Tourism: ಚಾರಣ ಪ್ರಿಯರ ಸ್ವರ್ಗ- ದೇವರಮನೆ ಬೆಟ್ಟ


Team Udayavani, Nov 4, 2023, 8:00 AM IST

6-uv-fusion

ಕಾಫಿನಾಡು ಚಿಕ್ಕಮಗಳೂರು ಹಚ್ಚ ಹಸಿರಿನ ಪರಿಸರಕ್ಕೆ ಹೆಸರುವಾಸಿಯಾಗಿದೆ. ಇದು ಪ್ರವಾಸಿಗರ ನೆಚ್ಚಿನ ತಾಣ ಎಂದರೆ ತಪ್ಪಿಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ನೀವೊಮ್ಮೆ ಚಿಕ್ಕಮಗಳೂರಿಗೆ ಭೇಟಿ ಕೊಡಬೇಕು.

ಚಾರಣ ಪ್ರಿಯರಿಗೆ ಇದೊಂದು ಸ್ವರ್ಗಕ್ಕೆ ಹೋದಂತ ಅನುಭವ ನೀಡುತ್ತದೆ. ಚಿಕ್ಕಮಗಳೂರಿನಲ್ಲಿ ಹಲವಾರು ಚಾರಣ ಸ್ಥಳಗಳಿವೆ. ಬಾಬಾ ಬುಡನ್‌ ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದೇವರಮನೆ ಬೆಟ್ಟ, ಎತ್ತಿನಬುಜ ಹೀಗೆ. ವಿವಿಧ ಗಿರಿ ಶಿಖರಗಳು ಈ ಪ್ರದೇಶದ ಸುತ್ತಮುತ್ತಲಿನಲ್ಲಿದೆ.

ನಾನೀಗ ಇಲ್ಲಿ ಹೇಳ ಹೊರಟಿರುವುದು ದೇವರಮನೆ ಬೆಟ್ಟದ ಕುರಿತು. ಇದು ನನ್ನ ನೆಚ್ಚಿನ ತಾಣಗಳಲ್ಲಿ ಒಂದು.

ಭೂಲೋಕದ ಸ್ವರ್ಗ ಈ ದೇವರಮನೆ ಬೆಟ್ಟ ಎನ್ನಲಾಗುತ್ತದೆ. ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಇದು ಒಂದು. ಸುಮಾರು 800 ವರ್ಷಗಳ ಇತಿಹಾಸವಿರುವ ಕಾಲಭೈರವೇಶ್ವರ ದೇವಾಲಯ ಇಲ್ಲಿದೆ. ದೇವರಮನೆ ಬೆಟ್ಟ ಸಮುದ್ರಮಟ್ಟದಿಂದ 2 ಸಾವಿರ ಅಡಿ ಎತ್ತರದಲ್ಲಿದೆ. ಚಿಕ್ಕಮಗಳೂರಿನ ಮೂಡಿಗೆರೆಯಿಂದ ಸುಮಾರು 25 ಕಿ. ಮೀ. ದೂರದಲ್ಲಿದೆ ಈ ಬೆಟ್ಟ.

ಚಿಕ್ಕಮಗಳೂರು ಜಿಲ್ಲೆಯ ದೇವರಮನೆ ಗ್ರಾಮದಲ್ಲಿರುವ ಈ ಬೆಟ್ಟಕ್ಕೆ ವರ್ಷದ ಯಾವ ಸಮಯದಲ್ಲೂ ಭೇಟಿ ನೀಡಬಹುದು. ಚಳಿಗಾಲದ ಸಮಯದಲ್ಲಿ ಭೇಟಿ ನೀಡಿದರೆ ಅಲ್ಲಿನ ಮಂಜಿನಿಂದ ಆವರಿಸಿದ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಸವಿಯಲು ಇನ್ನೂ ಉತ್ತಮ ಸಮಯ.

20-25 ಕಿ.ಮಿ. ದೂರಕ್ಕೆ ಚಾರಣ ಮಾಡಿ ಬೆಟ್ಟ- ಗುಡ್ಡ ಹತ್ತುವುದೇ ಒಂದು ಸುಂದರ ಅನುಭವ. ಇಲ್ಲಿ ಬೀಸುವ ತಂಪಾದ ಗಾಳಿ, ಸೂರ್ಯನ ಶಾಖ ಬಿಸಿಲನ್ನು ತಡೆಯುವಂತಿರುತ್ತದೆ. ಮುಂಜಾನೆ ಸೂರ್ಯೋದಯದ ಮುನ್ನ ಅಲ್ಲಿನ ಮಂಜು ಮುಸುಕಿದ ಅಥವಾ ಮಂಜಿನಿಂದ ಕೂಡಿದ ಬೆಟ್ಟ ನೋಡುವುದೇ ಆನಂದ. ಅಲ್ಲಿನ ಹಚ್ಚ ಹಸಿರಿನ ಕಣಿವೆಗಳು ಚಾರಣಿಗರನ್ನು ಕೈ ಬೀಸಿ ಕರೆಯುವಂತಿದೆ.

ಪ್ರಕೃತಿಯೊಂದಿಗೆ ಸಮಯ ಕಳೆಯಲು ಇಚ್ಛೆಸುವವರಿಗೆ ಇದೊಂದು ಇಷ್ಟವಾಗುವ ಸ್ಥಳ. ಈ ಹಸಿರ ಬೆಟ್ಟಗಳ ಸಾಲಿನಲ್ಲಿ ಫೋಟೋ, ಸೆಲ್ಫಿ ತೆಗೆದು ಸಮಯವನ್ನು ಆನಂದಿಸಬಹುದು. ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ.. 12 ವರ್ಷಗಳಿಗೊಮ್ಮೆ ಅರಳುವ ಹೂವು ಈ ಬೆಟ್ಟದಲ್ಲಿದೆ.

ಹಚ್ಚ ಹಸಿರಿನ ಪ್ರದೇಶದಲ್ಲಿ 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಎಂಬ ನೇರಳೆ ಬಣ್ಣದ ಹೂವು ಇಡೀ ಬೆಟ್ಟವನ್ನೇ ಅವರಿಸುತ್ತದೆ. ಈ ಸೌಂದರ್ಯ ಅನುಭವಿಸಲು ಆ ಹೂವು ಅರಳುವ ಸಂದರ್ಭದಲ್ಲಿ ಭೇಟಿ ನೀಡಿ. ಕಳೆದ ವರ್ಷ ನವೆಂಬರ್‌ ನಲ್ಲಿ ನೀಲಕುರುಂಜಿ ಹೂವು ಅರಳಿತ್ತು.

ಕಸಿನ್ಸ್‌ ಆರ್‌ ದಿ ಬೆಸ್ಟ್‌ ಫ್ರೆಂಡ್ಸ್‌ ಆಫ್‌ ಆವರ್‌ ಲೈಫ್ ಅನ್ನೋ ಹಾಗೆ.. ನನ್ನೆಲ್ಲಾ ಚಾರಣಗಳಿಗೆ ನನ್ನ ಕಸಿನ್ಸ್‌ ಉತ್ತಮ ಜತೆಗಾರರು. ಸಮಯ ಸಿಕ್ಕಾಗಲೆಲ್ಲಾ ಅವರೊಂದಿಗೆ ಬೆಟ್ಟ-ಗುಡ್ಡಗಳಿಗೆ ತೆರಳಿ ಸಮಯ ಕಳೆಯುವುದೇ ನನ್ನ ರಿಲ್ಯಾಕ್ಸ್‌  ಮೂಡ್‌. ಹಾಗೇ ನಿಮಗೂ ಮನಸ್ಸಿಗೆ ನೆಮ್ಮದಿ ಬೇಕಾದಾಗ ಚಾರಣಕ್ಕೆ ಹೋಗಲು ಬಯಸುವವರು ದೇವರ ಮನೆ ಬೆಟ್ಟಕ್ಕೊಂದು ಭೇಟಿ ನೀಡಿ.

ನಮ್ಮ ಈಗಿನ ಜಂಜಾಟದ ಬದುಕಿನಲ್ಲಿ ವಿಶ್ರಾಂತಿ ಪಡೆಯಲು ಜೀವನದ ಒತ್ತಡದ ನಿವಾರಿಸಲು ಇಲ್ಲಿಗೆ ಭೇಟಿ ನೀಡಿ ಪ್ರಕೃತಿ ಮಾತೆಯ ಮಡಿಲಲ್ಲಿ ಅಲ್ಲಿನ ಸೌಂದರ್ಯ ಅನುಭವಿಸುವುದು ಒಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತದೆ ಎಂಬುದು ನನ್ನ ಅಭಿಪ್ರಾಯ.

ದೇವರಮನೆ ಬೆಟ್ಟದ ಅಕ್ಕಪಕ್ಕ ಹಲವು ಪರ್ವತ ಶಿಖರ, ಬೆಟ್ಟ-ಗುಡ್ಡಗಳು, ಕಾಫಿ ತೋಟಗಳು, ಜಲಪಾತಗಳು, ಧಾರ್ಮಿಕ ಸ್ಥಳಗಳು , ಸರೋವರಗಳು, ವನ್ಯಜೀವಿ ಅಭಯಾರಣ್ಯ ಪ್ರದೇಶ, ಬಲ್ಲಳರಾಯನ ದುರ್ಗಾ ಕೋಟೆ, ರೆಸಾರ್ಟ್‌ ಮುಂತಾದ ಸ್ಥಳಗಳು ಇಲ್ಲಿವೆ. ಕುಟುಂಬ -ಗೆಳೆಯರೊಂದಿಗೆ ಸಮಯ ಕಳೆಯಲು ಉತ್ತಮ ತಾಣಗಳಲ್ಲಿ ಇದು ಒಂದು

„ ಕಾವ್ಯಶ್ರೀ,

ಮಡಂತ್ಯಾರು

 

ಟಾಪ್ ನ್ಯೂಸ್

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.