Alphonse Puthren: ಸಿನಿಮಾರಂಗ ಬಿಡುವ ಬಗ್ಗೆ ʼಪ್ರೇಮಂʼ ನಿರ್ದೇಶಕ ಪೋಸ್ಟ್; ಕಾರಣವೇನು?

ನಾನು ಬೇರೆಯವರಿಗೆ ಹೊರೆಯಾಗಲು ಬಯಸುವುದಿಲ್ಲ..

Team Udayavani, Oct 30, 2023, 1:44 PM IST

Alphonse Puthren: ಸಿನಿಮಾರಂಗ ಬಿಡುವ ಬಗ್ಗೆ ʼಪ್ರೇಮಂʼ ನಿರ್ದೇಶಕ ಪೋಸ್ಟ್; ಕಾರಣವೇನು?

ಕೊಚ್ಚಿ: ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರನ್ ಸಿನಿಮಾರಂಗದ ದೂರ ಉಳಿವುದಾಗಿ ಮಾಡಿದ ಪೋಸ್ಟ್‌ ವೊಂದು ವೈರಲ್‌ ಆದ ಬೆನ್ನಲ್ಲೇ ಮಾಲಿವುಡ್‌ ಸಿನಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಅಲ್ಫೋನ್ಸ್ ಪುತ್ರನ್ ಮಲಯಾಳಂನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಮಾಲಿವುಡ್‌ ನಲ್ಲಿ ಲವ್‌ ಸ್ಟೋರಿಯನ್ನು ಭಿನ್ನವಾಗಿ ಹೇಳಿದ ನಿರ್ದೇಶಕರಲ್ಲಿ ಇವರು ಒಬ್ಬರು. ‘ಪ್ರೇಮಂ’ ಮತ್ತು ‘ನೇರಂ’ ಸಿನಿಮಾಗಳ ಮೂಲಕ ಹೊಸ ಸಂಚಲವನ್ನೇ ಸೃಷ್ಟಿಸಿದ ಅಲ್ಫೋನ್ಸ್ ಪುತ್ರನ್ ಸೋಮವಾರ(ಅ.30 ರಂದು) ಇನ್ಸ್ಟಾಗ್ರಾಮ್‌ ಪೋಸ್ಟ್‌ ವೊಂದನ್ನು ಹಾಕಿ ಸಿನಿಮಾರಂಗದಿಂದ ದೂರ ಉಳಿವುದಾಗಿ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಅವರ ಈ ನಿರ್ಧಾರ ಅನೇಕ ಕಲಾವಿದರಿಗೂ ಶಾಕ್‌ ನೀಡಿದೆ.

ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಕೆಲವೇ ನಿಮಿಷದಲ್ಲಿ ಅಲ್ಫೋನ್ಸ್ ಪುತ್ರನ್ ಅವರು ಅದನ್ನು ಡಿಲೀಟ್‌ ಮಾಡಿದ್ದಾರೆ.

ಪೋಸ್ಟ್‌ ನಲ್ಲಿ ಏನಿತ್ತು?:

“ನಾನು ನನ್ನ ಸಿನಿಮಾ ಥಿಯೇಟರ್ ವೃತ್ತಿಜೀವನವನ್ನು ನಿಲ್ಲಿಸುತ್ತಿದ್ದೇನೆ. ನನಗೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಇದೆ ಎಂದು ನಾನೇ ಕಂಡುಕೊಂಡಿದ್ದೇನೆ. ನಾನು ಬೇರೆಯವರಿಗೆ ಹೊರೆಯಾಗಲು ಬಯಸುವುದಿಲ್ಲ. ನಾನು ಹಾಡುಗಳು , ವೀಡಿಯೊಗಳು ಮತ್ತು ಕಿರುಚಿತ್ರಗಳನ್ನು ಮಾಡುವುದನ್ನು ಮುಂದುವರಿಸುತ್ತೇನೆ. ಓಟಿಟಿಯಲ್ಲೇ ಗರಿಷ್ಠ ಪ್ರಾಜೆಕ್ಟ್‌ ಗಳನ್ನು ಮಾಡುತ್ತೇನೆ. ನನಗೆ ಸಿನಿಮಾ ಕ್ಷೇತ್ರ ಬಿಡಲು ಇಷ್ಟವಿಲ್ಲ. ಆದರೆ ನನಗೆ ಬೇರೆ ಯಾವ ಆಯ್ಕೆಯೂ ಇಲ್ಲ. ನಾನು ಉಳಿಸಿಕೊಳ್ಳಲು ಸಾಧ್ಯವಾಗದ ಭರವಸೆಗಳನ್ನು ನೀಡಲು ಬಯಸುವುದಿಲ್ಲ. ಆರೋಗ್ಯವು ದುರ್ಬಲವಾದಾಗ ಅಥವಾ ಊಹಿಸಲಾಗದ ಸ್ಥಿತಿಗೆ ಬಂದಾಗ ಜೀವನದಲ್ಲಿ ಹಲವು ಟ್ವಿಸ್ಟ್‌ ಗಳನ್ನು ತರುತ್ತದೆ” ಎಂದು ಬರೆದುಕೊಂಡಿದ್ದರು.

“ನಾನು ಆರೋಗ್ಯವಾಗಿಲ್ಲದಿದ್ದಕ್ಕಾಗಿ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ಇದಕ್ಕೆ ಕಾರಣ ಏನು ಎಂದು ನನಗೆ ತಿಳಿದಿಲ್ಲ. ನನಗೆ ಬಾಲ್ಯದಿಂದಲೂ ಈ ಸಮಸ್ಯೆ ಇತ್ತು. ಇದು ಆಟಿಸಂ ಎಂದು ಗೊತ್ತಾಯಿತು. ಹಾಗಾಗಿ ನನ್ನ ಸಿನಿಮಾಗಳು ವಿಳಂಬವಾಯಿತೆಂದು ನಾನು ಭಾವಿಸುತ್ತೇನೆ. ಆದರೆ ನಾನು ನಿಮ್ಮೆಲ್ಲರಿಗೂ ಮನರಂಜನೆ ನೀಡುವುದನ್ನು ನಿಲ್ಲಿಸುವುದಿಲ್ಲ.

ಸದ್ಯ ಪೋಸ್ಟ್‌ ನ್ನು ಅವರು ಡಿಲೀಟ್‌ ಮಾಡಿದ್ದು, ಅದರ ಸ್ಕ್ರೀನ್‌ ಶಾಟ್‌ ಎಲ್ಲೆಡೆ ವೈರಲ್‌ ಆಗಿದೆ.

ನಿವಿನ್ ಪೌಲಿ ಮತ್ತು ನಜ್ರಿಯಾ ಜೊತೆಗಿನ ‘ನೇರಂ’ ಚಿತ್ರದ ಮೂಲಕ ಅಲ್ಫೋನ್ಸ್ ಪುತ್ರನ್ ನಿರ್ದೇಶನಕ್ಕಿಳಿದರು. ಈ ಸಿನಿಮಾ ಮಲಯಾಳಂ ತಮಿಳಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತು. ಆದರೆ ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ‘ಪ್ರೇಮಂʼ ಸಿನಿಮಾ. ಈ ಸಿನಿಮಾ ಚೆನ್ನೈನಲ್ಲಿ 200 ದಿನ ಓಡಿತ್ತು. ʼಪ್ರೇಮಂʼ ಬಳಿಕ ಅವರು ‘ಅವಿಯಲ್’ ಸಿನಿಮಾವನ್ನು ಮಾಡಿದ್ದರು. ಆದಾದ ಬಳಿಕ ʼಗೋಲ್ಡ್‌ʼ ಸಿನಿಮಾವನ್ನು‌ ಮಾಡಿದ್ದರು.

ಫಾಹದ್‌ ಪಾಸಿಲ್‌ ಜೊತೆ ಸಿನಿಮಾ ಮಾಡುವುದಾಗಿ ಅವರು ಘೋಷಿಸಿದ್ದರು. ಆದರೆ ಅದು ಇದುವರೆಗೆ ಸಟ್ಟೇರಿಲ್ಲ. ಅಲ್ಫೋನ್ಸ್ ಸ್ಯಾಂಡಿ, ಕೋವೈ ಸರಳಾ ಮತ್ತು ಸಹನಾ ಅವರೊಂದಿಗೆ ಇತ್ತೀಚೆಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು.

 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.