂದಲಗಳ ಕಾಟವಾದರೂ ಬದುಕು ಸುಗಮ. ಉದ್ಯೋಗದಲ್ಲಿ ಮುನ್ನಡೆ. ನಿಗದಿತ ಕಾರ್ಯಗಳು ನಿರಾತಂಕವಾಗಿ ಸಾಗುತ್ತವೆ. ಗಣೇಶನ ಪ್ರಾರ್ಥನೆಯಿಂದ ಕಾರ್ಯಗಳು ನಿರ್ವಿಘ್ನ. ಹೊಸ ಕ್ಷೇತ್ರಗಳ ಅರಸುವಿಕೆಯಲ್ಲಿ ಮುನ್ನಡೆ.
ಕರ್ಕಾಟಕ: ಸ್ವಲ್ಪ ಮಟ್ಟಿಗೆ ಉಲ್ಲಾಸದ ವಾತಾವರಣದಲ್ಲಿ ಕಾಲ ಕಳೆಯುವಿರಿ. ಉದ್ಯೋಗ ಸ್ಥಾನದಲ್ಲಿ ಹರ್ಷ. ಸಹೋದ್ಯೋಗಿಗಳೊಂದಿಗೆ ಆರಾಮವಾಗಿ ಕಾಲ ಯಾಪನೆ. ಸ್ವಂತ ಉದ್ಯಮದ ವ್ಯಾಪ್ತಿ ಅನಾಯಾಸವಾಗಿ ವಿಸ್ತರಣೆ. ಉತ್ಪನ್ನಗಳ ಗ್ರಾಹಕ ವರ್ಗ ಬೆಳವಣಿಗೆ.
ಸಿಂಹ: ದೊಡ್ಡ ಲಾಭ- ನಷ್ಟ ಎರಡೂ ಇಲ್ಲದ ದಿನ. ಉದ್ಯೋಗದಲ್ಲಿ ಸ್ಥೆçರ್ಯ. ಸ್ವಂತ ವ್ಯವಹಾರಕ್ಕೆ ಎದುರಾಗಿದ್ದ ಹಳೆಯ ಸಮಸ್ಯೆಗೆ ಮುಕ್ತಿ. ಆಡಳಿತಗಾರರಿಗೆ ನೌಕರರ ಸ್ವಯಂಪ್ರೇರಿತ ಸಹಾಯ. ಪಶುಪಾಲನೆ, ಹೈನುಗಾರಿಕೆ, ಖಾದಿ ಉದ್ಯಮದಲ್ಲಿ ಆಸಕ್ತರಿಗೆ ಲಾಭ.
ಕನ್ಯಾ: ಧ್ಯಾನ, ಸತ್ಸಂಗ, ಸ್ವಾಧ್ಯಾಯಗಳಲ್ಲಿ ಆಸಕ್ತಿ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ವಾತಾವರಣ. ಹೊಸ ಉತ್ಪನ್ನಗಳಿಗೆ ಬೇಡಿಕೆ. ಧಾರ್ಮಿಕ ಕ್ಷೇತ್ರದಲ್ಲಿ ಪ್ರವಚನ ಮಾಡುವ ಅವಕಾಶ. ಪ್ರಮುಖ ವ್ಯಕ್ತಿಯೊಬ್ಬರ ಅಕಸ್ಮಾತ್ ಪರಿಚಯದಿಂದ ಲಾಭ ವಾಹನ ಚಾಲನೆಯಲ್ಲಿ ಜಾಗೃತೆ.
ತುಲಾ: ಜೀವನ ನಿರ್ವಹಣೆ ಸುಲಭ. ಸಂದಿಗ್ಧ ಪರಿಸ್ಥಿತಿಯಲ್ಲಿ ಅಪರಿಚಿತರಿಂದ ಸಹಾಯ. ಉದ್ಯೋಗದಲ್ಲಿ ಪರಸ್ಪರ ಸಹಕಾರ. ಮೇಲಿನವರಿಂದ ಶ್ಲಾಘನೆ. ದೂರದ ಬಂಧುಗಳ ಭೇಟಿ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ.
ವೃಶ್ಚಿಕ: ಮನೆಯಲ್ಲಿ ಸಂತಸದ ವಾತಾವರಣ. ಉದ್ಯೋಗಿಗಳು ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ. ಆಪ್ತರಿಂದ ಸಹಾಯ. ಹಿರಿಯರ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಚಿಂತಿತ ಕಾರ್ಯಗಳಲ್ಲಿ ಮುನ್ನಡೆ. ಮಕ್ಕಳಿಂದ ಶುಭ ಸಮಾಚಾರ.
ಧನು: ಗೃಹ ನಿರ್ಮಾಣದ ಕನಸು ನನ ಸಾಗುವುದು. ಹಿರಿಯರ ಸಲಹೆ ಪಾಲಿಸಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿ. ಜಲಸಂಪನ್ಮೂಲ, ಸ್ವರ್ಣೋದ್ಯಮಿಗಳಿಗೆ ನಿರೀಕ್ಷಿತ ಆದಾಯ ಪ್ರಾಪ್ತಿ. ವೃತ್ತಿ ಕೌಶಲ ವೃತ್ತಿಯವರಿಗೆ ಅನುಕೂಲಕರ ವಾತಾವರಣ.
ಮಕರ: ಗೃಹ ನಿರ್ಮಾಣದ ಕಾರ್ಯ ಮಂದಗತಿಯಲ್ಲಿ ಮುಂದುವರಿಕೆ. ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಾಲ ನೀಡು ವಾಗ ಯೋಚಿಸಿ ಮುಂದುವರಿಯಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.
ಕುಂಭ: ಕುಟುಂಬದ ಕ್ಷೇಮ ಪಾಲನೆಯೊಂದಿಗೆ ಸಮಾಜದ ಋಣ ತೀರಿಸುವ ಕಾರ್ಯದಲ್ಲಿ ಮುಂಚೂಣಿಯ ಸೇವೆ. ಉದ್ಯೋಗ ಕ್ಷೇತ್ರದ ಸಾಧನೆಗಳಿಗಾಗಿ ಮೇಲಿನವರಿಂದ ಮತ್ತು ಸಹೋ ದ್ಯೋಗಿಗಳಿಂದ ಶ್ಲಾಘನೆ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ.
ಮೀನ: ನಿಗದಿತ ಸಮಯದ ಮೊದಲೇ ಕಾರ್ಯ ಪೂರೈಸಿದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸು. ಸರಕಾರಿ ಕಚೇರಿಗಳಲ್ಲಿ ನೌಕರ ವರ್ಗದವರಿಂದ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಮುಂದುವರಿಕೆ. ಹೊಸ ಆಸ್ತಿ ಖರೀದಿ ಮಾತುಕತೆ ಮುಂದಕ್ಕೆ. ವ್ಯಾಪಾರ ಸ್ಥಾನ ನವೀಕರಣ ಕಾರ್ಯಕ್ಕೆ ತಾತ್ಕಾಲಿಕ ತಡೆ. ಆರೋಗ್ಯ ಉತ್ತಮ.
ಟಾಪ್ ನ್ಯೂಸ್
![terror attack on Army camp in Jammu and Kashmir’s Rajouri](https://www.udayavani.com/wp-content/uploads/2024/07/rajuori-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-24-sunday](https://www.udayavani.com/wp-content/uploads/2024/07/1-24-sunday-150x90.jpg)
Daily Horoscope: ಉತ್ತರದ ಕಡೆಗೆ ಸಣ್ಣ ಪ್ರಯಾಣ ಸಂಭವ, ಭವಿಷ್ಯದ ಯೋಜನೆಗಳ ಕುರಿತು ಚಿಂತನೆ
![Horoscope](https://www.udayavani.com/wp-content/uploads/2024/07/horocospe-150x83.jpg)
Daily Horoscope; ಹೇಗಿದೆ ನೋಡಿ ನಿಮ್ಮ ಇಂದಿನ ರಾಶಿಫಲ
![1-24-friday](https://www.udayavani.com/wp-content/uploads/2024/07/1-24-friday-150x90.jpg)
Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ
![1-24-thursday](https://www.udayavani.com/wp-content/uploads/2024/07/1-24-thursday-150x90.jpg)
Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ
![Dina Bhavishya](https://www.udayavani.com/wp-content/uploads/2024/07/Dina-Bhavishya-150x90.jpg)
Daily Horoscope; ಹಿತಶತ್ರುಗಳ ಕಾಟ, ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ
MUST WATCH
ಹೊಸ ಸೇರ್ಪಡೆ
![terror attack on Army camp in Jammu and Kashmir’s Rajouri](https://www.udayavani.com/wp-content/uploads/2024/07/rajuori-150x83.jpg)
Rajouri; ಸೇನಾ ಶಿಬಿರದ ಮೇಲೆ ಉಗ್ರರ ದಾಳಿ; ಗಾಯಗೊಂಡ ಓರ್ವ ಸೈನಿಕ
![1](https://www.udayavani.com/wp-content/uploads/2024/07/1-5-150x90.jpg)
ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?
![Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್!](https://www.udayavani.com/wp-content/uploads/2024/07/himachala-150x91.jpg)
Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್!
![ಕಾರ್ಮಿಕರು ಚಹಾ ಕುಡಿಯಲು ಹೋಗಿದ್ದರಿಂದ ತಪ್ಪಿತು ದುರಂತ](https://www.udayavani.com/wp-content/uploads/2024/07/nandi-150x83.jpg)
Vijayapura; ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ತಪ್ಪಿದ ಭಾರಿ ಅನಾಹುತ
![NEET-UG Counselling: ನೀಟ್-ಯುಜಿ ಕೌನ್ಸೆಲಿಂಗ್ ಈ ಮಾಸಾಂತ್ಯಕ್ಕೆ ಆರಂಭ?](https://www.udayavani.com/wp-content/uploads/2024/07/neet-5-150x83.jpg)
NEET-UG Counselling: ನೀಟ್-ಯುಜಿ ಕೌನ್ಸೆಲಿಂಗ್ ಈ ಮಾಸಾಂತ್ಯಕ್ಕೆ ಆರಂಭ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.