ಅಮೆರಿಕ :‌ ಕನ್ನಡ ನುಡಿ -ಕನ್ನಡ ಸಂಭಾಷಣೆ ಶಿಬಿರ


Team Udayavani, Oct 31, 2023, 12:49 PM IST

ಅಮೆರಿಕ :‌ ಕನ್ನಡ ನುಡಿ -ಕನ್ನಡ ಸಂಭಾಷಣೆ ಶಿಬಿರ

ವಾಷಿಂಗ್ಟನ್:ಕನ್ನಡದ ಕಂಪನ್ನು ಸಾಗರದಾಚೆಯೂ ಹರಡುವ ಮಹತ್ತರವಾದ ಕಾರ್ಯವನ್ನು ಅಮೆರಿಕದ “ಕನ್ನಡನುಡಿ’ ತಂಡವು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ವಿಶ್ವದಾದ್ಯಂತ ಇರುವ ಕನ್ನಡಾಭಿಮಾನಿಗಳನ್ನ ಹಾಗೂ ಕನ್ನಡವನ್ನ ಕಲಿಯಲು ಬಯಸುವ ಕನ್ನಡ ಪ್ರೇಮಿಗಳನ್ನು ಒಂದು ಗೂಡಿಸಿ, ಕನ್ನಡ ಬಾಷೆಯನ್ನು ವರ್ಚುವಲ್‌ ಕ್ಲಾಸ್‌ ಮೂಲಕ ಅವರಿಗೆ ಕಲಿಸುತ್ತಾ ಇದೆ. ಸಹಜವಾದ ಸಂಭಾಷಣೆಯ ಮೂಲಕ ಕನ್ನಡದಲ್ಲಿ ಮಾತಾಡುವುದನ್ನು ಹೇಳಿ ಕೊಡಬೇಕೆನ್ನುವ ಮೂಲ ಉದ್ದೇಶದಿಂದ ಪ್ರಾರಂಭವಾದ ಈ ಕನ್ನಡನುಡಿ ಪದ್ದು ಮೆಲನಹಳ್ಳಿಯವರ ಕನಸಿನ ಕೂಸು.

ಇದೇ ಉದ್ದೇಶದಿಂದ ಈ ವರ್ಷದ ಜೂನ್‌ನಿಂದ ಹತ್ತು ವಾರಗಳ ಕಾಲ ಕನ್ನಡನುಡಿ ಶಿಬಿರವನ್ನು ನಡೆಸುತ್ತಾ ಬಂದಿದೆ. ಪ್ರತೀ ವಾರ ಸುಮಾರು ಒಂದೂವರೆ ಇಂದ ಎರಡು ಗಂಟೆಗಳ ಕಾಲ ನಡೆಯುತ್ತಿದ್ದ ಈ ತರಗತಿಗಳಲ್ಲಿ ಸರಳ ಪದಗಳಿಂದ ಸರಳವಾದ ವಾಕ್ಯ ರಚನೆ ಬಗ್ಗೆ ಹೇಳಿಕೊಡುವುದು ಮಾತ್ರವಲ್ಲದೆ ಬೇರೆ ಬೇರೆ ಕಲಿಕೆಯ ಹಂತದಲ್ಲಿರುವ ವಿದ್ಯಾರ್ಥಿಗಳನ್ನು ವರ್ಗೀಕರಿಸಿ ಅವರಿಗೆ ತಕ್ಕಂತೆ ಕಲಿಸುವುದು ಕೂಡ ಇದರ ವಿಶೇಷತೆವಾಗಿತ್ತು.

ಈ ಶಿಬಿರದ ಸಮಾರೋಪ ಸಮಾರಂಭ ಆ.19ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ್‌ ಹಾನಗಲ್‌ ಅವರು ಮತ್ತು ಕನ್ನಡ ಪ್ರಸಾರ ಪರಿಷತ್‌ನ ಕಾರ್ಯದರ್ಶಿ ಗಳಾದ ರಾಘವನ್‌ರವರು ವಹಿಸಿಕೊಂಡಿದ್ದರು.

ರಾಘವನ್‌ ಅವರು ಮಾತನಾಡಿ ದಿನನಿತ್ಯದ ಸಂಭಾಷಣೆಗೆ ಬೇಕಾಗುವ ಪದಗಳನ್ನು ಬಳಸಿ ಸರಳ ಹಾಗೂ ಸಹಜವಾದ ಮಾತುಗಳಲ್ಲಿ ಕನ್ನಡವನ್ನು ಕಲಿಸುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾ, ಭಾಷೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಪ್ರೀತಿಯಿಂದ ಕಲಿಸಿದಾಗ ಅದರ ಬಗ್ಗೆ ಹೆಚ್ಚಿನ ಒಲವು ಮೂಡಿ ಕಲಿಕೆಯ ಉತ್ಸಾಹ ಹೆಚ್ಚುತ್ತದೆ ಎಂದೂ ಹೇಳಿದರು.

ಕನ್ನಡನುಡಿಯ ಸಂಸ್ಥಾಪಕರಾದ ಪದ್ದು ಮೇಲನಹಳ್ಳಿಯವರು ಶಿಬಿರದ ರೂಪುರೇಷೆಗಳ ಆಯೋಜನೆಯೊಂದಿಗೆ ಸಮಾರೋಪ ಸಮಾರಂಭವನ್ನು ಶಿಬಿರದ ಶಿಕ್ಷಕವೃಂದದೊಂದಿಗೆ ಯಶಸ್ವಿಯಾಗಿ ನಡೆಸಿದರು.

ಶಿಬಿರದ ಶಿಕ್ಷಕಿಯರಾದ ಫ‌ಣಿಶ್ರೀ ನಾರಾಯಣನ್‌ ಅವರು ಶಿಬಿರದ ಉದ್ದೇಶವನ್ನು ತಿಳಿಸಿ, ಶಿಬಿರದ ಸದಸ್ಯರ, ಶಿಕ್ಷಕ ವೃಂದದ ಪರಿಚಯ ನೀಡಿ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ರಾವ್‌ ಹಾಗೂ ರಾಜಶ್ರೀ ಅವರು ಶಿಬಿರದಲ್ಲಿ ಮಕ್ಕಳಿಗೆ ಕಲಿಸಿದ ಸಂಭಾಷಣೆಯ ತುಣುಕನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಶಾರದಾ ಸ್ತುತಿಯನ್ನು ಹಾಡಿದರು. ಶಿಬಿರ ಬಗ್ಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರ ಅಭಿಪ್ರಾಯಗಳನ್ನು ಕೇಳುವ ಕಾರ್ಯಕ್ರಮವನ್ನು ಮಂಜುಳಾ ರಾವ್‌ ನಡೆಸಿಕೊಟ್ಟರು.

ಮಕ್ಕಳಾದ ವಿಭಾ ದೊದ್ದಿಪಲ್ಲೆ , ಪ್ರಣತಿ ಸುದರ್ಶನ್‌, ನಂದಿತಾ ನಾರಾಯಣನ್‌ ಮತ್ತು ನಿಖೀಲ್‌ ನಾರಾಯಣನ್‌ ತಾಂತ್ರಿಕ ಸಹಾಯದೊಂದಿಗೆ ಶಿಬಿರದಲ್ಲಿ ಕಲಿಸುತ್ತಿದ್ದ ಪದಗಳನ್ನು ಬಳಸಿ ಸಂಭಾಷಣೆ ಮಾಡಿದ ಆಡಿಯೋ ಕ್ಲಿಪ್‌ಗ್ಳನ್ನು ಶಿಬಿರಾರ್ಥಿಗಳ ಪ್ರಯೋಜನಕ್ಕಾಗಿ ಹಂಚಿದರು.

ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲ್ಪಟ್ಟ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರಿಗೆ ವಿತರಣೆ ಮಾಡಿದ ಪದ್ದು ಮೇಲನಹಳ್ಳಿ ಅವರು ಶಿಬಿರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭನಂದನೆಗಳನ್ನು ಸಲ್ಲಿಸಿ, ವಂದಿಸಿದರು. ವಿದ್ಯಾಧರ ಶರ್ಮ ನಿರ್ವಹಿಸಿದರು.

ವರದಿ: ಮಂಜುಳಾ ರಾವ್‌, ವಾಷಿಂಗ್ಟನ್‌

ಟಾಪ್ ನ್ಯೂಸ್

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

Electric

Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

BBK-11: ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಖ್ಯಾತ ನಟನ ಪುತ್ರ

police crime

Bidar; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Yadhu

Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

accident

Kundapura: ಬೈಕ್‌ಗಳ ಮುಖಾಮುಖೀ ಢಿಕ್ಕಿ ಒಬ್ಬ ಸಾವು, ಇಬ್ಬರು ಗಂಭೀರ

cow

Kundapura: ರಿಕ್ಷಾದಲ್ಲಿ ಬಂದು ಗೋ ಕಳ್ಳತನ

Untitled-1

Kundapura: ಹೈದರಾಬಾದ್‌ನಲ್ಲಿ ನಾಪತ್ತೆ; ಪ್ರಕರಣ ದಾಖಲು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

death

Udupi: ಸ್ಕೂಟರ್‌ ಮೇಲೆ ವಿದ್ಯುತ್‌ ತಂತಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.