DK ,Udupi ಗ್ರಾಮಾಡಳಿತ ಯಂತ್ರಗಳೇ ಸ್ತಬ್ಧಗೊಳ್ಳುವ ಆತಂಕ

ದ.ಕ., ಉಡುಪಿಯ 68 ಗ್ರಾ.ಪಂ.ಗಳಲ್ಲಿ ಪಿಡಿಒಗಳೇ ಇಲ್ಲ!

Team Udayavani, Nov 2, 2023, 6:33 AM IST

DK ,Udupi ಗ್ರಾಮಾಡಳಿತ ಯಂತ್ರಗಳೇ ಸ್ತಬ್ಧಗೊಳ್ಳುವ ಆತಂಕ

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 68 ಗ್ರಾಮ ಪಂಚಾಯತ್‌ಗಳಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರೇಡ್‌-1 ಹಾಗೂ ಗ್ರೇಡ್‌-2 ಕಾರ್ಯದರ್ಶಿ ಹುದ್ದೆಗಳೇ ಖಾಲಿ ಇದ್ದು ಗ್ರಾಮಾಡಳಿತ ಯಂತ್ರ ಸ್ತಬ್ಧವಾಗುವ ಆತಂಕ ಎದುರಾಗಿದೆ.

ಸರಕಾರದ ವಿವಿಧ ಯೋಜನೆಗಳು ಜನರನ್ನು ತಲುಪಲು ಇರುವ ನೇರ ಸಂಪರ್ಕ ಸೇತುವಾಗಿರುವ ಗ್ರಾ.ಪಂ.ಗಳಲ್ಲಿಯೇ ಮುಖ್ಯ ಹುದ್ದೆಗಳು ಖಾಲಿಯಿರುವುದರಿಂದ ಜನಸಾಮಾನ್ಯರಿಗೆ ತೊಡಕಾಗಿದೆ.

68 ಪಿಡಿಒ ಹುದ್ದೆ ಖಾಲಿ
ದ.ಕ. ಜಿಲ್ಲೆಯ 9 ತಾಲೂಕುಗಳ 51 ಗ್ರಾ.ಪಂ. ಹಾಗೂ ಉಡುಪಿ ಜಿಲ್ಲೆಯ 7 ತಾಲೂಕುಗಳ 17 ಗ್ರಾ.ಪಂ.ಗಳಲ್ಲಿ ಪಿಡಿಒಗಳಿಲ್ಲ. ಈಗಂತೂ ವರ್ಗಾವಣೆ ನಡೆಯುತ್ತಿರುವುದರಿಂದ ಮತ್ತಷ್ಟು ಗ್ರಾ.ಪಂ.ಗಳಲ್ಲಿ ಪಿಡಿಒಗಳು ಇಲ್ಲವೆನ್ನುವ ಸ್ಥಿತಿ ನಿರ್ಮಾಣವಾಗಿದೆ. ಖಾಲಿ ಇರುವ ಪಂಚಾಯತ್‌ಗಳಿಗೆ ಇನ್ನೊಂದು ಗ್ರಾ.ಪಂ.ನ ಪಿಡಿಒಗಳನ್ನು ಡೆಪ್ಯೂಟೇಷನಡಿ ನಿಯೋಜಿಸಲಾಗುತ್ತಿದೆ. ಕೆಲವು ಪಿಡಿಒಗಳಿಗೆ ಎರಡ ಕ್ಕಿಂತ ಹೆಚ್ಚಿನ ಗ್ರಾ.ಪಂ. ಹೊಣೆ ಇರುವುದರಿಂದ ಯಾವ ಪಂಚಾಯತ್‌ನಲ್ಲೂ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಅವರದ್ದಾಗಿದೆ.

ಗ್ರೇಡ್‌-1, 2 ಕಾರ್ಯದರ್ಶಿ
ಒಟ್ಟು 84 ಹುದ್ದೆ ಖಾಲಿ
ಪಿಡಿಒಗಳು ಇಲ್ಲದ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಕಾರ್ಯದರ್ಶಿಗಳ ಹುದ್ದೆ ಪ್ರಮುಖವಾಗಿರುತ್ತದೆ. ಆದರೆ ಆ ಹುದ್ದೆಗಳು ಕೂಡ ಖಾಲಿ ಇವೆ. ದ.ಕ. ಜಿಲ್ಲೆಯ 41 ಗ್ರೇಡ್‌-1 ಕಾರ್ಯದರ್ಶಿ ಹುದ್ದೆಗಳಲ್ಲಿ 22, ಗ್ರೇಡ್‌-2 ಕಾರ್ಯದರ್ಶಿ ಮಂಜೂರಾತಿ 126 ಹುದ್ದೆಗಳಲ್ಲಿ 34 ಹುದ್ದೆಗಳು ಖಾಲಿ ಇವೆ. ಉಡುಪಿಯಲ್ಲಿ 57 ಗ್ರೇಡ್‌-1 ಕಾರ್ಯದರ್ಶಿ ಹುದ್ದೆಗಳಲ್ಲಿ 1, ಗ್ರೇಡ್‌-2 ಕಾರ್ಯದರ್ಶಿ 98 ಹುದ್ದೆಗಳಲ್ಲಿ 27 ಹುದ್ದೆಗಳು ಖಾಲಿ ಇವೆ ಎಂದು ಉಭಯ ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರ್ಗಾವಣೆ ಹೊಣೆ
ರಾಜ್ಯ ಮಟ್ಟಕ್ಕೆ!
ಈ ಹಿಂದೆ ಗ್ರಾ.ಪಂ. ಪಿಡಿಒಗಳನ್ನು ಆಯಾ ಜಿಲ್ಲೆಯೊಳಗೆ ಅಂತರ್‌ ತಾಲೂಕು ವ್ಯಾಪ್ತಿಯಲ್ಲಿ ವರ್ಗಾಯಿಸುವ ಅಧಿಕಾರವನ್ನು ಜಿ.ಪಂ. ಸಿಇಒಗಳು ಹೊಂದಿದ್ದರು. ಅಂತರ್‌ ಜಿಲ್ಲೆಯ ವರ್ಗಾವಣೆಯಾಗಿದ್ದರೆ ಮಾತ್ರ ಅದು ಪಂಚಾಯತ್‌ ರಾಜ್‌ ಇಲಾಖೆಯ ಕಮಿಷನರ್‌ ವ್ಯಾಪ್ತಿಗೆ ಒಳಪಡುತ್ತಿತ್ತು. ಹಾಲಿ ಸರಕಾರವು ಎಲ್ಲ ಹಂತದ ವರ್ಗಾವಣೆಯ ಜವಾಬ್ದಾರಿಯನ್ನು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರಿಗೆ ವಹಿಸಿದೆ.

ಆಡಳಿತ ಸ್ತಬ್ಧದ ಆತಂಕ
ಗ್ರಾ.ಪಂ. ವ್ಯವಸ್ಥೆಯ ಪ್ರಧಾನ ಭಾಗವಾಗಿರುವ ಪಿಡಿಒ ಹುದ್ದೆಗಳೇ ಖಾಲಿ ಇರುವ ಕಾರಣ ವಸತಿ ಯೋಜನೆ, ನರೇಗಾ ಸೇರಿದಂತೆ ಪ್ರಮುಖ ಕೆಲಸಗಳ ನಿರ್ವಹಣೆಗೆ ಸಮಸ್ಯೆ ಉಂಟಾಗಿದೆ.

ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಪಿಡಿಒ ಹುದ್ದೆ ಖಾಲಿ ಇರುವುದು ನಿಜ. ಈಗ ಪಿಡಿಒಗಳ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಾತ್ಕಾಲಿಕ ನೆಲೆಯಲ್ಲಿ ಇನ್ನೊಂದು ಗ್ರಾ.ಪಂ.ನ ಪಿಡಿಒಗಳನ್ನು ಖಾಲಿ ಇರುವ ಪಂಚಾಯತ್‌ಗಳಿಗೆ ಡೆಪ್ಯೂಟೇಷನ್‌ನಡಿ ನಿಯೋಜಿಸಲಾಗಿದೆ. ಪಿಡಿಒ ಹುದ್ದೆ ಖಾಲಿ ಇರುವ ಗ್ರಾ.ಪಂ.ಗಳಿಗೆ ಸರಕಾರದ ಹಂತದಲ್ಲಿ ಪೂರ್ಣಕಾಲಿಕ ಪಿಡಿಒಗಳನ್ನು ನೇಮಿಸುವ ಪ್ರಕ್ರಿಯೆ
ನಡೆಯಲಿದೆ.
– ಡಾ| ಆನಂದ್‌ ಕೆ., ಸಿಇಒ, ಜಿ.ಪಂ. ದ.ಕ.

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.