ನವರಾತ್ರಿ: ಇಂದಿನ ಆರಾಧನೆ- ಆತ್ಮಶಕ್ತಿ ಕರುಣಿಸುವ ದೇವಿ “ಚಂದ್ರಘಂಟಾ”
Team Udayavani, Oct 16, 2023, 11:19 PM IST
ನವರಾತ್ರಿಯ ಮೂರನೇ ದಿವಸ, ತೃತೀಯಾದಂದು ದೇವಿ ದುರ್ಗೆಯ ಮೂರನೇ ರೂಪವಾದ ಚಂದ್ರಘಂಟಾ ಶಕ್ತಿಯನ್ನು ಸಾಧಕನು ಅರ್ಚಿಸುತ್ತಾನೆ.
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
“ಘಂಟಾಕಾರದ ಅರ್ಧಚಂದ್ರನನ್ನು ಶಿರಸ್ಸಿನಲ್ಲಿ ಧರಿಸಿರುವವಳು ಚಂದ್ರಘಂಟಾ. ಇವಳ ಶರೀರದ ಕಾಂತಿ ಚಿನ್ನದಂತೆ ಹೊಳೆಯುತ್ತಿರುವುದು. ಖಡ್ಗ, ಧನಸ್ಸು, ತ್ರಿಶೂಲ ಮುಂತಾದ ದಿವ್ಯಾಸ್ತ್ರಗಳನ್ನು ಹತ್ತು ಕೈಯಲ್ಲಿ ಧರಿಸಿದ್ದಾಳೆ. ಸಿಂಹಾರೂಢಳಾಗಿ ಯುದ್ಧಕ್ಕೆ ಸನ್ನದ್ಧಳಾಗಿರುವಂತೆ ತೋರುವಳು. ಘಂಟಾನಾದದಂತೆ ಈಕೆಯ ಗಂಭೀರ ಧ್ವನಿ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ದೇವಿ ದುಷ್ಟರನ್ನು ಶಿಕ್ಷಿಸುತ್ತಾಳೆ, ಸಜ್ಜನರಿಗೆ ರಕ್ಷಾಕವಚವಾಗಿ ನಿಂತಿದ್ದಾಳೆ. ಈಕೆಯನ್ನು ಆರಾಧಿಸುವ ಭಕ್ತರಿಗೆ ನಿರ್ಭಯತೆ, ಪರಾಕ್ರಮ ಮತ್ತು ಆತ್ಮಶಕ್ತಿಗಳು ದೊರೆಯುತ್ತವೆ.’
ಈ ಆದಿಶಕ್ತಿಯ ಉಪಾಸನೆಯಿಂದ ಸಂಸಾರದ ತ್ರಿತಾಪಗಳು ದೂರವಾಗುತ್ತವೆ. ಇಹ-ಪರದಲ್ಲಿ ಸದ್ಗತಿಯು ದೊರಕುತ್ತದೆ. ಸಾಧಕನು ಈಕೆಯನ್ನು ಪೂಜಿಸುವುದರಿಂದ ಮನಸ್ಸು ಮಣಿಪುರ ಚಕ್ರವನ್ನು ಪ್ರವೇಶಿಸುತ್ತದೆ. ಸಾಧಕನಿಗೆ ದೇವಿಯ ಕೃಪೆಯಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ಮಂಗಳ ಧ್ವನಿಗಳು ಕೇಳಿಬರುತ್ತವೆ. ಸಾಧಕನು ಧ್ಯಾನಸಿದ್ಧನಾದಾಗ ಘಂಟೆಯ ಧ್ವನಿಯೂ ಅಂದರೆ ಅನಾಹತ ಧ್ವನಿಯೂ ಕೇಳಿಬರುತ್ತದೆ ಎಂದು ತಂತ್ರಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’
Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್ಮೇಕರ್!
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.