Kustagi: ಜೆಸ್ಕಾಂ ಸಿಬ್ಬಂದಿಗೆ ಅಶ್ಲೀಲವಾಗಿ ನಿಂದನೆ; ಠಾಣೆಗೆ ದೂರು
Team Udayavani, Oct 20, 2023, 1:26 PM IST
ಕುಷ್ಟಗಿ: ವಿದ್ಯುತ್ ಸರಬರಾಜಿನಲ್ಲಿ ತಾಂತ್ರಿಕ ಅಡಚಣೆಗೆ ಬ್ಯಾಲಿಹಾಳ ಗ್ರಾಮದ ವ್ಯಕ್ತಿಯೋರ್ವ ಜೆಸ್ಕಾಂ ಶಾಖಾಧಿಕಾರಿ ಹಾಗೂ 220 ಕೆವಿ ವಿತರಣಾ ಘಟಕದ ಸಿಬ್ಬಂದಿಗೆ ಅಶ್ಲೀಲ ಬೈಗುಳದಲ್ಲಿ ನಿಂದಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಗುರುವಾರ ಕೊರಡಕೇರಾ ಫೀಡರ್ ಲೈನ್ ಗೆ ಸಮಯ 8-40 ರಿಂದ ಮಧ್ಯಾಹ್ನ 1-45 ವರೆಗೆ ವಿದ್ಯುತ್ ಸರಬರಾಜಿನ ಮಧ್ಯೆ ಟಿಸಿ ತಾಂತ್ರಿಕ ಅಡಚಣೆಯಿಂದ ಅರ್ಧಗಂಟೆ ಪೂರೈಕೆ ಸ್ಥಗಿತಗೊಂಡಿದೆ. ನಂತರ ತಾಂತ್ರಿಕ ಅಡಚಣೆ ಸರಿಪಡಿಸಿ ಸಮಯ 2-30ರವರೆಗೆ ವಿಸ್ತರಿಸಿ ಸರ್ಕಾರ ನಿಯಮದನ್ವಯ 5 ಗಂಟೆ ವಿದ್ಯುತ್ ಪೂರೈಕೆಯ ಸೇವೆ ಪರಿಪೂರ್ಣಗೊಳಿಸಲಾಗಿತ್ತು.
ಈ ಬೆಳವಣಿಗೆಯಲ್ಲಿ ಬ್ಯಾಲ್ಯಾಳ ಗ್ರಾಮದ ಹನಮಂತಪ್ಪ ಬೀರಪ್ಪ ಆಡೀನ್ ಎನ್ನುವ ವ್ಯಕ್ತಿ ವಿದ್ಯುತ್ ಪೂರೈಕೆಯಲ್ಲಿ ಅರ್ಧ ಗಂಟೆಯ ವ್ಯತ್ಯಯಕ್ಕೆ ಕೋಪೋದ್ರಿಕ್ತನಾಗಿ 220 ಕೆವಿ ವಿತರಣಾ ಸಂಸ್ಥೆಯ ಸಿಬ್ಬಂದಿಗೆ ಅವಾಚ್ಯವಾಗಿ ಬೈದಿರವುದಲ್ಲದೇ ಪದೇ ಪದೇ ಫೋನ್ ಮಾಡಿ ಕಿರಿಕಿರಿ ಮಾಡಿದ್ದು ಅಲ್ಲದೇ ಕುಷ್ಟಗಿ ಜೆಸ್ಕಾಂ ಶಾಖಾಧಿಕಾರಿ ತಾಜುದ್ದೀನ್ ಅವರಿಗೆ ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾನೆ. ಬ್ಯಾಲಿಹಾಳ ಗ್ರಾಮದ ವ್ಯಕ್ತಿ ಹನಮಂತಪ್ಪ ಆಡೀನ್ ಅಸಹನೀಯ ಬೈಗುಳ ಸಹಿಸಿಕೊಂಡು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸದರಿ ವ್ಯಕ್ತಿಯ ವಿರುದ್ದ ಕ್ರಮವಹಿಸಬೇಕು. ಸರ್ಕಾರದ ನಿಯಮದಂತೆ ಪೂರೈಕೆಯ ವೇಳೆ ಉಂಟಾಗುವ ವಿದ್ಯುತ್ ವ್ಯತ್ಯಯಕ್ಕೆ ಸಿಬ್ಬಂದಿಯನ್ನು ಹೊಣೆ ಮಾಡದಂತೆ ಜಾಗೃತಿ ಮೂಡಿಸಲು ಜೆಸ್ಕಾಂ ಹಾಗೂ 220ಕೆವಿ ವಿತರಣಾ ಘಟಕದ ಸಿಬ್ಬಂದಿ ಪೊಲೀಸ್ ಠಾಣೆ ಪಿಎಸೈ ಹಾಗೂ ಸಿಇಐ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Mysore: ಜಗತ್ತು ಮೈಸೂರಿನತ್ತ ನೋಡಲು ಮಹಾರಾಜರೆ ಕಾರಣ: ಸಚಿವ ಎಚ್. ಕೆ ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್
Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ
Caste Census ಸಂಘರ್ಷ!; ಸಂಪುಟದಲ್ಲಿ ಚರ್ಚಿಸಿ ಸಮೀಕ್ಷಾ ವರದಿ ಮಂಡನೆ: ಸಿದ್ದರಾಮಯ್ಯ
UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್ 18, 19ಕ್ಕೆ ಸಿಇಟಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ
Gangavathi: ಸತತ ಮಳೆಗೆ ಕುಸಿದ ಮನೆ; ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ-ಗ್ರಾಮಸ್ಥರಿಂದ ರಕ್ಷಣೆ
Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್ ಬುಲ್ ಶ್ವಾನದ ಕಿತ್ತ ಕಿವಿ ಜೋಡಣೆ
Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Chikkamagaluru: ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.