Goa;ಕರ್ನಾಟಕದ ಇಬ್ಬರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ದರೋಡೆ
Team Udayavani, Oct 19, 2023, 4:40 PM IST
ಪಣಜಿ: ಕರ್ನಾಟಕದ ಇಬ್ಬರು ಪ್ರವಾಸಿಗರನ್ನು ಗೋವಾದ ಕಲಂಗುಟ್ನಲ್ಲಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಪ್ರವಾಸಿಗರನ್ನು ಥಳಿಸಿ, ಯುಪಿಐ ವಹಿವಾಟಿನ ಮೂಲಕ 30,000 ರೂ.ಗಳನ್ನು ಬಲವಂತವಾಗಿ ದೋಚಲಾಗಿದೆ. ಕಲಂಗುಟ್ ಪ್ರದೇಶದ ಮೂವರು ದಲ್ಲಾಳಿಗಳು ಈ ಕೃತ್ಯ ಎಸಗಿದ್ದಾರೆ.
ಕೋಲಾರದ ಬಸ್ತಾರಹಳ್ಳಿಯ ಸತೀಶ್ ಕುಮಾರ್, ಶ್ರೀನಿವಾಸ ಶೆಟ್ಟಿ ಎಂಬ ಪ್ರವಾಸಿಗರು ದೂರು ದಾಖಲಿಸಿದ್ದರು.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 17 ರಂದು ಟೂರಿಸ್ಟ್ ಗೈಡ್ ಕಮ್ ಬ್ರೋಕರ್ ರವರು ಪ್ರವಾಸಿಗರಾದ ಶೆಟ್ಟಿ ಮತ್ತು ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಕೊಲೆ ಬೆದರಿಕೆ ಹಾಕಿದ ದಲ್ಲಾಳಿಗಳು, ಯುಪಿಐ ವಹಿವಾಟಿನ ಮೂಲಕ ಶೆಟ್ಟಿ ಅವರ ಬ್ಯಾಂಕ್ ಖಾತೆಯಿಂದ 30,000 ರೂ. ಹಣವನ್ನು ಬಲವಂತವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ. ಪ್ರಕರಣದಲ್ಲಿ ಮೂವರು ಶಂಕಿತ ಟೂರಿಸ್ಟ್ ಬ್ರೋಕರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಶಾರುಖ್ ಖಾನ್ ಬಶೀರ್ ಅಹಮದ್ ದೇವಗಿರಿ (25) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಪರ್ರಾದ ಕಂಕಾದ ನಿವಾಸಿಯಾಗಿದ್ದು, ಮೂಲತಃ ದೇವಿಹೊಸೂರು ಹಾವೇರಿ ಕರ್ನಾಟಕದ ಅತ್ತಾರ ಬೀದಿಯ ನಿವಾಸಿ ಎನ್ನಲಾಗಿದೆ. ಸಿರಿಲ್ ಅಲೆಕ್ಸ್ ಡಯಾಜ್(42) ಮತ್ತೊಬ್ಬ ಬಂಧಿತ ಆರೋಪಿ. ಈತ ಸೇಂಟ್ ಸೆಬಾಸ್ಟಿಯನ್ಸ್ ಚಾಪೆಲ್, ದೇವ್ಸು, ಪೆಡ್ನೆ ನಿವಾಸಿ. ಮೂರನೇ ಆರೋಪಿ ಅವಿನಾಶ್ ಕಾಂತಿ ಪಟೇಲ್ (32) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಹನುಮಾನ್ ಮಂದಿರ, ಖೋಬ್ರವಾಡೊ, ಕಲಾಂಗುಟ್ ನಿವಾಸಿ ಎನ್ನಲಾಗಿದೆ.
ಕಲಂಗುಟ್ ಪೊಲೀಸ್ ಉಪನಿರೀಕ್ಷಕ ರಾಜಾರಾಮ್ ಬಗ್ಕರ್ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಕಲಂಗುಟ್ ಠಾಣೆ ಇನ್ಸ್ಪೆಕ್ಟರ್ ಪರೇಶ್ ನಾಯ್ಕ್ ಹಾಗೂ ಪರವರಿ ಎಸ್ಡಿಪಿಒ ವಿಶ್ವೇಶ್ ಕರ್ಪೆ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
Thug Life: ದುಬಾರಿ ಬೆಲೆಗೆ ಕಮಲ್ ಹಾಸನ್ ʼಥಗ್ ಲೈಫ್ʼ ಓಟಿಟಿ ರೈಟ್ಸ್ ಸೇಲ್
BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್
Padmaavat To Billu.. ಟೈಟಲ್ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್ ಸಿನಿಮಾಗಳಿವು
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.