Police: ಕೊನೆಗೂ ಅಂಕಪಟ್ಟಿ ನಕಲಿ ಸಾಬೀತು!

ನೌಕರನಿಗೆ ನೀಡಿದ್ದ ಭಡ್ತಿ ಹಿಂಪಡೆದು ವರ್ಗಾಯಿಸಿದ ಸಹಕಾರ ಇಲಾಖೆ

Team Udayavani, Oct 21, 2023, 12:05 AM IST

LAW

ದಾವಣಗೆರೆ: ಭಡ್ತಿಗಾಗಿ ಸಹಕಾರಿ ಇಲಾಖೆ ನೌಕರನೊಬ್ಬ ಹೊರ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಹೆಸರಲ್ಲಿ ನೀಡಿದ ಅಂಕಪಟ್ಟಿ ನಕಲಿ ಎಂಬುದು ಸಾಬೀತಾಗಿದ್ದು, ನೌಕರನಿಗೆ ನೀಡಿದ ಭಡ್ತಿ ಆದೇಶವನ್ನು ಹಿಂಪಡೆದು, ಬೇರೆಡೆ ವರ್ಗಾಯಿಸಲಾಗಿದೆ. ಜತೆಗೆ ಕಾನೂನು ಕ್ರಮದತ್ತ ಇಲಾಖೆ ಹೆಜ್ಜೆ ಇರಿಸಿದೆ.

ಸಾರ್ವಜನಿಕ ದೂರು ಆಧರಿಸಿ ಅಂಕಪಟ್ಟಿಯ ಅಸಲಿತನ ಅರಿಯಲು ಮುಂದಾಗಿದ್ದ ಸಹಕಾರ ಇಲಾಖೆ, ಈ ವಿಚಾರವಾಗಿ ಹಲವು ತಿಂಗಳುಗಳಿಂದ ಬೆಂಬಿಡದೆ ಅನೇಕ ಬಾರಿ, ವಿವಿಧ ರೀತಿಯ ವಿಚಾರಣೆ ನಡೆಸಿ, ಇಲಾಖೆಗೆ ಸಲ್ಲಿಕೆಯಾಗಿರುವ ಅಂಕಪಟ್ಟಿ ನಕಲಿ ಎಂಬುದನ್ನು ದೃಢಪಡಿಸಿಕೊಂಡಿದೆ. ಸದ್ಯಕ್ಕೆ ನೌಕರನಿಗೆ ಹಿಂಭಡ್ತಿ ನೀಡಿ ಮುಂದಿನ ಕಠಿನ ಕಾನೂನು ಕ್ರಮಕ್ಕೆ ಮುಂದಾಗುವ ಜತೆಗೆ ಪದವೀಧರನಲ್ಲದ ಆತನ ಅವಧಿಯಲ್ಲಾದ ಎಲ್ಲ ಆಡಿಟ್‌ಗಳನ್ನು ಮರು ಲೆಕ್ಕಪರಿಶೋಧನೆಗೆ ಒಳಪಡಿಸುವ ಸಾಧ್ಯತೆಯೂ ಇದೆ.

ಸ್ಥಳೀಯವಾಗಿರುವ ವಿಶ್ವವಿದ್ಯಾನಿಲಯದ ಹೆಸರಲ್ಲಿ ನಕಲಿ ಅಂಕಪಟ್ಟಿ ನೀಡಿದರೆ ನೇರ ಪರಿಶೀಲನೆ ವೇಳೆ ಸಿಕ್ಕಿ ಬೀಳುವ ಆತಂಕದಿಂದ ನಕಲಿ ಅಂಕಪಟ್ಟಿ ತಯಾರಕರ ತಂಡಗಳು, ಹೊರ ರಾಜ್ಯದ ವಿಶ್ವವಿದ್ಯಾನಿಲಯದ ಹೆಸರಿನ ಅಂಕಪಟ್ಟಿ ನೀಡುವುದೇ ತಮಗೆ ಸುರಕ್ಷಿತ ಎಂದು ಭಾವಿಸಿದ್ದವು. ಆದರೆ ಈ ಮಾರ್ಗವೂ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಈ ಪ್ರಕರಣ ರವಾನಿಸಿದ್ದು ನಕಲಿ ಅಂಕಪಟ್ಟಿ ಜಾಲಕ್ಕೂ ನಡುಕ ಹುಟ್ಟಿಸಿದೆ.

ಏನಿದು ಪ್ರಕರಣ?
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಸಹಕಾರ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿರುವ ಪ್ರಥಮ ದರ್ಜೆ ಸಹಾಯಕನೋರ್ವ ತಾನು ಉತ್ತರ ಪ್ರದೇಶ ರಾಜ್ಯ ಮೀರತ್‌ನ ಪ್ರತಿಷ್ಠಿತ ಚೌಧರಿ ಚರಣ್‌ಸಿಂಗ್‌ ವಿವಿಯೊಂದರಲ್ಲಿ ಬಿಕಾಂ ಪದವಿ ಪಡೆದಿರುವುದಾಗಿ ಅಂಕಪಟ್ಟಿ ಸಲ್ಲಿಸಿದ್ದ. ಅಂಕಪಟ್ಟಿ ಆಧಾರದ ಮೇಲೆ ಇಲಾಖೆ ಆತನನ್ನು ಪದವೀಧರ ಎಂದು ಗುರುತಿಸಿ, ಇಲಾಖೆ ಆತನ ನೇಮಕಾತಿ ವೃಂದ ಬದಲಾವಣೆ ಮಾಡಿ ಭಡ್ತಿ ನೀಡಿತ್ತು. ಅಂದರೆ ಪ್ರಥಮ ದರ್ಜೆ ಸಹಾಯಕ ವೃಂದದಿಂದ ಲೆಕ್ಕಪರಿ ಶೋಧಕ ವೃಂದಕ್ಕೆ ಬದಲಾಯಿಸಿ ಆದೇಶ ಹೊರಡಿಸಿತ್ತು.

ಅಂಕಪಟ್ಟಿಯ ಅಸಲಿಯತ್ತನ್ನು ಹೊರ ರಾಜ್ಯದ ವಿವಿಗೆ ಪತ್ರ ಬರೆದು ಪರೀಕ್ಷಿಸಿ ಖಚಿತಪಡಿಸಿಕೊಳ್ಳಲಾಗಿತ್ತು. ಆದರೆ ಕೆಲವು ತಿಂಗಳ ಬಳಿಕ ಇದೇ ನೌಕರನ ವಿರುದ್ಧ ನಕಲಿ ಅಂಕಪಟ್ಟಿ ಸಲ್ಲಿಕೆಯಾಗಿದೆ ಎಂಬ ಸಾರ್ವಜನಿಕ ದೂರು ಬಂದಾಗ ಇಲಾಖೆ ಮತ್ತೂಮ್ಮೆ ಪರಿಶೀಲನೆಗೆ ಮುಂದಾಯಿತು. ಅಂಕಪಟ್ಟಿಯ ಅಸಲಿತನ ಪರಿಶೀಲನೆಗಾಗಿ ಹೊರ ರಾಜ್ಯದ ವಿವಿಗೆ ಪತ್ರ ಬರೆಯಲಾಯಿತು. ಆಗ ಅಲ್ಲಿಂದ ಈ ಕ್ರಮಾಂಕದ ವಿದ್ಯಾರ್ಥಿಯ ಮಾಹಿತಿ ನಮ್ಮಲ್ಲಿ ಇಲ್ಲ ಎಂಬ ಉತ್ತರ ಬಂದಿತು. ಒಂದೇ ವಿವಿಯಿಂದ ಎರಡು ಬಾರಿ ವಿಭಿನ್ನ ಉತ್ತರ ಬಂದಿತ್ತು.

ಉನ್ನತ ತನಿಖೆ ಸಾಧ್ಯತೆ
ಸಹಕಾರ ಇಲಾಖೆಯಲ್ಲಿ ಬೆಳಕಿಗೆ ಬಂದ ನಕಲಿ ಅಂಕಪಟ್ಟಿ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆದು, ಈ ಪ್ರಕರಣದ ಮೂಲಕವೇ ಪೊಲೀಸರು ನಕಲಿ ಅಂಕಪಟ್ಟಿ ಜಾಲವನ್ನು ಜಾಲಾಡುವ ಸಾಧ್ಯತೆ ಇದೆ.

 ಎಚ್‌.ಕೆ. ನಟರಾಜ

 

ಟಾಪ್ ನ್ಯೂಸ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.