World Cup; ಯಾವ ತಂಡವನ್ನೂ ಸೋಲಿಸಬಲ್ಲೆವು: ನೆದರ್ಲೆಂಡ್ಸ್‌ ನಾಯಕ ಎಡ್ವರ್ಡ್ಸ್‌


Team Udayavani, Oct 18, 2023, 11:54 PM IST

1-ssad

ಧರ್ಮಶಾಲಾ: ವಿಶ್ವಕಪ್‌ನ “ಹಿಸ್ಟಾರಿಕ್‌ ಅಪ್‌ಸೆಟ್‌’ ಪರಾಕ್ರಮದಿಂದ ನೆದರ್ಲೆಂಡ್ಸ್‌ ತಂಡ ಭಾರೀ ಸುದ್ದಿಯಲ್ಲಿದೆ. ವಿಶ್ವಕಪ್‌ ಇತಿಹಾಸ ದಲ್ಲೇ ಸರ್ವಾಧಿಕ ರನ್‌ ಗಳಿಸಿದ ದಕ್ಷಿಣ ಆಫ್ರಿಕಾ ವನ್ನು ಧರ್ಮ ಶಾಲಾ ದಲ್ಲಿ ನೆಲಕ್ಕೆ ಕೆಡವಿ ನಗು ಹೊಮ್ಮಿಸಿದೆ. ಇದರಿಂದ ಕೂಟದ ದೊಡ್ಡ ದೊಡ್ಡ ತಂಡಗಳಿಗೆ ಸಹಜವಾಗಿಯೇ ಭೀತಿ ಆವರಿಸಿದೆ.

ಈ ಐತಿಹಾಸಿಕ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನೆದರ್ಲೆಂಡ್ಸ್‌ ತಂಡದ ನಾಯಕ ಸ್ಕಾಟ್‌ ಎಡ್ವರ್ಡ್ಸ್‌, ನಾವು ಇದೇ ರೀತಿಯಲ್ಲಿ ಆಡುತ್ತ ಹೋದರೆ ಯಾವ ತಂಡವನ್ನು ಬೇಕಾದರೂ ಮಣಿಸಬಲ್ಲೆವು ಎಂದಿದ್ದಾರೆ.

“ಎಲ್ಲ ತಂಡಗಳಂತೆ ನಾವು ಇಲ್ಲಿಗೆ ಬಂದಿರುವುದು ಗೆಲ್ಲಲಿಕ್ಕೇ ಹೊರತು ಲೆಕ್ಕದ ಭರ್ತಿಗಲ್ಲ. ಪ್ರತಿ ಯೊಂದು ಪಂದ್ಯವಲ್ಲದಿದ್ದರೂ ಕೆಲವು ಪಂದ್ಯಗಳನ್ನಾದರೂ ಜಯಿ ಸು ವುದು ನಮ್ಮ ಯೋಜನೆ. ರ್‍ಯಾಂಕಿಂಗ್‌ ಮಾನದಂಡದಂತೆ ಎಲ್ಲವೂ ನಮಗಿಂತ ಮೇಲ್ಮಟ್ಟದ ತಂಡ ಗಳೇ ಆಗಿವೆ. ಹೀಗಾಗಿ ನಾವು ಯಾವ ತಂಡವನ್ನು ಮಣಿಸಿದರೂ ಅದೊಂದು ಇತಿಹಾಸವಾಗುತ್ತದೆ. ಇಲ್ಲಿ ದೊಡ್ಡ ಹಾಗೂ ಬಲಿಷ್ಠ ತಂಡ ವಾದ ದಕ್ಷಿಣ ಆಫ್ರಿಕಾವನ್ನು ಕೆಡವಿ ದ್ದೇವೆ. ಇದೇ ಸಾಮರ್ಥ್ಯವನ್ನು ಮುಂದು ವರಿಸಿಕೊಂಡು ಹೋದರೆ ನಾವು ಯಾವ ತಂಡವನ್ನೂ ಸೋಲಿಸ ಬಲ್ಲೆವು…’ ಎಂಬುದಾಗಿ ಎಡ್ವರ್ಡ್ಸ್‌ ಆತ್ಮವಿಶ್ವಾಸದಿಂದ ನುಡಿದರು.

ಕೇವಲ 3ನೇ ಗೆಲುವು
ಇದು ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್‌ ಸಾಧಿಸಿದ ಕೇವಲ 3ನೇ ಜಯ. ಅದೂ 16 ವರ್ಷಗಳ ಬಳಿಕ ಒಲಿದ ಗೆಲುವು. ಇದಕ್ಕೂ ಮೊದಲು 2003ರಲ್ಲಿ ನಮೀಬಿಯಾವನ್ನು, 2007ರಲ್ಲಿ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿತ್ತು. ಆದರೆ ದೊಡ್ಡ ತಂಡವೊಂದನ್ನು ಹೊಡೆ ದುರುಳಿಸಿದ್ದು ಇದೇ ಮೊದಲು.
“ನಾವು ಅರ್ಹತಾ ಸುತ್ತಿನಿಂದ ಬಂದವರು. ಪ್ರಧಾನ ಸುತ್ತಿಗೆ ಅರ್ಹತೆ ಪಡೆದ ಕೂಡಲೇ ನಾವು ಮಾನಸಿಕವಾಗಿ ಸಜ್ಜಾದೆವು. ಇಲ್ಲಿಗೆ ಮಜಾ ಮಾಡಲು ಬಂದದ್ದಲ್ಲ. ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದು ಮುಂದಿನ ಹಂತದಲ್ಲಿ ಗುರುತಿಸಿಕೊಳ್ಳುವುದು ನಮ್ಮ ಯೋಜನೆ’ ಎಂದರು.
ಪ್ರಯತ್ನ ಜಾರಿಯಲ್ಲಿರುತ್ತದೆ

“ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ತಂಡ. ಸೆಮಿಫೈನಲ್‌ ಸಾಧ್ಯತೆಯನ್ನು ಬಹು ತೇಕ ತೆರೆದಿರಿಸಿದ ತಂಡ. ನಾವು ಕೂಡ ಇದೇ ಹಂತಕ್ಕೆ ಏರಬೇಕಾದರೆ ಇಂಥ ತಂಡಗಳನ್ನು ಸೋಲಿಸುವುದು ಅನಿ ವಾರ್ಯ. ಅಂದಮಾತ್ರಕ್ಕೆ ಮುಂದಿನ ಸುತ್ತು ತಲುಪುತ್ತೇವೆ ಎಂದಲ್ಲ. ಆದರೆ ಪ್ರಯತ್ನ ಜಾರಿಯಲ್ಲಿರುತ್ತದೆ’ ಎಂಬುದು ನೆದರ್ಲೆಂಡ್ಸ್‌ ಕಪ್ತಾನನ ಅನಿಸಿಕೆ.

ಟೋಟಲ್‌ ಕ್ರಿಕೆಟ್‌
“ಒಂದು ತಂಡವಾಗಿ ನಾವು ಅತ್ಯು ತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಇದನ್ನೇ “ಟೋಟಲ್‌ ಕ್ರಿಕೆಟ್‌’ ಎನ್ನು ವುದು. ನಾನು ಸರಿಯಾದ ಹೊತ್ತಿನಲ್ಲಿ ಬ್ಯಾಟಿಂಗ್‌ನಲ್ಲಿ ಸೆಟ್‌ ಆದೆ. ರೋಲ್ಫ್ ಮತ್ತು ಆರ್ಯನ್‌ ಕೊನೆಯ ಹಂತ ದಲ್ಲಿ ನಂಬಲಾಗದ ಆಟ ಪ್ರದರ್ಶಿ ಸಿದರು. ಹೀಗಾಗಿ ನಮ್ಮಿಂದ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಯಿತು. ಬೌಲಿಂಗ್‌ ಬೊಂಬಾಟ್‌ ಆಗಿತ್ತು. ಇಲ್ಲಿಂದ ಮುಂದುವರಿಯಬೇಕಿದೆ…’ ಎಂದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರ ರಾದ, ವಿಕೆಟ್‌ ಕೀಪರ್‌ ಕೂಡ ಆಗಿರುವ ಸ್ಕಾಟ್‌ ಎಡ್ವರ್ಡ್ಸ್‌ ಹೇಳಿದರು.

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

1-sadsdas

World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು

1-qweqwwqe

ICC ವಿಶ್ವಕಪ್‌ ಸಾಧಕರ ತಂಡಕ್ಕೆ ರೋಹಿತ್‌ ನಾಯಕ; ತಂಡ ಹೀಗಿದೆ

1-ww-eqeqwe

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

1-saddasd

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.