![Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…](https://www.udayavani.com/wp-content/uploads/2024/07/11-415x249.jpg)
Bagalkot; ನಗರಸಭೆ ಆಯುಕ್ತರ ಹುದ್ದೆಗೆ ಇಬ್ಬರ ಕಿತ್ತಾಟ
Team Udayavani, Oct 16, 2023, 10:54 AM IST
![Bagalkot; ನಗರಸಭೆ ಆಯುಕ್ತರ ಹುದ್ದೆಗೆ ಇಬ್ಬರ ಕಿತ್ತಾಟ](https://www.udayavani.com/wp-content/uploads/2023/10/bagalkot-1-620x342.jpg)
ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ನಗರಸಭೆ ಆಯುಕ್ತರ ಹುದ್ದೆಗೆ ಇಬ್ಬರು ಕೆ.ಎಸ್.ಎಂ.ಎಸ್ ಅಧಿಕಾರಿಗಳು ಕಿತ್ತಾಡುವ ಪ್ರಸಂಗ ಸೋಮವಾರ ಬೆಳಗ್ಗೆ ನಡೆದಿದೆ.
ನಗರಸಭೆ ಆಯುಕ್ತರನ್ನಾಗಿ ರಮೇಶ ಜಾಧವ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತ್ತು. ಕಳೆದೊಂದು ವರ್ಷದಿಂದ ಆ ಹುದ್ದೆಯಲ್ಲಿದ್ದ ಆರ್.ವಾಸಣ್ಣ, ಕೆಎಟಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ವರ್ಗಾವಣೆಗೆ ನ್ಯಾಯಾಲಯ ತಡೆ ನೀಡಿದೆ ಎಂದು ಹೇಳಿರುವ ವಾಸಣ್ಣ, ಸೋಮವಾರ ಬೆಳಗ್ಗೆ 10ಕ್ಕೆ ಕಚೇರಿಗೆ ಬಂದು, ಆಯುಕ್ತರ ಕುರ್ಚಿಯಲ್ಲಿ ಕುಳಿತಿದ್ದರು.
ಬಳಿಕ ಕಚೇರಿಗೆ ಬಂದ ಮತ್ತೊಬ್ಬ ಆಯುಕ್ತ ರಮೇಶ ಜಾಧವ ಇವರನ್ನು ಕಂಡು ಶಾಕ್ ಗೆ ಒಳಗಾದರು. ‘ಯಾಕ್ರಿ ನೀವ್ಯಾಕ್ ನನ್ನ ಕುರ್ಚಿಯಲ್ಲಿ ಕುಳಿತೀರಿ’ ಎಂದು ಪ್ರಶ್ನಿಸಿದಾಗ, ನನಗೆ ನ್ಯಾಯಾಲಯದ ಆದೇಶವಾಗಿದೆ ಎಂದು ಉತ್ತರಿಸಿದ್ದಾರೆ.
ಆದೇಶ ತೋರಿಸಿ ಎಂದು ಕೇಳಿದರೂ ತೋರಿಸಿಲ್ಲ ಎಂದು ಅಧಿಕಾರಿ ಜಾಧವ ಹೇಳಿದ್ದಾರೆ.
ಡಿಎಚ್ಓ ಹುದ್ದೆ ಕುರ್ಚಿ ಕಿತ್ತಾಟ ಮುಗಿಯಿತು ಎನ್ನುವಷ್ಟರಲ್ಲಿ ಈಗ ನಗರಸಭೆ ಆಯುಕ್ತರ ಸರದಿ ಶುರುವಾಗಿದೆ. ಒಂದೇ ಚೇಂಬರ್ ನಲ್ಲಿ ಇಬ್ನರು ಅಧಿಕಾರಿಗಳು ಕುಳಿತಿದ್ದು, ಸಿಬ್ಬಂದಿಗೆ, ಯಾರ ಮಾತು ಕೇಳಬೇಕು ಎಂಬ ಪೀಕಲಾಟ ಶುರುವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ವರ್ಗವಾಣೆಯಾಗಿದ್ದ ಆರ್ ವಾಸನ್, ವರ್ಗಾವಣೆ ಪ್ರಶ್ನಿಸಿ ಕೆಇಟಿ ಮೆಟ್ಟಿಲೇರಿದ್ದರು. ಕಳೆದ ಆಗಷ್ಟ ಆಗಷ್ಟ್ 12 ರಂದು ಆರ್ ವಾಸನ್ ಅವರ ವರ್ಗವಾಣೆಯಾಗಿತ್ತು. ನಂತರ ರಮೇಶ್ ಜಾಧವ್ ನಗರಸಭಾ ಆಯುಕ್ತರಾಗಿ ಸರ್ಕಾರದಿಂದ ನಿಯುಕ್ತಿಗೊಂಡಿದ್ದರು.
ಸರ್ಕಾರಿ ಆದೇಶ ತಗೆದುಕೊಂಡು ಬಂದು ಹುದ್ದೆಗೆ ಬರಲಿ ಎಂದು ಆಯುಕ್ತ ರಮೇಶ್ ಜಾಧವ್ ವಾದ ಮಾಡುತ್ತಿದ್ದಾರೆ. ಕೆಇಟಿ ಯಿಂದ ಆದೇಶ ತಗೊಂಡು ಬಂದಿರುವೆ ಎಂದು ಹಿಂದಿನ ನಗರಸಭಾ ಆಯುಕ್ತ ಆರ್ ವಾಸನ್ ಪ್ರತಿವಾದಿಸುತ್ತಿದ್ದಾರೆ.
ಒಟ್ಟಾರೆ ಇಬ್ಬರು ಅಧಿಕಾರಿಗಳ ಕುರ್ಚಿ ಕಿತ್ತಾಟ ಕಂಡು ನಗರಸಭೆ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.
ಟಾಪ್ ನ್ಯೂಸ್
![Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…](https://www.udayavani.com/wp-content/uploads/2024/07/11-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ](https://www.udayavani.com/wp-content/uploads/2024/07/harmonium-150x98.jpg)
ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-150x86.jpg)
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
![Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ](https://www.udayavani.com/wp-content/uploads/2024/06/ag-1-150x93.jpg)
Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ
![Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ](https://www.udayavani.com/wp-content/uploads/2024/06/sugar-factory-mudhol-150x95.jpg)
Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ
![Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ](https://www.udayavani.com/wp-content/uploads/2024/06/Minister-RB-Timmapur-150x98.jpg)
Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.