Food recipes ಈ ಪರೋಟ ಮಾಡೋದೂ ಸಿಂಪಲ್ ಆರೋಗ್ಯಕ್ಕೂ ಸೂಪರ್
ಶ್ರೀರಾಮ್ ನಾಯಕ್, Oct 15, 2023, 10:30 AM IST
ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನ್ಸಸಿಗೆ ಬರುವುದು ಆಲೂ ಪರೋಟ, ಗೋಬಿ ಪರೋಟ, ಪನ್ನೀರ್ ಪರೋಟ ಹೀಗೆ ವಿವಿಧ ರೀತಿಯಲ್ಲಿ ಪರೋಟವನ್ನು ನೀವು ತಿಂದಿರಬಹುದು ಆದರೆ ನುಗ್ಗೆಕಾಯಿಂದ ಮಾಡುವ ಪರೋಟದ ರುಚಿಯನ್ನು ಸವಿದು ನೋಡಿದ್ದಿರಾ ? ಇಲ್ಲವೆಂದರೆ ನೀವೇ ಮನೆಯಲ್ಲಿ ಅತಿ ಸುಲಭ ವಿಧಾನದಲ್ಲಿ ನುಗ್ಗೆಕಾಯಿ ಪರೋಟ ಮಾಡಬಹುದು.
ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ ಆಹಾರ. ಇದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಾಗಿ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ನುಗ್ಗೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ ಅಂಶವು ಹೆಚ್ಚಾಗಿದೆ.
ಬನ್ನಿ ಹಾಗಾದರೆ ಅತೀ ಸರಳ ವಿಧಾನದಲ್ಲಿ ನುಗ್ಗೆಕಾಯಿ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ…
ನುಗ್ಗೆಕಾಯಿ ಪರೋಟ
ಬೇಕಾಗುವ ಸಾಮಗ್ರಿಗಳು
ನುಗ್ಗೆ ಕಾಯಿ-2,ಗೋಧಿ ಹಿಟ್ಟು-1ಕಪ್, ಬಿಳಿ ಎಳ್ಳು-2 ಚಮಚ,ಕೊತ್ತಂಬರಿ ಪುಡಿ-1ಚಮಚ, ಮೆಣಸಿನ ಪುಡಿ(ಖಾರದ ಪುಡಿ)-2 ಚಮಚ, ಹಿಂಗು- ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ, ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ-1, ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಆಮ್ಚೂರ್ ಪುಡಿ-ಸ್ವಲ್ಪ, ಅರಶಿನ ಪುಡಿ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
-ಮೊದಲಿಗೆ ನುಗ್ಗೆಯನ್ನು ಸ್ವಚ್ಛವಾಗಿ ತೊಳೆದು,ಚೆನ್ನಾಗಿ ಬೇಯಿಸಿಕೊಳ್ಳಿ.ನಂತರ ಬೇಯಿಸಿದ ನುಗ್ಗೆಯನ್ನು ಹಿಸುಕಿ ರಸವನ್ನು ತೆಗೆದುಕೊಳ್ಳಿ.
-ಒಂದು ಪಾತ್ರೆಗೆ ನುಗ್ಗೆಯ ರಸವನ್ನು ಹಾಕಿ ಅದಕ್ಕೆ ಗೋಧಿ ಹಿಟ್ಟು,ಮೆಣಸಿನ ಪುಡಿ,ಕೊತ್ತಂಬರಿ ಪುಡಿ,ಆಮ್ಚೂರ್ ಪುಡಿ, ಹಿಂಗು,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ನಂತರ ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ,ಬಿಳಿ ಎಳ್ಳು ,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಪುನಃ ಮಿಶ್ರಣ ಮಾಡಿಕೊಳ್ಳಿ.
-ಆಬಳಿಕ ಅಗತ್ಯಕ್ಕೆ ಅನುಗುಣವಾಗಿ ನೀರು ಸೇರಿಸಿ(ಬೇಕಿದ್ದರೆ ಮಾತ್ರ) ಹಿಟ್ಟನ್ನು ಮೃದುವಾಗಿ ಬೆರೆಸಿಕೊಳ್ಳಿ ನಂತರ ಸ್ವಲ್ಪ ಸಮಯ ಹಾಗೇ ಬಿಡಿ.
-ತದನಂತರ ಹಿಟ್ಟನ್ನು ಉಂಡೆ ಮಾಡಿ ನಿಮಗೆ ಬೇಕಾಗುವ ಆಕಾರದಲ್ಲಿ ಲಟ್ಟಿಸಿರಿ.ಲಟ್ಟಿಸುವಾಗ ಸ್ವಲ್ಪ ಎಣ್ಣೆಯನ್ನು ಹಾಕಿ ಲಟ್ಟಿಸಿರಿ.
-ನಂತರ ಕಾದ ತವಾದ ಮೇಲೆ ಹಾಕಿಕೊಂಡು ಎಣ್ಣೆಯಿಂದ ಕಾಯಿಸಿರಿ.ಪರೋಟ ಕೆಂಪಗಾದ ಮೇಲೆ ತವಾದ ಮೇಲಿಂದ ತೆಗೆಯಿರಿ.
-ಬಿಸಿ-ಬಿಸಿ ಇರುವಾಗಲೇ ತಿನ್ನಲು ಬಲು ರುಚಿಯಾಗಿರುತ್ತದೆ ನುಗ್ಗೆಕಾಯಿ ಪರೋಟ.
-ಶ್ರೀರಾಮ್ ಜಿ. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..
Exclusive: ಇತಿಹಾಸ ಕೇವಲ ರಾಜರ ಕಥೆಯಲ್ಲ, ಅದು ನಮ್ಮ ಜೀವನಶೈಲಿ: ಧರ್ಮೇಂದ್ರ ಕುಮಾರ್
Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ
Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ
Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
BBK11: ಬಿಗ್ ಬಾಸ್ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.