International level ಕ್ರೀಡಾ ಪಟುವಿಗೆ ಶಾಸಕರಿಂದ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ
ಮತ್ತೊಂದು ಮಾನವೀಯ ಸೇವೆಗೆ ಸಾಕ್ಷಿಯಾದ ಕುಣಿಗಲ್ ಶಾಸಕ ಡಾ.ರಂಗನಾಥ್
Team Udayavani, Oct 21, 2023, 8:54 PM IST
ಕುಣಿಗಲ್ : ಮಂಡಿ ನೋವಿನಂದ ಬಳಲುತ್ತಿದ್ದ ಅಂತಾರಾಷ್ಟ್ರೀಯ ರಗ್ಬಿ (ಅಮೆರಿಕನ್ ಫುಟ್ಬಾಲ್) ಕ್ರೀಡಾ ಪಟುವಿಗೆ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರು ತಮ್ಮ ಸಹೋದ್ಯೋಗಿ ವೈದ್ಯರೊಂದಿಗೆ ಸೇರಿ ಮಂಡಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನೆರವಾಗಿದ್ದಾರೆ.
ವೈದ್ಯ ವೃತ್ತಿಯಿಂದ ರಾಜಕಾರಣಕ್ಕೆ ಬಂದಿರುವ ಶಾಸಕ ಡಾ.ಹೆಚ್.ಡಿ.ರಂಗನಾಥ್ ವೃತ್ತಿ ಪ್ರಾಮುಖ್ಯತೆಯನ್ನು ಮರೆಯದೇ ನಿರಂತರವಾಗಿ ಸಮಸ್ಯೆಗೆ ಗುರಿಯಾದವರಿಗೆ ಸ್ವಯಂ ನೆರವಾಗುತ್ತಿದ್ದಾರೆ.
ಮೂಲತಃ ತಾಲೂಕಿನ ಹುತ್ರಿದುರ್ಗ ಯಲಿಯೂರು ಗ್ರಾಮದ ಹಾಲಿ ಬೆಂಗಳೂರಿನ ಟೆಂಪೋ ಚಾಲಕ ರಂಗಸ್ವಾಮಿ ಅವರ ಪುತ್ರಿ ಆರ್.ಭವ್ಯ (19) ರಗ್ಬಿ ಕ್ರೀಡಾ ಪಟ್ಟು ಆಗಿದ್ದು, ಕಳೆದ ಆರು ತಿಂಗಳ ಹಿಂದೆ ಕ್ರೀಡೆ ಆಟ ಆಡುವ ವೇಳೆ ಬಿದ್ದು ಬಲ ಭಾಗದ ಮಂಡಿ ನೋವು ಮಾಡಿಕೊಂಡಿದ್ದರು, ಈಗ ಮಂಡಿ ನೋವು ತೀವ್ರಗೊಂಡು ನೋವಿನಂದ ಬಳಲುತ್ತಿದ್ದರು, ಭವ್ಯ ಅವರಿಗೆ ಬೆಂಗಳೂರಿನ ಸಂಜಯ್ಗಾಂಧಿ ಆಸ್ಪತ್ರೆಯಲ್ಲಿ ಶನಿವಾರ ಡಾ,ಹೆಚ್.ಡಿ.ರಂಗನಾಥ್, ಡಾ.ಮದನ್ಬಲ್ಲಾಳ್, ಡಾ.ಸಚಿನ್ಗೌಡ, ಡಾ.ಶಿವರಾಜ್ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಆರ್.ಭವ್ಯ ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಸೈಕಾಲಜಿ ಕಲಿಯುತ್ತಿದ್ದು, ರಗ್ಬಿ ತರಬೇತಿ ಪಡೆದು ಉತ್ತಮ ಕ್ರೀಡಾ ಪಟುವಾಗಿ ಚೆನ್ನೈ, ಮಹಾರಾಷ್ಟ್ರ, ಪಂಜಾಬ್, ಒಡಿಶಾ, ಮೊದಲಾದೆಡೆ ಆಟವಾಡಿ ಕಾಲೇಜಿಗೆ ಹಾಗೂ ಕುಣಿಗಲ್ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಚೆನ್ನೈನಲ್ಲಿ ಕಳೆದ ಆರು ತಿಂಗಳ ಹಿಂದೆ ಆಟವಾಡುತ್ತಿರ ಬೇಕಾದರೆ ಕಾಲು ಜಾರಿ ಬಿದ್ದು ಮಂಡಿಗೆ ನೋವಾಗಿತ್ತು, ಸ್ವಲ್ಪ ದಿನದ ನಂತರ ಮತ್ತೆ ಆಟ ಅಭ್ಯಾಸ ಪ್ರಾರಂಭಿಸಿದ್ದರು. ಆದರೆ ಆಟವಾಡುವ ವೇಳೆ ಮಂಡಿ ನೋವು ಮತ್ತೆ ಕಾಣಿಸಿಕೊಂಡಿದೆ.
ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಇದೇ ತಿಂಗಳು 25 ರಂದು ಮಲೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರಗ್ಬಿ ಗೆ ಭವ್ಯ ಆಯ್ಕೆಯಾಗಿದ್ದರು ಈ ಹಿನ್ನಲೆಯಲ್ಲಿ ಆರೋಗ್ಯ ತಪಾಸಣೆಗೆಂದು ಹೋಗಿದ್ದಾಗ, ಓಡಲು ಸಾಧ್ಯವಾಗಲಿಲ್ಲ, ಕಾಲು ನೋವು ತೀವ್ರವಾಗಿತ್ತು, ವೈದ್ಯರು ಎಂಆರ್ಐ ಸ್ಕ್ಯಾನ್ ಮಾಡಿಸುವಂತೆ ಭವ್ಯಗೆ ತಿಳಿಸಿದ್ದರು. ಎಂ.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಮಂಡಿ ಮೂಳೆಗೆ ಬಲವಾದ ಪೆಟು ಬಿದ್ದಿರುವುದು ತಿಳಿಯಿತು.
ಶಾಸಕ ಡಾ.ಹೆಚ್.ರಂಗನಾಥ್ ಬೋರಿಂಗ್ ಆಸ್ಪತ್ರೆಯಲ್ಲಿ ಬೇರೋಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವಿಚಾರ ತಿಳಿದ ಭವ್ಯ, ಆಸ್ಪತ್ರೆಗೆ ಹೋಗಿ ಶಾಸಕರಿಗೆ ರಿಪೋರ್ಟ್ ತೋರಿಸಿದರು, ರಿಪೋರ್ಟ್ ಪರಿಶೀಲಿಸಿ ಅ. 21 ರಂದು ಸಂಜಯ್ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬನ್ನಿ ಎಂದು ಸೂಚಿಸಿದರು. ಅದರಂತೆ ಭವ್ಯ ಇಂದು ಆಸ್ಪತ್ರೆಗೆ ದಾಖಲಾದರು. ಶಾಸಕರು ಅವರ ಸಹೋದ್ಯೋಗಿ ವೈದ್ಯರ ಜತೆ ಸೇರಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
ಸದಾ ಬಡವರ ಪರವಾಗಿ ಕೆಲಸ ಮಾಡುತ್ತಿರುವ, ಶಾಸಕ ಡಾ.ಹೆಚ್.ಡಿ.ರಂಗನಾಥ್ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆರೆ ಪಾತ್ರರಾಗಿದ್ದಾರೆ, ಶಾಸಕರಾದ ಮೇಲೆ ವೈದ್ಯ ವೃತ್ತಿಯನ್ನು ಬಿಡದೇ ಸ್ವಂತ ಖರ್ಚಿನಲ್ಲಿ ಈವರೆಗೂ ನಾಲ್ಕು ಜನರಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅವರ ಕುಟುಂಬಕ್ಕೆ ಆಗುತ್ತಿದ್ದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಅವರಿಗೆ ನೆರವಾಗಿದ್ದಾರೆ.
“ನನ್ನ ಮಂಡಿ ನೋವಿಗೆ ಸ್ಪಂಧಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ಡಾ.ರಂಗನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ತುಂಬಾ ಒಳ್ಳೆಯವರು. ಬೇಗ ಮಂಡಿ ವಾಸಿ ಮಾಡಿಕೊಂಡು ಮುಂದಿನ ದಿನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಗ್ಬಿ ಆಡುತ್ತೇನೆ” ಎಂದು ಶಸ್ತ್ರಚಿಕಿತ್ಸೆ ಒಳಗಾದ ಕ್ರೀಡಾಪಟು ಆರ್.ಭವ್ಯ ಹೇಳಿದ್ದಾರೆ.
“ಓರ್ವ ಅಂತಾರಾಷ್ಟ್ರೀಯ ಕ್ರೀಡಾ ಪಟುವಿಗೆ ನೆರವಾದ ಸಂತಸ ಒಂದು ಕಡೆ, ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನನ್ನ ವೈದ್ಯ ವೃತ್ತಿಯಿಂದ ಇಂತಹ ನೂರಾರು ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಶಸ್ತ್ರಚಿಕಿತ್ಸೆಗೆ ಸಹಕರಿಸಿ, ನನ್ನ ವೈದ್ಯ ಸಹೋದ್ಯೋಗಿಗಳಿಗೆ ನನ್ನ ಕೃತಜ್ಞನೆಗಳು” ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.