Daily Horoscope: ಬಹಳ ದಿನಗಳ ಪ್ರಾರ್ಥನೆ ಫಲಿಸಿದ ಸಮಾಧಾನ, ಪ್ರತಿಭೆಗೆ ಮರ್ಯಾದೆ ಸಿಗಲಾರದು
Team Udayavani, Oct 26, 2023, 7:13 AM IST
ಮೇಷ: ಮಿಶ್ರ ಫಲಗಳನ್ನು ಕಾಣುವಿರಿ. ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ತೃಪ್ತಿ.ಪ್ರತಿಭೆಗೆ ಮರ್ಯಾದೆ ಸಿಗಲಾರದು.ಸ್ವಂತ ಉದ್ಯಮ ತೃಪ್ತಿಕರ. ಉತ್ಪಾದನೆಯ ಪ್ರಮಾಣ ಶ್ರಮಕ್ಕೆ ಹೋಲಿಸಿದಾಗ ಸಾಲದು. ನೂತನ ಗೃಹ ಖರೀದಿಗೆ ಮಾತುಕತೆ.
ವೃಷಭ: ಒಂದೇ ಕ್ಷೇತ್ರದಲ್ಲಿ ಕೇಂದ್ರೀಕರಿಸಿ ಮುಂದುವರಿದರೆ ಯಶಸ್ವಿಯಾಗುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಆದಾಯ. ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ವಾತಾವರಣ. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.
ಮಿಥುನ: ಅನವಶ್ಯ ಆತಂಕ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ಪ್ರತಿಸ್ಪರ್ಧಿಗಳಿಂದ ವಾಮಮಾರ್ಗದಲ್ಲಿ ಚಲನೆ. ಸ್ವಂತ ಉದ್ಯಮದಲ್ಲಿ ಪೈಪೋಟಿಯಿದ್ದರೂ ಉತ್ಪನ್ನಗಳ ಗುಣಮಟ್ಟವು ವಿಜಯದ ಸಾಧನವಾಗುವುದು. ಸತ್ಸಂಗದಲ್ಲಿ ಆಸಕ್ತಿ.
ಕರ್ಕಾಟಕ: ಬಹಳ ದಿನಗಳ ಪ್ರಾರ್ಥನೆ ಫಲಿಸಿದ ಸಮಾಧಾನ. ಆತ್ಮೀಯ ಬಂಧುಗಳ ಆಗಮನ.ಉದ್ಯೋಗ ಸ್ಥಾನದಲ್ಲಿ ಹರ್ಷದ ವಾತಾವರಣ. ಸಹೋದ್ಯೋಗಿಗಳ ನಡುವೆ ಸೌಹಾರ್ದ. ಸ್ವಂತ ಉದ್ಯಮದಲ್ಲಿದ್ದ ನೌಕರರ ಸಮಸ್ಯೆ ಪರಿಹಾರ.
ಸಿಂಹ: ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮದ ಕಾರ್ಯಕ್ಷೇತ್ರ ವಿಸ್ತರಣೆ.ಹೊಸ ನೌಕರರ ಸೇರ್ಪಡೆ. ಕಾರ್ಯಸ್ಥಾನದಲ್ಲಿ ಸೌಹಾರ್ದದ ವಾತಾವರಣ. ಉತ್ಪನ್ನಗಳ ಪ್ರಮಾಣ, ಗುಣಮಟ್ಟ ಶೀಘ್ರ ವೃದ್ಧಿ.
ಕನ್ಯಾ: ಸಂಚಿತ ಸತ್ಕರ್ಮಗಳ ಫಲ ಅನುಭವಕ್ಕೆ ಲಭ್ಯ. ಪೂರ್ಣ ದೈವಾನುಗ್ರಹದ ಆನಂದ. ಉದ್ಯೋಗದಲ್ಲಿ ಪದೋನ್ನತಿ.ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಆನಂದಾನುಭವ. ಉದ್ಯಮಿಗಳಿಗೆ ಯಶಸ್ಸಿನ ಮೇಲೆ ಯಶಸ್ಸು.
ತುಲಾ: ದೀರ್ಘ ಪ್ರಯಾಣದ ಆಯಾಸ. ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಕೊಡುವ ಆತಂಕ. ಸಣ್ಣ ಅನಾರೋಗ್ಯವಾದರೂ ಶೀಘ್ರ ಚೇತರಿಕೆ. ಉದ್ಯಮಿಗಳಿಗೆ ನೌಕರರ ಸಮಸ್ಯೆ.ಕಟ್ಟಡ ನಿರ್ಮಾಣ ಗುತ್ತಿಗೆದಾರೆರಿಗೆ ಸಾಮಗ್ರಿಗಳು ಸಕಾಲದಲ್ಲಿ ಸಿಗದೆ ತೊಂದರೆ.
ವೃಶ್ಚಿಕ: ಹಿರಿಯರ ಆರೋಗ್ಯ ಅಭೂತಪೂರ್ವ ಸುಧಾರಣೆ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಉದ್ಯೋಗ ಕ್ಷೇತ್ರದಲ್ಲಿ ನಿರಾತಂಕ ಪರಿಸ್ಥಿತಿ. ಮೇಲಧಿಕಾರಿಗಳ, ಸಹೋದ್ಯೋಗಿಗಳ ಪ್ರೋತ್ಸಾಹ.ಕೃಷಿಕರಿಗೆ ಅನುಕೂಲದ ವಾತಾವರಣ.
ಧನು: ಸಂಕಷ್ಟಗಳಿಂದ ನಿಧಾನವಾಗಿ ಬಿಡುಗಡೆ. ಮನೆಯಲ್ಲಿ ದೇವತಾರಾಧನೆ ಮಾಡುವ ಆಸಕ್ತಿ. ಹಳೆಯ ಸಹೋದ್ಯೋಗಿಯ ಭೇಟಿಯಿಂದ ಪ್ರಮುಖ ಸಮಸ್ಯೆಯೊಂದರ ನಿವಾರಣೋಪಾಯ ಲಭ್ಯ. ಉದ್ಯಮಿಗಳಿಗೆ ಮಧ್ಯಮ ಮಟ್ಟದ ಲಾಭ.
ಮಕರ: ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ದೈವ ಸಹಾಯ. ಆಪ್ತರಿಂದ ಸಕಾಲಿಕ ನೆರವು. ಉದ್ಯೋಗ ಸ್ಥಾನದಲ್ಲಿ ಅನುಕೂಲಕರ ವಾತಾವರಣ. ಅಭಿವೃದ್ಧಿ ಯೋಜನೆಗಳಿಗೆ ಹಿರಿಯರ ಬೆಂಬಲ. ಮಕ್ಕಳ ಭವಿಷ್ಯ ರೂಪಿಸಲು ಚಿಂತನೆ.
ಕುಂಭ: ತರಾತುರಿಯ ದಿನಚರಿ. ಉದ್ಯೋಗದಲ್ಲಿ ನಿಗದಿತ ಪ್ರಮಾಣದ ಕೆಲಸ ಮುಗಿಸುವ ಆತಂಕ.ಅಧ್ಯಾಪಕರಿಗೆ ಅಧಿಕ ಶ್ರಮದ ಜವಾಬ್ದಾರಿಗಳು. ಸ್ವಂತ ಉದ್ಯಮದಲ್ಲಿ ನೌಕರರ ಕೊರತೆ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಪೂರೈಸಲು ಸಮಸ್ಯೆ.
ಮೀನ: ಶನಿಮಹಾತ್ಮನ ಕೃಪೆಯಿಂದ ದೊಡ್ಡ ನಷ್ಟ ಬರಲಾರದು. ಉದ್ಯೋಗ ಸ್ಥಾನದಲ್ಲಿ ನಿರಾತಂಕದ ಪರಿಸ್ಥಿತಿ. ಸರಕಾರಿ ನೌಕರರಿಗೆ ಅನುಕೂಲ. ಸೇವಾರೂಪದ ಉದ್ಯೋಗಗಳನ್ನು ಮಾಡುವವರಿಗೆ ಕಾರ್ಯಗಳು ನಿರ್ವಿಘ್ನವಾಗಿ ನಡೆದು ಸಮಾಧಾನ ಸಮಾಜದಲ್ಲಿ ಗೌರವ ವೃದ್ಧಿ. ಹತ್ತಿರದ ದೇವ ಮಂದಿರ ದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೇಳಿದವರಿಗೆ ಮಾತ್ರ ಸಲಹೆ ನೀಡಿ, ಅನವಶ್ಯವಾದ ವಿವಾದಕ್ಕೆ ಅವಕಾಶ ಬೇಡ
Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ
Daily Horoscope: ಕರ್ಮದ ಫಲವನ್ನು ಸಂತೋಷದಿಂದ ಸ್ವೀಕರಿಸಿ
Horoscope: ಪರ್ವಕಾಲದಲ್ಲಿ ಹೊಸ ಯೋಜನೆಗಳು, ತಾತ್ಕಾಲಿಕ ನೌಕರರ ಕೆಲಸ ಖಾಯಂ
Daily Horoscope ಚಾರಿತ್ರ್ಯ ವಂತರ ಹೆಸರು ಕೆಡಿಸಲು ಸಂಚು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.