![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 26, 2023, 12:00 AM IST
ತಿರುವನಂತಪುರ: ಚಂದ್ರಯಾನ-3 ಹಾಗೂ ಆದಿತ್ಯ-ಎಲ್1 ಯಶಸ್ಸಿನ ನಂತರ ಇದೀಗ ಯುವಕರಿಗೆ ಸ್ಫೂರ್ತಿ ತುಂಬಲು ಆತ್ಮಚರಿತ್ರೆಯನ್ನು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ರಚಿಸಿದ್ದಾರೆ.
ಮಲಯಾಳಂನಲ್ಲಿ “ನಿಲುವು ಕುಡಿಚ್ಚ ಸಿಂಹಗಳ್”(ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಹೆಸರಿನಲ್ಲಿ ಸೋಮನಾಥ್ ಅವರ ಆತ್ಮಚರಿತ್ರೆಯನ್ನು ಕೇರಳ ಮೂಲದ ಲಿಬಿ ಪಬ್ಲಿಕೇಶನ್ಸ್ ಹೊರತರುತ್ತಿದ್ದು, ನವೆಂಬರ್ನಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ವೆಚ್ಚ ತಗ್ಗಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ದುಡ್ಡು ಉಳಿಸಲು ಸಾರಿಗೆ ಬಸ್ ಬದಲು ಹಳೆಯ ಸೈಕಲ್ನಲ್ಲಿ ಸಂಚಾರ.. ಹೀಗೆ ಅನೇಕ ಸಂಗತಿಗಳು ಸೋಮನಾಥ್ ಅವರ ಆತ್ಮಚರಿತ್ರೆಯಲ್ಲಿ ಅಡಕವಾಗಿದೆ.
“ಇದು ನಿಜವಾಗಿಯೂ ಎಂಜಿನಿಯ ರಿಂಗ್ ಅಥವಾ ಬಿಎಸ್ಸಿ ಸೇರಬೇಕೇ ಎಂದು ತಿಳಿಯದ ಹಳ್ಳಿಯ ಸಾಮಾನ್ಯ ಯುವಕನ ಕಥೆಯಾಗಿದೆ. ಆತನ ಉಭಯ ಸಂಕಟ, ನಂತರ ಜೀವನದಲ್ಲಿ ಮಾಡಿದ ಸರಿಯಾದ ನಿರ್ಧಾರ ಗಳು ಹಾಗೂ ಭಾರತದಂತಹ ದೇಶದಲ್ಲಿ ಅವನಿಗೆ ದೊರೆತ ಅವಕಾಶಗಳ ಕುರಿತಾಗಿದೆ’ ಎಂದು ಸೋಮನಾಥ್ ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.
“ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಜನರಿಗೆ ತಿಳಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಜೀವನದಲ್ಲಿ ಹಲವು ಸಮಸ್ಯೆಗಳ ನಡುವೆಯೂ ಕನಸುಗಳನ್ನು ಬೆನ್ನತ್ತಲು ಯುವಕರಿಗೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ’ ಎಂದು ಸೋಮನಾಥ್ ಹೇಳಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.